Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಚೋಳರ ರಾಜ್ಯಾಡಳಿತವೂ… ಕಾರ್ಯಕಲಾಪಗಳೂ

ನಾಗಪಟ್ಟಣದಲ್ಲಿ ಒಂದು ಬೌದ್ಧ ದೇವಾಲಯವನ್ನು ಕಟ್ಟಿಸಿ ಮತ್ತು ವೈಷ್ಣವ ಮತಕ್ಕೂ ಪ್ರೋತ್ಸಾಹವನ್ನಿತ್ತು, ಪರಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಿರುವನು. ರಾಜ್ಯಾಡಳಿತದಲ್ಲಿ ಸುಧಾರಣೆಯನ್ನು ತಂದು ಹೆಸರುವಾಸಿಯಾದನು. ಕಂದಾಯವನ್ನು ನಿರ್ಧರಿಸಲು ಭೂಮಿಯ ಸರ್ವೆ ಮಾಡಿಸಿದನಲ್ಲದೆ, ತನ್ನ ವಿಶ್ವಾಸಕ್ಕೆ ಯೋಗ್ಯರಾದ ಜನರನ್ನು ಪ್ರತಿನಿಧಿಗಳಾಗಿ ಅಲ್ಲಲ್ಲಿ ನಿಯಮಿಸಿ ಆಡಳಿತವು ಸರಿಯಾಗಿ ನಡೆಯುವಂತೆ ನೋಡಿಕೊಂಡನು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ

Read More

ಕಲ್ಲು ಕಲ್ಲಿನಲಿ… ಆನೆ ಕುದುರೆ…

ಎರಡನೇ ಪ್ರತಾಪರುದ್ರ ಯಾ ರುದ್ರದೇವ ರುದ್ರಾಂಬಳ ಮೊಮ್ಮಗನಾಗಿದ್ದು, ಆಕೆಯ ಅನಂತರ ಪಟ್ಟಕ್ಕೆ ಬಂದು ಅಕ್ಕ ಪಕ್ಕದ ದಂಗೆಗಳನ್ನು ಅಣಗಿಸಿ ಪ್ರಬಲನಾದನು. ದೆಹಲಿಯ ಸುಲ್ತಾನರು ದಕ್ಷಿಣವನ್ನು ಪ್ರವೇಶಿಸಿದುದು ಇವನ ಕಾಲದಲ್ಲೇ. ವಾರಂಗಲ್ಲಿಗೆ ಲಗ್ಗೆಯಿಟ್ಟ ಮುಸ್ಲಿಮ್ ಸೈನ್ಯವನ್ನು ಮೂರು ಬಾರಿ ಅವನು ಎದುರಿಸಬೇಕಾಯಿತು. 1309ರಲ್ಲಿ ಅಲ್ಲಾ ಉದ್ದೀನ ಖಿಲ್ಜಿಯಿಂದ ದಂಡನಾಯಕನಾಗಿ ನಿಯುಕ್ತನಾದ ಮಾಲಿಕ್ ಕಾಫಿರನು ವಾರಂಗಲ್ಲಿನ ಮೇಲೆ ಲಗ್ಗೆಯಿಟ್ಟನು. ಇದರಲ್ಲಿ ಜಯಶಾಲಿಯಾದ ಕಾಫಿರನು ನಗರವನ್ನೆಲ್ಲ ಲೂಟಿ ಮಾಡಿದನು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ಇಲ್ಲಿದೆ.

Read More

ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ

ಮಾಳವದ ಯಶೋಧರ್ಮನು ಭಾರತದಲ್ಲಿ ಹೂಣರನ್ನು ಅಣಗಿಸಲು ಪ್ರಮುಖ ಪಾತ್ರ ವಹಿಸಿದವನು. ದಿಗ್ವಿಜಯವನ್ನು ಮಾಡಿ ಬ್ರಹ್ಮಪುತ್ರಾ ನದಿಯಿಂದ ಮಹೇಂದ್ರ ಪರ್ವತದವರೆಗೂ, ಹಿಮಾಲಯದಿಂದ ಪಶ್ಚಿಮ ಸಮುದ್ರದ ತನಕವೂ ವಿಸ್ತರಿಸಿದ್ದ ರಾಜ್ಯವನ್ನು ಮಂಡಸೋರದ ರಾಜಧಾನಿಯಿಂದ ಆಳಿದನು. ಯಶೋಧರ್ಮನು ಉತ್ತಮ ಹಿಂದೂ ಅರಸನಾಗಿದ್ದು ಮನು, ಭರತ ಮೊದಲಾದವರಿಗೆ ಹೋಲಿಸಲ್ಪಟ್ಟಿದ್ದನು. ಈತನ ಮಂತ್ರಿಯಾದ ಧರ್ಮದೋಷನು ವರ್ಣಸಂಕರವಾಗದಂತೆ ಯತ್ನಿಸಿದನು. ಯಶೋಧರ್ಮನ ವಿಷಯಗಳು ಮಂಡಸೋರದ ಶಿಲಾಸ್ತಂಭದಿಂದ ತಿಳಿಯುತ್ತವೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.

Read More

ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ

ಪ್ರಾಚೀನ ಭಾರತದ ಪ್ರಸಿದ್ಧ ರಾಜರು ಮತ್ತು ರಾಜವಂಶಗಳನ್ನು ಪಟ್ಟಿ ಮಾಡಿ ಅರ್ಥೈಸಿಕೊಳ್ಳುವುದು ಒಂದು ಸವಾಲೇ ಸರಿ. ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಸವಾಲುಗಳನ್ನು ಎದುರಿಸುತ್ತ, ಪ್ರಜೆಗಳಿಗೆ ಸುವ್ಯವಸ್ಥೆಯನ್ನುಕಲ್ಪಿಸಿದ ಕತೆಗಳು ಸಾವಿರಾರು. ಈ ರಾಜವಂಶಗಳನ್ನು ಅರಿಯುವುದಕ್ಕಾಗಿ  ಆ ನಿಟ್ಟಿನಲ್ಲಿ ನಾನು ಮಾಡಿಕೊಂಡ ಒಂದು ಪಟ್ಟಿಯನ್ನು ಇಲ್ಲಿ ಕೊಟ್ಟಿರುವೆ. ಅದರ ಪ್ರಕಾರ, ವಿವರಗಳನ್ನು ಕೊಡುತ್ತ ಹೋಗುತ್ತಿದ್ದೇನೆ.  ವೈವಿಧ್ಯತೆಯ ಮಹಾಸಾಗರದತ್ತ ಹರಿದು ಬಂದ ನದಿಗಳೆಷ್ಟೋ, ನದಿಗಳು ನಡೆದು ಬಂದ ದಿಕ್ಕುಗಳೆಷ್ಟೋ.
ಕೆ.ವಿ.ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.

Read More

ಕೆ.ವಿ.‌ತಿರುಮಲೇಶ್ ಅವರ ಹೊಸ ಸರಣಿ ಆರಂಭ

ಅಳಿಲು ತಾನು ಸಂಗ್ರಹಿಸಿದ ಕಾಳುಗಳನ್ನು ಯಾರಿಗೂ ಕಾಣದಂತೆ ಬಚ್ಚಿಟ್ಟು ಎಲ್ಲಿ ಬಚ್ಚಿಟ್ಟಿದ್ದೇನೆನ್ನುವುದನ್ನು ಮರೆತ ಹಾಗೆ ಹಿರಿಯ ಬರಹಗಾರ ಕೆ.ವಿ. ತಿರುಮಲೇಶ್ ಅವರು ಇತಿಹಾಸದ ಕುರಿತು ಮಾಡಿಕೊಂಡು ಮರೆತಿದ್ದ ಟಿಪ್ಪಣಿಗಳ ಪುಸ್ತಕವೊಂದು ಈಗ ಬಹು ವರ್ಷಗಳ ನಂತರ ಸಿಕ್ಕಿದೆ. ಅವು ಭಾರತದ ರಾಜವಂಶಗಳನ್ನು ಅರಿಯುವ ನಿಟ್ಟಿನಲ್ಲಿ ಪೋಣಿಸಿಕೊಂಡ ಶತಮಾನಗಳ ಮಾಹಿತಿ. ಈ ಮಾಹಿತಿಯನ್ನು ಲೇಖನ ರೂಪದಲ್ಲಿ ಅವರು ಬರೆಯಲಿದ್ದು, ʼನನ್ನ ಹಿಸ್ಟರಿ ಪುಸ್ತಕʼ ಸರಣಿ ಲೇಖನಗಳು ಪ್ರಕಟವಾಗಲಿವೆ. ಸರಣಿಯ ಮೊದಲ ಬರಹ ಇಂದಿನ ಓದಿಗಾಗಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ