Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಕರುಣಾಳು ಬಾ ಇರುಳೇ

ಈಗ ಹಗಲಿನಲ್ಲಿ ಮತ್ತು ರಾತ್ರಿ ಕೂಡಾ ಜನನಿಬಿಡ ಪೇಟೆಯ ಮಧ್ಯೆ, ಝಗಮಗಿಸುವ ಕಾಂಕ್ರೀಟ್ ರಂಗಸ್ಥಳದಲ್ಲಿ ನಡೆಯುವ ಆಟಗಳು ಅಂಥಾ ತೀವ್ರ ಅನುಭವದಿಂದ ರೈಸುವುದೇ ಇಲ್ಲ. ಕತ್ತಲು ಮತ್ತು ಕಾಡುಮೇಡುಗಳ ಹಿನ್ನೆಲೆಯೇ ಯಕ್ಷಗಾನ, ಭೂತಕೋಲ, ನಾಗಮಂಡಲ ಮುಂತಾದವುಗಳಿಗೆ ಸೊಬಗಿನ ಮುಖವೊಂದನ್ನು ಒದಗಿಸುತ್ತದೆ. ಯಕ್ಷಗಾನಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನ ದಾರಿಯಲ್ಲಿ ಸೂಡಿ ಬೀಸುತ್ತಾ, ಸುತ್ತಲೂ ಇರಬಹುದಾದ ಹಲವು ಜೀವಾದಿಗಳಿಗೆ ಹೆದರಿಸುವಂತೆ (ಅಥವಾ ತಾವೇ ಹೆದರಿ) ಗಟ್ಟಿ ಗಂಟಲಲ್ಲಿ ಹರಟುತ್ತಾ ಹಳ್ಳಿಗರು ನಡೆದುಹೋಗುವ ಹೊತ್ತು ರಸಗಳಿಗೆ. ವಿಜಯಶ್ರೀ ಹಾಲಾಡಿ ಬರಹ

Read More

ಸೀರೆ ಎಂಬ ಮಾಯಾವಿನಿ

ಸೀರೆ ಎಂಬ ಈ ವಿಚಿತ್ರ. ವಿಶಿಷ್ಟ ಉಡುಪು ಯಾಕೆ ಮತ್ತು ಹೇಗೆ ರೂಪು ತಳೆದಿರಬಹುದು ಎಂದು ಯೋಚಿಸುತ್ತ ಹೋದ ಹಾಗೂ ಇದು ಪುರುಷ ಪ್ರಧಾನ ವ್ಯವಸ್ಥೆಯ ರಾಜಕಾರಣದ ಒಂದು ಭಾಗವಾಗಿ ಬೆಳೆದಿದೆ ಅನ್ನಿಸಿದೆ. ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ನಮ್ಮ ದೇಶದ ಕೆಲಭಾಗಗಳ ಮಹಿಳೆಗೆ ಸೀರೆ ಉಡುವುದನ್ನು ಕಡ್ಡಾಯ ಮಾಡಲಾಗಿದೆ! ಕೆಲವು ಪ್ರದೇಶಗಳಲ್ಲಿ ಸೀರೆಯ ಸೆರಗನ್ನು ತಲೆಗೆ ಹೊದೆಯುವುದೂ ಕಡ್ಡಾಯ. ವಿಜಯಶ್ರೀ ಹಾಲಾಡಿ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

“ಅವನಿಗೂ ಮನೆ ಮಡದಿ
ಮಕ್ಕಳು ಪ್ರೀತಿಯ ನಾಯಿ
ಗುಲಾಬಿ ತೋಟ- ಪ್ರೇಯಸಿ
ಇಷ್ಟದ ಜಾಗಗಳು ಇರಬಹುದೆ
ಅಥವಾ
ಯಂತ್ರಮಾನವನಂತೆ….?!”- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

Read More

ಪ್ರಾಣಿ ಪ್ರಪಂಚದ ತರ್ಕ ಮೀರಿದ ಕತೆಗಳು

ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಜಿರಳೆಯನ್ನೂ ಹಿಡಿಯಲಾರ! ಪ್ರಾಣಿಪ್ರಪಂಚದ ಲವಲವಿಕೆಯ ಕತೆಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ. 

Read More

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

“ಬರುವವರು ಹೋದವರು
ಅಳುವವರು ನಗುವವರು
ಕಾಲೆಳೆವವರು ಕತ್ತುಸೀಳುವವರು
ನರಕದವರು ಸ್ವರ್ಗದವರು
ನೆಗೆದುಬಿದ್ದಳೆಂದು ಖುಷಿಪಡುವಷ್ಟು
ನಿದ್ರಿಸಿಬಿಡಬೇಕಿತ್ತು”- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ