Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಕ್ಲಬ್ ಹೌಸ್ ಮಾತುಕಥೆಯಲ್ಲಿ ಕಂಡ ನಟರ ಎರಡು ಬಗೆ…

ಹೊಸತರಲ್ಲಿ ಎಲ್ಲ ಚೆಂದವೇ. ಒಂದು ವಾರ ಕಳೆಯುವಷ್ಟರಲ್ಲಿ ಈ ಕೇಳ್ಮೆ ಕೂಡ ಯಾಕೊ ಮನೊಟನಸ್ ಆಗುತ್ತಿದೆ ಅನಿಸಿತು. ಕೇಳ್ಮೆಯ ಮೂಲಕ ವಿಚಾರ ಕ್ರೋಢೀಕರಣ ಸರಿ. ಓದುವ ತ್ರಾಸಿಗಿಂತ ಕೇಳ್ಮೆ ಸುಲಭ. ಇದೂ ಸರಿ. ಆದರೆ ಕೇಳಿಸಿಕೊಂಡದ್ದನ್ನು ಒಂದು ಕಡೆ ಅಕ್ಷರ ಮತ್ತು ಪದಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಬೇಕಾಗುವಾಗ ವಾಕ್ಯರಚನೆ ಬಿಗಿಬಂಧದಲ್ಲಿ ರೂಪುತಳೆಯಬೇಕಾದರೆ ಓದಿನ ಸಂಗ ಅಗತ್ಯ ಬೇಕು ಎಂಬ ಅರಿವು ಜಾಗೃತವಾಯಿತು.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಹುಚ್ಚಾಟಗಳಿಗೆ ನಗುವೇ ಪ್ರತಿಭಟನೆ ಅಸ್ತ್ರ!

ಗಂಭೀರವಾಗಿ ಚರ್ಚಿಸುವವರು ಎದುರಾಗಿದ್ದರೆ ನಾನೂ ಗಂಭೀರವಾಗೇ ಚರ್ಚೆಗೆ ತೊಡಗುತ್ತಿದ್ದೆನೇನೊ. ಆದರೆ ಯಾಕೋ ಅಂಥ ಸಂದರ್ಭಗಳು ನ್ಯಾಷನಲ್ ಕಾಲೇಜಿನಲ್ಲಿದ್ದಾಗ ನಿರ್ಮಾಣ ಆಗಲೇ ಇಲ್ಲ. ನಗುವಿನ ಕಚಗುಳಿಗೆ ನಾನೂ ನಗುತ್ತ ಹಾಯಾಗಿದ್ದ ಕಾಲ ಅದು. ಇದು ಎಂಥ ಎಫೆಕ್ಟ್ ಉಂಟುಮಾಡಿತ್ತು ಅಂದರೆ ಕ್ಲಾಸಲ್ಲಿ ಪಾಠ ಮಾಡುವಾಗ ಸೀರಿಯಸ್ನೆಸ್ ಬಿಟ್ಟು ನಗಿಸುತ್ತ ಅರ್ಥೈಸಬೇಕು..”

Read More

ತಿರುಗಿ ಬಾರದ ಸಂಚಾರಿಯ ಕುರಿತು

ಏನೇ ಆದರೂ ಒಂದು ವಿಚಾರವಂತೂ ಸ್ಪಷ್ಟ ಮತ್ತು ವ್ಯಕ್ತ. ವಿಜಯ್ ಅವರ ಗೆಳೆಯರೊಬ್ಬರು ವಿಜಯ್ ಅವರನ್ನು ‘ಮಗು’ ಅಂತ ಕರೆದಾಗ ಅದು ನನಗೆ ಉತ್ಪ್ರೇಕ್ಷೆ ಅನಿಸಿತ್ತು. ಆದರೆ ವಿಜಯ್ ಫೋನಲ್ಲಿ ನನ್ನ ದೀರ್ಘ ಪ್ರಶ್ನೆಗಳಿಗೆ ನಗುತ್ತಿದ್ದ ಬಗೆ ನೆನೆಸಿಕೊಂಡರೆ ಮಗುವಿನ ನಗೆಯ ಶಬ್ದವೇ ತಾಳೆಯಾಗುತ್ತಿದೆ. ನಾನು ಬಿಲ್ಲು ಬಾಣ ಕೆಳಗಿರಿಸಿ ನಮ್ರತೆಯಿಂದ ಕೈ ಮುಗಿಯುತ್ತಿದ್ದೇನೆ.
ಅಗಲಿದ ಮೇರು ನಟ ಸಂಚಾರಿ ವಿಜಯ್ ಕುರಿತು..

Read More

‘ನಂದು ಹ್ಯೂಮನಿಸಂ… ನಾನು ಎಲ್ರಿಗೂ ಕಾಫಿ ಕೊಡ್ಸಿ, ಕುಡೀರಿ ಅಂತೀನಿ…’

“ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು.
ಎನ್.ಸಿ. ಮಹೇಶ್‌ ಬರೆದ ‘ರಂಗ ವಠಾರ’ ಅಂಕಣ

Read More

ಪರಿಹಾರವೆಂಬ ‘ಗಾಡೊ’; ಪಿಜ್ಜಾ ಮತ್ತು ಬಂಗಾಲಿ ಸ್ವೀಟ್ಸ್

“ನ್ಯೂಯಾರ್ಕ್ ಡ್ರಾಮಾ ಕ್ರಿಟಿಕ್ಸ್ ಸರ್ಕಲ್ ನವರು ‘ಲಾಂಗ್ ಡೇಸ್ ಜರ್ನಿ ಇನ್‌ಟು ನೈಟ್..’ ನಾಟಕವನ್ನ ಬೆಸ್ಟ್ ಪ್ಲೇ ಅಂತ ತೀರ್ಪು ಕೊಟ್ಟರು. ಬೆಸ್ಟ್ ಫಾರಿನ್ ಪ್ಲೇ ಆಗಿ ‘ವಾಲ್ಟ್ಸ್ ಆಫ್ ದಿ ಟೊರಿಯಾಡೋರ್ಸ್’ ಆರಿಸಿದರು. ಮೂರು ಇತರ ಫಾರಿನ್ ನಾಟಕಗಳಿಗೆ ಅವರ ಓಟ್ ನಮೂದಿಸಿದ್ದರು. ಆದರೆ ‘ವೇಯ್ಟಿಂಗ್ ಫಾರ್ ದಿ ಗಾಡೋ’ ಗೆ ಒಂದೇ ಒಂದು ಓಟ್ ದಕ್ಕಿರಲಿಲ್ಲ. ಇದು ನಿಜವಾದ ಅಬ್ಸರ್ಡಿಟಿ. ಹಾಗೇ ಆಯಾ ಘಟ್ಟದಲ್ಲಿ ನಾಟಕಕ್ಕೆ…”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ