Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಅಂತೂ ಇಂತೂ ಗ್ರೆಗರಿಯವರಿಗೆ ತೀರ್ಪು ಸಿಕ್ಕಿತು

ಎಂಆರ್ ಪಿಎಲ್ ಕಂಪೆನಿಗೆ ತಮ್ಮ ಕೃಷಿ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಹೋರಾಟ ನಡೆಸಿದವರು ಗ್ರೆಗರಿ ಪತ್ರಾವೋ. ಕೊನೆಗೆ ತಮ್ಮ ಫಲವತ್ತಾದ ಕೃಷಿ ಜಮೀನನ್ನು ಬಿಟ್ಟುಕೊಡುವುದು ತೀರಾ ಅನಿವಾರ್ಯವಾದಾಗ, ಜುಜುಬಿ ಬೆಲೆಗೆ ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ಹೋರಾಟವನ್ನು ನಿರಂತರವಾಗಿ ನಡೆಸಿದವರು. ಅವರ ಹೋರಾಟದ ದೀರ್ಘ ಹಾದಿಯೊಂದಕ್ಕೆ ಈಗ ವಿರಾಮ ಬಿದ್ದಿದೆ. ಸುಪ್ರೀಂ ಕೋರ್ಟ್ ನಲ್ಲಿಅವರು ಎಂಆರ್ ಪಿಎಲ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ತೀರ್ಪು ಅವರ ಪರವಾಗಿ ಬಂದಿದೆ.ಗ್ರೆಗರಿ ಕ್ರಮಿಸಿದ ಹಾದಿಯ ಕುರಿತು ಸ್ಥೂಲವಾಗಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ನಾಳೆಗೆಂದು ತೆಗೆದಿರಿಸಿದ ಮುಷ್ಟಿ ಪೃಥುಕ

ನಾಳೆಯೆಂಬುದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಇಂದಿನ ಜೀವನವನ್ನು ದಾಟುವುದಕ್ಕಾಗಿ ಪ್ರೇರಣೆಯಾಗಿರುವುದು ಈ ʻನಾಳೆʼಗಳು ಅಲ್ಲವೇ. ಜಗತ್ತಿನ ಎಲ್ಲ ಜೀವಿಗಳೂ ನಾಳೆಗಳನ್ನು ಎಷ್ಟೊಂದು ಜತನ ಮಾಡುತ್ತವೆ. ಅದಕ್ಕಾಗಿ ಸದಾ ಶ್ರಮಿಸುತ್ತಲೇ ಇರುತ್ತವೆ. ಆದರೆ ಅದ್ಯಾಕೋ, ಈ ಜೀವಿಗಳ ಸಾಲಿನಲ್ಲಿ ಮನುಷ್ಯನ ಸ್ವಭಾವ ಮಾತ್ರ ವಿಭಿನ್ನವಾಗಿರುತ್ತವೆ. ಮನುಷ್ಯನೂ ನಾಳೆಗಳ ಬಗ್ಗೆ ಯೋಚಿಸಿದರೂ, ಅದಕ್ಕಾಗಿ ಮಾಡುವ ತಯಾರಿ ಮಾತ್ರ ತದ್ವಿರುದ್ಧವಾದುದು. ಸಂಪತ್ತನ್ನು ಜಮೆ ಮಾಡಿದಷ್ಟೂ ತಮ್ಮ ನಾಳೆಗಳು ಭದ್ರವಾಗಿರುತ್ತವೆ ಎಂದು ಭಾವಿಸುತ್ತ ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುತ್ತಾನೆ ಎಂದು ಅನಿಸುತ್ತದೆ.
ಕೋಡಿಬೆಟ್ಟು ರಾಜಲಕ್ಷ್ಮಿಬರೆದ ಲೇಖನ

Read More

ಸುಮ್ಮನಿರುವುದು ಸಾಧ್ಯವಿಲ್ಲ ಎನ್ನುವ ಮಹಾಭಾರತ ಕತೆ

ಮನುಷ್ಯರು ಒಳ್ಳೆಯ ವಿಚಾರಗಳನ್ನೇ ಆಯ್ಕೆ ಮಾಡಿ ಅದೇ ದಾರಿಯಲ್ಲಿ ನಡೆಯಲು ಸಾಯುಜ್ಯ, ಮೋಕ್ಷ ಎಂಬ ಪರಿಕಲ್ಪನೆಗಳನ್ನು ಹಿರಿಯರು ಪ್ರತಿಪಾದಿಸಿದ್ದಾರೆ. ದೇವರು ಎಂಬ ಪರಿಕಲ್ಪನೆಯೂ ಇದೇ ಮಾದರಿಯದು ಎಂದೇ ಇಟ್ಟುಕೊಳ್ಳುವುದಾರೆ, ದೇವರನ್ನು ತಲುಪಲು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಧಾನವಾಗಿ ತೋರುತ್ತದೆ. ತಪಸ್ಸು, ಅಧ್ಯಯನ ಅನುಶಾಸನದಂತಹ ವಿಧಾನಗಳು ಒಂದು ದಾರಿ. ಹಾಡು, ನೃತ್ಯ, ಚಿತ್ರ ಮುಂತಾದ ಲಲಿತಕಲೆಗಳ ಮೂಲಕ ನಡೆಯುವ ದೇವರ ಆರಾಧನೆಯು ಇನ್ನೊಂದು ದಾರಿ. ಎರಡೂ ದಾರಿಯನ್ನು ಸದೃಢಗೊಳಿಸಲು ಆಧಾರವಾಗಿ ನಿಲ್ಲುವುದು ಭಾರತ ಕತೆ. ಅದು ಸರಳವಾದ ಓದಿಗೆ ದಕ್ಕುವುದು ವಚನ ಭಾರತ ವೆಂಬ ಕೃತಿಯಲ್ಲಿ. ‘ವಚನ ಭಾರತ’ ಪುಸ್ತಕದ ಓದಿನ ನೆನಪುಗಳನ್ನು ಉಲ್ಲೇಖಿಸಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಸವಾರಿ ಹೊರಟಳು ಮಳೆ ಮಹಾರಾಜ್ಞಿ

ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ  ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.  ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಸ್ಪರ್ಧೆಗಳ ಗುಂಗಿನಲ್ಲೊಂದು ಕಥಾ ಕಾಲಕ್ಷೇಪ

ಕಾವ್ಯ, ಪ್ರಬಂಧ, ನಾಟಕ, ಪದ್ಯ, ಕಂದ ಪದ್ಯಗಳು, ಚುಟುಕು, ಸುನೀತ ಎಂದೆಲ್ಲ ಹತ್ತಾರು ಪ್ರಕಾರಗಳನ್ನು ನಾವು ಸಾಹಿತ್ಯ ಲೋಕದಲ್ಲಿ ಗುರುತಿಸಿದರೂ, ಈ ಕತೆಯೆಂಬ ಮಾಯಾವಿ ಮಾತ್ರ ಈ ಎಲ್ಲ ಪ್ರಕಾರದೊಳಗೂ, ಹೂವೊಳಗೆ ಕಂಪು ಸೇರಿದಂತೆ ವ್ಯಾಪಿಸಿಕೊಂಡುಬಿಡುತ್ತದೆ. ಕಾವ್ಯದೊಳಗೊಂದು ಕತೆಯ ಛಾಯೆಯಿರುತ್ತದೆಯಲ್ಲವೇ. ಪ್ರಸ್ತುತ ಸಾಹಿತ್ಯ ಲೋಕದ ಸ್ಪರ್ಧೆಗಳನ್ನು ತೆಗೆದುಕೊಂಡರೂ, ಕಥಾ ಸ್ಪರ್ಧೆಗಳು ಸದ್ದು ಮಾಡಿದಷ್ಟು ಇತರ ಸ್ಪರ್ಧೆಗಳು ಸದ್ದು ಮಾಡುವುದು ಅಪರೂಪ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ