Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಸಹೃದಯರ ಅಂತರಂಗವನ್ನು ಘಾಸಿಗೊಳಿಸುವ ಕ್ಷಣಗಳಿವು

ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ, ತಪ್ಪುಗಳನ್ನು ತಿದ್ದಿಕೊಳ್ಳುವ ಸುಂದರ ವಾತಾವರಣವು ಮಾಸಿ ಹೋಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಬರಹಗಾರರು ಗೊಂದಲದ ಮನಸ್ಥಿತಿಯಲ್ಲಿದ್ದಾರೆ. ನಿಜವಾಗಿಯೂ ಸಾಹಿತ್ಯ ಕೃತಿಯೊಂದರ ಉದ್ದೇಶವೇನಪ್ಪಾ ಎಂಬ ಪ್ರಶ್ನೆಯೊಂದು ಧುತ್ತನೇ ನಮ್ಮೆದುರು ನಿಂತಿರುವಂತಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಕಾರ ಶ್ರೀಧರ ಬಳಗಾರ ಅವರೊಡನೆ ಕೋಡಿಬೆಟ್ಟು ರಾಜಲಕ್ಷ್ಮಿ ನಡೆಸಿದ ಮಾತುಕತೆಯ ತುಣುಕೊಂದು ಇಲ್ಲಿದೆ.

Read More

ನೋವಿನ ಕತೆಗಳ ವೈಚಾರಿಕ ನಿರೂಪಣೆ

ವೇಶ್ಯಾವಟಿಕೆ ಎಂಬ ನೋವಿನ ಲೋಕದ ಕತೆಗಳನ್ನು ಹೇಳಿದಷ್ಟೂ ಮುಗಿಯದು. ಕಂಡಷ್ಟೂ ಮುಗಿಯದು. ಅಂತಹ ಲೋಕದಲ್ಲಿ ಒಂದಿಷ್ಟು ಸಂಚರಿಸಿ ದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿದ ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಇತ್ತೀಚೆಗೆ ಪ್ರಕಟಿಸಿದ ಪುಸ್ತಕ ‘ವೇಶ್ಯಾವಟಿಕೆಯ ಕಥೆ-ವ್ಯಥೆ’. ವೇಶ್ಯೆಯರ ಪರಿಸ್ಥಿತಿಗಳಿಗೆ ಕಾರಣವಾಗುವ ಪುರುಷವರ್ಗದೆಡೆಗೆ ಪ್ರಖರವಾದ ಸಿಟ್ಟನ್ನು ಒಡಲಿನಲ್ಲಿಟ್ಟುಕೊಂಡು ಅವರು ಈ ಪುಸ್ತಕವನ್ನು ಸಣ್ಣದೊಂದು ವಿಸ್ಮಯ ಮತ್ತು ತುಂಬಾ ಆತಂಕದೊಂದಿಗೆ ಬರೆದಿದ್ದಾರೆ. ಈ ಪುಸ್ತಕದ ಕುರಿತು ತಮ್ಮ ಅನಿಸಿಕೆಯನ್ನು ಇಲ್ಲಿಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

Read More

ನೇಯ್ಗೆಯೆಂಬ ಸುದೀರ್ಘ ನಡಿಗೆ

ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ನೇಕಾರರು ನೇಯುವ ಈ ಸೀರೆಯ ವಿನ್ಯಾಸ ಅಪರೂಪವಾದುದು. ತಿಳಿ ಬಣ್ಣದ ಮೈ ಮತ್ತು ಗಾಢ ಬಣ್ಣದ ಅಂಚುಸೆರಗಿನ ಸೀರೆಯು ಕರಾವಳಿಯ ಹವಾಮಾನಕ್ಕೆ ಕ್ಷೇಮಭಾವ ಕೊಡುವಂತಹುದು. ಪರಿಸರಕ್ಕೆ ಧಕ್ಕೆ ಮಾಡದ ಸಾವಯವ ಉಡುಪು ಮಮತಾ ರೈ ಅವರಿಗೆ ಇಷ್ಟವಾಗಿರುವುದು ಕೇವಲ ವಿನ್ಯಾಸದ ಕಾರಣದಿಂದಲ್ಲ.ಬದುಕು ಪರಿಸರಕ್ಕೆ ಹತ್ತಿರವಾಗಿರಬೇಕು ಎಂಬಅವರ ಆಶಯವೇ ಅವರ ಈ ಕಾಯಕಕ್ಕೆ ಪ್ರೇರಣೆ. ಸೀರೆಯ ಪಯಣವೊಂದರ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ತಪ್ಪು ಮಾಡುವುದಿಲ್ಲವೆಂದು ಎಷ್ಟೇ ನಿರ್ಣಯಿಸಿದರೂ…

ತಾಯಿಯ ಗರ್ಭದಲ್ಲಿರುವ ಭ್ರೂಣವೊಂದು ಹಿಂದಿನ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳನ್ನೆಲ್ಲ ನೆನಪಿಸಿಕೊಳ್ಳುತ್ತದೆ. ಮುಂದಿನ ಜನ್ಮದಲ್ಲಿ ಅಂತಹ ತಪ್ಪುಗಳನ್ನು ಖಂಡಿತಾ ಮಾಡುವುದಿಲ್ಲವೆಂದು ನಿಕ್ಕಿ ಮಾಡಿಕೊಳ್ಳುತ್ತದೆ. ಯಾವುದು ಆ ತಪ್ಪುಗಳು ಎಂದು ಸಿಂಹಾವಲೋಕನ ಮಾಡಿದರೆ -ಅವುಗಳೇ ಜೀವನದ ಹತ್ತು ಅವಸ್ಥೆಗಳು. ಗುರುಗ್ರಂಥದಲ್ಲಿರುವ ‘ಗುರುಬನಿ’ಯೊಂದನ್ನುಆಯ್ದುಕೊಂಡು ಪ್ರಸಿದ್ಧ ಭರತನಾಟ್ಯ ಕಲಾವಿದೆ ರಮಾವೈದ್ಯನಾಥನ್ ಅವರು ಅದನ್ನು ರಸಿಕವರ್ಗಕ್ಕೆ ಉಣಬಡಿಸಿದ ನೃತ್ಯರೂಪಕವೇ ಜೀವದಶಾವಸ್ಥಾ. ಈ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಲೇಖನವೊಂದು ಇಂದಿನ ಓದಿಗಾಗಿ.

Read More

ಹಾಗಾದರೆ ನಾನು ನಿಮಗೆ ಬೇಡವಾ.. ಮಳೆಯದ್ದೊಂದು ಪ್ರಶ್ನೆ

ಈ ಮಳೆಯೋ ಜೀವ ಸಂಕುಲವನ್ನು ಉಳಿಸಲೆಂದೇ ದೇವರು ಬಂದಂತೆ ಪ್ರತೀ ವರ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಬರುತ್ತದೆ. ಅದು ಕೊಡುವ ಖುಷಿಯಿಂದ ಕವನವೊಂದು ಮೊಳಕೆಯೊಡೆದರೆ ಆ ಸಾಲುಗಳನ್ನು ಯಾರೊಡನೆ ಹಂಚಿಕೊಳ್ಳಬೇಕು ಎಂದು ತಿಳಿಯದೇ ಮನಸ್ಸು ತಬ್ಬಿಬ್ಬಾಗುತ್ತದೆ. ಎಲ್ಲಿಯೂ ಹರಿದು ಹೋಗಲು ಒಂದಿಷ್ಟು ಜಾಗವಿಲ್ಲದೇ, ಬಂಧಿಯಾದಂತೆ ಚಡಪಡಿಸುವ ಮಳೆನೀರಿಗೆ ‘ಪ್ರವಾಹ’ವೆಂಬ ನಾಮಕರಣವಾಗಿದೆ. ಆದರೂ ಈ ಮಳೆಯೋ ನಿಸ್ವಾರ್ಥಿ ಪ್ರೇಮಿಯಂತೆ ನಮ್ಮನ್ನು ಹಚ್ಚಿಕೊಂಡು, ಮುದ್ದಿಸುತ್ತ ಸುಮ್ಮನೇ ಸುರಿಯುತ್ತಿದೆ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಇಂದಿನ ಓದಿಗಾಗಿ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ