Advertisement
ಅನುಸೂಯ ಯತೀಶ್

ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು 'ಕೃತಿ ಮಂಥನ', 'ನುಡಿಸಖ್ಯ', 'ಕಾವ್ಯ ದರ್ಪಣ' ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಬ್ರಿಸ್ಬೇನ್ – ಬೆಂಗಳೂರು ಕೊಂಡಿ ಕಥೆಗಳು: ವಿನತೆ ಶರ್ಮ ಅಂಕಣ

ಇಲ್ಲಿ ಕಾಣುವುದು ಹಳತೊಂದು ಸಮಾಜದ ಹೆಗ್ಗುರುತಾದ ಕಸುಬುಗಾರಿಕೆಗಳ ಮುಂದುವರಿಕೆ. ಇಪ್ಪತ್ತೊಂದನೇ ಶತಮಾನದ ಮಾಲ್, ಸೂಪರ್ ಮಾರ್ಕೆಟ್ ಮತ್ತು ಮೆಟ್ರೋಗಳ ಪ್ರಪಂಚದಲ್ಲಿ ಐಟಿ ಮತ್ತು ಗ್ಲೋಬಲ್ ಕಾರ್ಪೊರೇಟ್ ಪೈಪೋಟಿಗಳ ನಡುವೆ ಬದುಕುತ್ತಾ ಇನ್ನೂ ಕಂಗೊಳಿಸುತ್ತಿರುವ ಅಂಕುಡೊಂಕು ಪೇಟೆ ಬೀದಿಗಳಲ್ಲಿ ಕಾರ್ಯತತ್ಪರರಾಗಿರುವ ಸಾವಿರಾರು ಕಸುಬುದಾರರನ್ನು ನೋಡಿದರೆ ಕ್ಯಾಪಿಟಲಿಸ್ಟ್ ಪ್ರಪಂಚದ ಟೊಳ್ಳು, ಭ್ರಮೆ ಮನಸ್ಸಿಗೆ ತಟ್ಟುತ್ತದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಹಣದುಬ್ಬರ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಕಥೆಗಳು: ವಿನತೆ ಶರ್ಮ ಅಂಕಣ

ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಸ್ಯ ನೆಡುವವರ ಸಂತಸದ ಘಳಿಗೆಗಳು: ವಿನತೆ ಶರ್ಮ ಅಂಕಣ

ಚಕ್ರಮುನಿ ಸೊಪ್ಪಿನ ಗಿಡ ಖರೀದಿಗಿದ್ದದ್ದು ನೋಡಿ ನನ್ನ ಕಣ್ಣರಳಿತು! ಬೆಂಗಳೂರು, ಮೈಸೂರಿನಲ್ಲಿ ಈ ಚಕ್ರಮುನಿ ಎಲೆಗಳನ್ನು ತಿನ್ನುವ ಅಭ್ಯಾಸವಿತ್ತು. ಬ್ರಿಸ್ಬೇನ್ನಿನಲ್ಲಿ ಅಪರೂಪಕ್ಕೆ ವಾರಾಂತ್ಯ ತರಕಾರಿ-ಹಣ್ಣು ಮಾರ್ಕೆಟ್ಟಿನಲ್ಲಿ ವಿಯೆಟ್ನಮೀಸ್ ಮಾರಾಟಗಾರರು ತರುತ್ತಿದ್ದ ಚಕ್ರಮುನಿ ಸೊಪ್ಪನ್ನು ಕಂಡು ಸಂಭ್ರಮಿಸಿದ್ದೆ. ಅದನ್ನು ಕೊಂಡು ಅದರ ಕೊಂಬೆಗಳನ್ನು ನೆಟ್ಟು ಎರಡು ಬಾರಿ ಇದನ್ನು ಬೆಳೆಯಲು ಪ್ರಯತ್ನಿಸಿ ಸೋತಿದ್ದೆ. ಜೆರ್ರಿ ಅವರ ಸ್ವಾವಲಂಬಿ ಕೈತೋಟದಲ್ಲಿ ಚೆನ್ನಾಗಿ ಬೆಳೆದಿದ್ದ ಗಿಡವನ್ನು ನೋಡಿ ಸಂತೋಷವಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೇಂದ್ರೀಯ ಬಜೆಟ್‌ನ ಉಪಕಥೆಗಳು: ಡಾ. ವಿನತೆ ಶರ್ಮ ಅಂಕಣ

ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಸಂಗೀತ-ನೃತ್ಯ ರೂಪಕದೊಳಗೆ ಎಲ್ಲರಿಗೂ ಸಲ್ಲುವ ಅಮೆರಿಕೆಯ

ಹೊಸ ದೇಶವನ್ನು ರೂಪಿಸಲು ಹೆಣಗಾಡುತ್ತಿದ್ದ ತನ್ನ ನಾಯಕ ಜಾರ್ಜ್ ವಾಷಿಂಗ್ಟನ್ ಅವರಿಗೆ ತೋಳ್ಬಲ ಕೊಟ್ಟು ರಾಜಕೀಯದಲ್ಲಿನ ಭುಜಬಲನಾದ. ಹೊಸ ಅಮೆರಿಕಾದ ಮೊಟ್ಟಮೊದಲ ಅಧ್ಯಕ್ಷರಾದ ವಾಷಿಂಗ್ಟನ್ ಅವರ ಸರಕಾರದಲ್ಲಿ ಪ್ರಮುಖ ಪದವಿಗಳನ್ನು ನಿರ್ವಹಿಸುತ್ತಾ ತನ್ನನ್ನು ತಾನೇ ದೇಶೀಯ ಮಟ್ಟದಲ್ಲಿ ಒಬ್ಬ ನಂಬಿಕೆಯ ರಾಜಕಾರಣಿ, ರಾಜನೀತಿ ತಜ್ಞನಾಗಿ ರೂಪಿಸಿಕೊಂಡ ಹ್ಯಾಮಿಲ್ಟನ್ ತನ್ನ ಅಲ್ಪಾಯಸ್ಸಿನ ಕಾಲದಲ್ಲಿ ಅಮೆರಿಕಾವನ್ನು ಒಂದು ಸುಸಂಸ್ಥಿತ ದೇಶವನ್ನಾಗಿ ರೂಪಿಸಲು ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ