ಶಶಿ ತರೀಕೆರೆ ಕವಿತೆ: ವೈಲ್ಡ್ ಅಂಡ್ ವಿಯರ್ಡ್
ತುಟಿ ಕಿತ್ತು ಬರುವಂತೆ
ನೀನು ನನಗೆ ಮುತ್ತು ಕೊಟ್ಟೆ
ನಾನು ಪ್ರತಿ ಸಂಜೆ
ಕಂಠಮಟ್ಟ ಕುಡಿದು ಮಲಗಿದೆ
ಹೇಳಬೇಕೆಂದರೆ ನಾವಿಬ್ಬರೂ
ಸ್ವಲ್ಪ ನಿದ್ದೆಯಲ್ಲಿಯೇ ಹೆಚ್ಚು ಉಸಿರಾಡಿದೆವು
ಒಂದೇ ಚಾದರದಲ್ಲಿ ಜ್ವರದ ಕಾವು
ಅನುಭವಿಸಿ ಗಳಗಳನೆ ಅತ್ತೆವು
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
Posted by ಕೆಂಡಸಂಪಿಗೆ | Apr 25, 2022 | ದಿನದ ಕವಿತೆ |
ತುಟಿ ಕಿತ್ತು ಬರುವಂತೆ
ನೀನು ನನಗೆ ಮುತ್ತು ಕೊಟ್ಟೆ
ನಾನು ಪ್ರತಿ ಸಂಜೆ
ಕಂಠಮಟ್ಟ ಕುಡಿದು ಮಲಗಿದೆ
ಹೇಳಬೇಕೆಂದರೆ ನಾವಿಬ್ಬರೂ
ಸ್ವಲ್ಪ ನಿದ್ದೆಯಲ್ಲಿಯೇ ಹೆಚ್ಚು ಉಸಿರಾಡಿದೆವು
ಒಂದೇ ಚಾದರದಲ್ಲಿ ಜ್ವರದ ಕಾವು
ಅನುಭವಿಸಿ ಗಳಗಳನೆ ಅತ್ತೆವು
Posted by ಕೆಂಡಸಂಪಿಗೆ | Apr 24, 2022 | ಸಾಹಿತ್ಯ |
ಜಮೀಲಾಗೆ ಯಾಕೋ ಮಸೀದಿ ದಾರಿಯೇ ನೋಡುವಂತಾಗಿತ್ತು. ಮಗ ಮುನೀರ ರೋಜಾ ಬಿಡಲು ಮಸೀದಿಗೆ ಹೋಗಿದ್ದ. ಇಡೀ ದಿನ ಉಪವಾಸವಿದ್ದು ನಾಲ್ಕನೆಯ ತರಗತಿ ಓದ್ತಿದ್ದ ಮುನೀರನಿಗೆ ಅಪ್ಪ ಹಸೇನ್ ಎಂದರೆ ಪಂಚಪ್ರಾಣ. ಮದುವೆಯಾದ ವರುಷಕ್ಕೇ ಝಿಕ್ರಿಯಾಸಾಬ್ ತೋಟ ಬಿಟ್ಟು ಐಸ್ ಮಾರ್ತಾ ಹೊಸ ಜೀವನ ಶುರು ಮಾಡಿದ್ದ ಹಸೇನ್.
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಕತೆ ‘ಅಲ್ಲಾ ದೇವರು, ಅನ್ನ ದೇವರು!’
Posted by ಕೆಂಡಸಂಪಿಗೆ | Apr 21, 2022 | ದಿನದ ಕವಿತೆ |
“ಟಾರು ಬೀದಿಯ ಮೇಲೆ ಕಾರ್ಗಾಲ
ಕಣ್ತೆರೆದು ರಂಗುರಂಗಿನ ಎಲೆಯ ಬಿಚ್ಚಿದಂತೆ
ದೇವಲೋಕದ ಸೋಗೆ ಮೈದುಂಬಿ ಕುಣಿಯಿತೆ
ಅಲ್ಲಲ್ಲಿ ನವಿಲುಗರಿ ಉದುರುವಂತೆ ?”-ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ಗೋವಿಂದಮೂರ್ತಿ ದೇಸಾಯಿ ಬರೆದ ಟಾರು ಬೀದಿಯ ಮೇಲೆ ಕಾರ್ಗಾಲ ಕವನ ಇಂದಿನ ಓದಿಗಾಗಿ.
Posted by ಕೆಂಡಸಂಪಿಗೆ | Apr 21, 2022 | ದಿನದ ಪುಸ್ತಕ |
ಕನಸಿನಲ್ಲಿ ಬುದ್ಧನ ಬದುಕಿನಲ್ಲಿ ನಡೆದ ಘಟನೆ ತೆರೆದುಕೊಂಡಿತು. ಸಿದ್ಧಾರ್ಥನು ಶಾಕ್ಯರ ಸಂಘದಲ್ಲಿ ಎಂಟು ವರ್ಷಗಳ ಕಾಲ ನಿಷ್ಠಾವಂತ ಸದಸ್ಯನಾಗಿದ್ದನು. ತನ್ನ ವೈಯಕ್ತಿಕ ವಿಷಯಗಳಿಗೆ ತೋರಿಸುತ್ತಿದ್ದಷ್ಟೆ ಆಸಕ್ತಿಯನ್ನು ಅವನು ಸಂಘದ ವಿಷಯಗಳಲ್ಲೂ ತೋರಿಸುತ್ತಿದ್ದ. ಸಂಘದ ಸದಸ್ಯನಾಗಿ ಅವನ ನಡೆವಳಿಕೆಗಳು ಉಳಿದ ಸದಸ್ಯರಿಗೆ ಮಾದರಿಯಾಗಿ, ಸಂಘದ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದನು. ಅವನು ಸದಸ್ಯತ್ವ ಪಡೆದ ಎಂಟನೆಯ ವರ್ಷದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯೊಂದು ಶುದ್ಧೋಧನನ ಕುಟುಂಬದ ಪಾಲಿಗೆ ದುರಂತವಾಗಿ ಪರಿಣಮಿಸಿತು.
ಪ್ರೊ.ಎಚ್.ಟಿ. ಪೋತೆಯವರ ಹೊಸ ಕಾದಂಬರಿ “ಮಹಾಬಿಂದು” ಇಂದ ಕೆಲವು ಪುಟಗಳು
Posted by ಕೆಂಡಸಂಪಿಗೆ | Apr 19, 2022 | video of the day |
ನೀನಾಸಂ ಅರ್ಪಿಸುವ ಕಾಳಿದಾಸನ ಕೃತಿಗಳನ್ನು ಆಧರಿತ ನಾಟಕ “ಅಗಲಿದ ಅಲಕೆ”. ಪರಿಕಲ್ಪನೆ ಹಾಗೂ ನಿರ್ದೇಶನ, ಬಿ. ಆರ್. ವೆಂಕಟರಮಣ ಐತಾಳ.
ಕೃಪೆ: ಸಂಚಿ ಫೌಂಡೇಷನ್
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…
Read More