Advertisement
ಅನುಸೂಯ ಯತೀಶ್

ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು 'ಕೃತಿ ಮಂಥನ', 'ನುಡಿಸಖ್ಯ', 'ಕಾವ್ಯ ದರ್ಪಣ' ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಬದುಕಿನ ಹಡಗು ಮತ್ತೊಂದು ತೀರದೆಡೆಗೆ..

ಇನ್ನೇನು ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗುತ್ತ ಬಂದಿತ್ತು. ಕೆಲವೇ ಅಡಿಗಳಷ್ಟೇ ಕೊರೆಯುವ ಕೆಲಸ ಬಾಕಿ ಉಳಿದಿತ್ತು. ಸುರಂಗ ಮುಂದೆ ಸಾಗಿದಂತೆ ಮರದ ದೊಡ್ಡ ದಿಮ್ಮಿಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ಮರೆತು ಹೋಗಿತ್ತು. ಆ ವಿಷಯ ನೆನಪಾಗುತ್ತಲೇ, ಓಡಿ ಓಡಿ ಎಂದು ಕಿರುಚಿದ. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಇದಿನಬ್ಬನಿಗೆ ಓಡಲಾಗಲಿಲ್ಲ‌. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನರು ಆ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಎಂಟನೆಯ  ಕಂತು.

Read More

ಹಸಿವಿನ ವಿಕಾರದ ಮುಂದೆ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿ?

ಕರೀಂ ಸಾಹೇಬರ ಮನೆಯಿಂದ ಇದಿನಬ್ಬ ಓಡಿ ಬಂದಿದ್ದ. ಓಡಿ ಓಡಿ ದಣಿವಾಗಿ ಒಂದೆಡೆ ಕುಳಿತಾಗಲೇ ಅವನಿಗೆ ಹಸಿವಿನ ನೆನಪಾಯಿತು. ಜೊತೆಗೆ ಮನೆಯವರ ನೆನಪೂ ಕಾಡತೊಡಗಿತು. ಭಯಂಕರ ಕ್ಷಾಮವು ಆ ಊರನ್ನು ಅಡರಿಕೊಂಡಿದ್ದರಿಂದ, ತಿನ್ನಲು, ಕುಡಿಯಲು ಏನೂ ಸಿಗುತ್ತಿರಲಿಲ್ಲ. ಹಸಿವಿನ ಹಿಂಸೆ ರುದ್ರನರ್ತನ ಮಾಡುತ್ತಿತ್ತು. ಇದಿನಬ್ಬ ಮೊದಲ ಬಾರಿಗೆ ತನ್ನನ್ನೇ ತಾನು ಮಾರಿಕೊಳ್ಳಲು ನಿರ್ಧರಿಸಿದ. ಮತ್ತೊಂದು ಮಾಲೀಕತ್ವವು ಇದಿನಬ್ಬನನ್ನು ಎಲ್ಲಿಗೆ ಕರೆದೊಯ್ದಿತು ?
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಏಳನೇ ಕಂತು ಇಲ್ಲಿದೆ.

Read More

ಚಂದ್ರನ ಬೆಳಕು ಜೀರುಂಡೆಯ ಜೋಗುಳದಲ್ಲೊಂದು ನಿದ್ದೆ

ಎರಡ್ಮೂರು ಬಾರಿ ಆ ಶಬ್ದ ಆವರ್ತನೆಯಾಯಿತು. ಹಿಂದಿರುಗಿ ನೋಡಿದ. ಮತ್ತೆ “ಶ್ಶ್-ಶ್ಶ್” ಶಬ್ದ ಮತ್ತೆ ಕೇಳುತ್ತಿದೆ. ಇದಿನಬ್ಬನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇನ್ನೇನು ಮಾಡುವುದೆಂದು ತೋಚದೆ ಕತ್ತಲಲ್ಲಿ ಬೆಕ್ಕಿನಂತೆ ಮೆಲ್ಲಗೆ ಮುಂದಡಿಟ್ಟ. ಆಗ ಕಂಡ ದೃಶ್ಯ ಎಂಥವನ ಎದೆಯಲ್ಲೂ ನಡುಕ ಹುಟ್ಟಿಸುವಷ್ಟು ಭಯಾನಕವಾಗಿತ್ತು. ಹೆಬ್ಬಾವಿನ ಗಾತ್ರದ ಕೊಳಕು ಮಂಡಲ ಹಾವೊಂದು ಲಾಟೀನು ಬೆಳಕಿಗೆ ಬುಸುಗುಡುತ್ತಿದೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಾದಂಬರಿಯ ಆರನೇ ಕಂತು.

Read More

ನೀಲಕಡಲನು ಸೀಳಿ ತೇಲುತ ಸಾಗಿದ ಪಯಣ

ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು. ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ ದುಃಖ ಉಮ್ಮಳಿಸಿ ಬಂತು. ದುಃಖದಲ್ಲಿ ಅವನು ತಲೆಯಲ್ಲಿ ಹಾದು ಹೋದ ಯೋಚನೆಗಳೇನು?”

Read More

ಡರ್ಬನ್ ಇದಿನಬ್ಬ: ಗುಲಾಮಗಿರಿಯ ಗಾಡಿ ಏರಿ..

ಆಗಂತುಕ ಗಾಡಿಯೆಡೆಗೆ ಸಾಗಿದ. ಗಾಡಿ ಚಾಲಕ ಮತ್ತು ಆಗಂತುಕ ಮಾತನಾಡಿದರು. ಇದಿನಬ್ಬನಿಗೆ ಗಾಡಿಯೇರಲು ಆಗಂತುಕ ಹೇಳಿದ. ಎತ್ತಿನ ಗಾಡಿ ಆಗಂತುಕ ಸೂಚಿಸಿದ ಒಂದು ದಾರಿ ಹಿಡಿದು ‘ಗಡ- ಗಡ’ ಸದ್ದನ್ನು ಮಾಡುತ್ತಾ ಮುಂದೆ ಸಾಗಿತು. ಮೈಲುಗಳು ಮೈಲುಗಳನ್ನು ದಾಟಿ ಆ ಧೂಳಿನಿಂದಾವೃತಗೊಂಡ ಮಣ್ಣಿನ ರಸ್ತೆಯಲ್ಲಿ ಕುಳಿತಿದ್ದವರನ್ನೆಲ್ಲಾ ಅಲ್ಲಾಡಿಸಿ ಎಸೆದೆಸೆದು ಗಾಡಿ ಬಹಳಷ್ಟು ದೂರ ಸಾಗಿತು. -ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ನಾಲ್ಕನೇ ಕಂತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ