Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಬಣ್ಣ, ರುಚಿ ಮತ್ತು ಪರಿಮಳ: ಮಾಲತಿ ಶಶಿಧರ್‌ ಅಂಕಣ

ಅಷ್ಟು ಹೊತ್ತು ಎರಡು ದೇಹ ಒಂದೇ ಪ್ರಾಣದಂತೆ ಕೆಲಸ ಮಾಡಿ ಮುಗಿಸಿದ ನಾವಿಬ್ಬರು ಕದ್ದ ಮಾವು ಹಂಚಿಕೊಳ್ಳುವಾಗ ಪರಮ ದ್ವೇಷಿಗಳಾಗಿಬಿಡುತ್ತಿದ್ದೆವು. ಇದ್ದ ನಾಲ್ಕು ಹಣ್ಣನ್ನು ಭಾಗ ಮಾಡಿಕೊಳ್ಳಲು ಯುದ್ಧ ನಡೆಸುತ್ತಿದ್ದೆವು. ಅವುಗಳ ಬಣ್ಣ ರುಚಿ ಪರಿಮಳಕ್ಕಾಗಿ ಕಿತ್ತಾಟ. ನಾನು ಕಷ್ಟ ಪಟ್ಟು ಕದ್ದೆ ನನಗೆ ಜಾಸ್ತಿ ಎಂದು ನಾನಂದರೆ ದೊಡ್ಡಮ್ಮನನ್ನು ಎಷ್ಟು ಕಷ್ಟ ಪಟ್ಟು ಅತ್ತ ಬರದಂತೆ ತಡೆದೆ? ನನಗೆ ಹೆಚ್ಚು ಎನ್ನುತ್ತಿದ್ದ ಅಣ್ಣ. ಹೀಗೆ ಕಿತ್ತಾಡುತ್ತಲೇ ಹೇಗೋ ತಿಂದು ಮುಗಿಸಿ ಮಾಡಿದ ಸರ್ಕಸ್ ನೆನೆಸಿಕೊಂಡು ಪಕಪಕ ನಗುತ್ತಿದ್ದೆವು.
“ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ಕೆಂಪೆಂದರೆ ಕೆಟ್ಟದ್ದೂ ಅಲ್ಲ… ಭಯವೂ ಅಲ್ಲ…: ಮಾಲತಿ ಶಶಿಧರ್‌ ಅಂಕಣ

ಆ ತರಗತಿಯಲ್ಲಿ ಬೋಧಿಸಬೇಕಾದ ಪಾಠವನ್ನು ಅಂದಿನ ಮಟ್ಟಕ್ಕೆ ಮುಂದೂಡಿ ಇಂಥ ಅದೆಷ್ಟು ಮಕ್ಕಳು ಹೀಗೆ ಹಿಂಸೆ ಅನುಭವಿಸುತ್ತಿದ್ದಾರೋ ಅನಿಸಿ ನಡೆದ ಎಲ್ಲವನ್ನೂ ಮತ್ತಷ್ಟು ನನ್ನ ಆ ದಿನಗಳ ಉದಾಹರಣೆ ಕೊಟ್ಟು, ಆ ದಿನಗಳಲ್ಲಿ ಆಗುವ ಬದಲಾವಣೆಗಳೇನು, ಹೇಗೆ ಸಿದ್ಧವಿರಬೇಕು, ಸಮಸ್ಯೆಗಳಾದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದೆಲ್ಲ ತಿಳಿಸಿ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಹೇಳಿಕೊಳ್ಳಿ ಎಂದಿದ್ದೆ. “ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

Read More

ನಿಯಂತ್ರಿಸುವ ಬುದ್ಧಿಯನ್ನು ನಿಯಂತ್ರಿಸೋಣವೇ?: ಮಾಲತಿ ಶಶಿಧರ್‌ ಅಂಕಣ

ಈಗ ಹೆಜ್ಜೆ ಹೆಜ್ಜೆಗೂ ನಿಯಂತ್ರಣ ಹೇರುತ್ತಿದ್ದ ಗಂಡನಿಲ್ಲ. ಹೆಂಡತಿಗೆ ಕಟ್ಟು ಪಾಡು ಹೇರುವವರಿಲ್ಲ, ಆಕೆ ಮಗಳ ಜೊತೆ ಶಾಶ್ವತವಾಗಿ ತನ್ನ ತವರು ಸೇರಿದ್ದಾರೆ. ಈಗ ಹೀಗೆ ಇರು ಹಾಗೆ ಇರು ಎಂದು ಹೇಳುವವರಿಲ್ಲ. ಆಕೆ ಹೇಗೆ ಬೇಕಾದರೂ ಇರಬಹುದು. ಗಂಡನಿಲ್ಲದ ನೋವಿದೆ ಆದರೀಗ ಉಸಿರುಗಟ್ಟುತ್ತಿಲ್ಲ. ಇಷ್ಟಕ್ಕೇಕೆ ಆತ ಅಷ್ಟೆಲ್ಲಾ ಹೆಂಡತಿಯನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿತ್ತು. ಆತನಿಗೆ ಒಂದು ದಿನ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಇದ್ದಕ್ಕಿದ್ದ ಹಾಗೆ ಅನಾಥನಾಗಿ ಹೊರಟು ಬಿಡಬೇಕು ಎಂಬ ಅರಿವಿದ್ದರೆ ನಿಜಕ್ಕೂ ಆತ ಹಾಗೆಲ್ಲ ಮಾಡುತ್ತಿದ್ದರ?
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”

Read More

ಅನುಬಂಧವೊಂದು ಕೊರಳ ಉರುಳಾಗುವ ಹೊತ್ತು: ಮಾಲತಿ ಶಶಿಧರ್‌ ಅಂಕಣ

ಮಳೆ ನಿಂತ ಮಾರನೇ ದಿನದ ಸ್ವರ್ಗವೀಗ ಅಜ್ಜಿಯ ಕತೆಯಲ್ಲಿ ಬರುತ್ತಿದ್ದ ನರಕದಂತೆ ಭಾಸವಾಗುತ್ತಿದೆ. ಸೂರ್ಯ ಮುಳುಗಿದ ಮೇಲೆ ಹನಿ ಬೀಳುವ ಸದ್ದಿಗೆ ಪುಳಕಗೊಳ್ಳುತ್ತಿದ್ದ ಹೃದಯ ಅಕ್ಕ ಪಕ್ಕದವರಿಗೂ ಕೇಳಿಬಿಡುವಂತೆ ಒಡೆದುಕೊಳ್ಳಲು ಶುರು ಮಾಡಿದೆ. ನಿದ್ದೆಯೇ ಇಲ್ಲದ ಅವಳಿಗೀಗ ಅಲಾರಾಂ ಅವಶ್ಯಕತೆಯಿಲ್ಲ. ಹೊರಗೆ ಕಾಲಿಟ್ಟರೆ ಮುದ ಗೊಳಿಸುತ್ತಿದ್ದ ಚಳಿ ಈಗ ಬೆನ್ನ ಮೂಳೆಯನ್ನು ಕೊರೆಯುತ್ತದೆ.
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”ಯಲ್ಲಿ ಹೊಸ ಬರಹ

Read More

ಪೆಟ್ಟಿಗೆ ಅಂಗಡಿಯಲ್ಲಿ ಭದ್ರವಾದ ನೆನಪುಗಳು: ಮಾಲತಿ ಶಶಿಧರ್ ಅಂಕಣ

ಅವರು ದೂರ ಹೋಗುತ್ತಾ ಕಣ್ಮರೆಯಾಗುತ್ತಿದ್ದ ಹಾಗೆ ನನ್ನ ಕುಚುಕು ಗೆಳತಿಯರು ಒಗ್ಗಟ್ಟಿನಿಂದ ನನಗಿಂತಲೂ ಎತ್ತರದಲ್ಲಿದ್ದ ಬಾಗಿಲು ಹತ್ತಲು ಸಹಕರಿದ್ದರು. ಅದೇನಾಯಿತೋ ಏನೋ ಅಷ್ಟರಲ್ಲೇ ಹೋದ ತಾತ ಮಗ ಗಿರಿಯಣ್ಣನ ಜೊತೆ tvs ಲೂನಾದಲ್ಲಿ ಬರುವುದನ್ನು ಕಂಡ ನನ್ನ ಮಿತ್ರದ್ರೋಹಿಗಳು ನನ್ನನ್ನೊಬ್ಬಳನ್ನೇ ಬಿಟ್ಟು ಓಡಿ ಹೋಗಿ ಪಕ್ಕದಲ್ಲೇ ಇದ್ದ ತೃಪ್ತಿ ಕ್ಯಾಂಟೀನ್ ಕಟ್ಟಡದ ಮಹಡಿ ಹತ್ತಿ ಅವಿತುಕೊಂಡು ಬಿಟ್ಟರು. ಯಾರ ಸಹಾಯವು ಇಲ್ಲದೇ ಒಳಗಿಂದ ಹತ್ತಿ ಆಚೆ ನೆಗೆಯಲು ಬಾರದೆ ಪರದಾಡುತ್ತಿದ್ದ ನನ್ನನ್ನ ತಾತ ಒಂದೇ ಹಿಡಿತದಲ್ಲಿ ಎತ್ತಿ ಆಚೆ ಹಾಕಿದ್ದರು.
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣ

Read More
  • 1
  • 2

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ