Advertisement

Category: ಅಂಕಣ

ಯಕ್ಷಗಾನವೂ ಜಾನಪದವೂ ಶಾಸ್ತ್ರೀಯವೂ

ಮೀಮಾಂಸೆಯ ಕ್ಷೇತ್ರ ‘ಶಾಸ್ತ್ರೀಯ’ ಕಲೆಗಳ ಸಾಮಾಜಿಕತೆಯನ್ನೂ ತೋರಿಸಿದೆ. ವೈಯಕ್ತಿಕತೆಯ ಹುಸಿಕಲ್ಪನೆಯನ್ನು ಬಲಪಡಿಸುವುದು, ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಇತರೆ ಕಲೆಗಳಿಂದ ಬೇರ್ಪಡಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ಅದರ ಕೆಲಸವೇ. ‘ಜಾನಪದ’ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಾಗಿ ನೋಡುವುದು, ‘ಶಾಸ್ತ್ರೀಯ’ವನ್ನು ‘ಶುದ್ಧ ಸೌಂದರ್ಯದ’ ಪರಿಕಲ್ಪನೆಯಲ್ಲಿ ಮಾತ್ರ ನೋಡುವುದು ಕಲಾ ಅಧ್ಯಯನದ ಒಂದು ಮಿತಿಯೇ ಹೌದು. -ಕೃತಿ ಆರ್ ಪುರಪ್ಪೇಮನೆ ಬರಹ

Read More

ಕಂಬಾರರ ಕಾವ್ಯ: ಪರಂಪರೆಯ ಸಮೃದ್ಧಿ ಮತ್ತು ಆಧುನಿಕತೆಯ ಬರಡುತನ

ಕಾಲದೇಶಗಳನ್ನು ಅಖಂಡವಾಗಿ ಗ್ರಹಿಸುವ ಮನೋಧರ್ಮದಿಂದಲೇ ಕಂಬಾರರ ಬರಹದಲ್ಲಿ ಸಾಮುದಾಯಿಕ ಅನುಭವಗಳು ಸಮೃದ್ಧವಾಗಿವೆ ಮೇಲ್ನೋಟಕ್ಕೆ ನವ್ಯ ಕಾವ್ಯದಿಂದ ಬಹಳ ಭಿನ್ನವಾಗಿ ಕಾಣುವ ಕಂಬಾರರ ಕಾವ್ಯ ಆಳದಲ್ಲಿ ನವ್ಯಕಾವ್ಯದ ಪ್ರಮುಖ ಕಾಳಜಿಗಳನ್ನು ಇತ್ತೀಚಿನವರೆಗೆಯೂ ಪೂರ್ಣವಾಗಿ ಬಿಟ್ಟುಕೊಟ್ಟಂತೆ ಕಾಣುವುದಿಲ್ಲ. ಆದರೆ ನವ್ಯಕಾವ್ಯವು ಹುಡುಕಾಟದಲ್ಲಿದ್ದ ಅಸ್ತಿತ್ವದ ಪ್ರಶ್ನೆಗಳು, ವ್ಯಕ್ತಿತ್ವದ ಒಳಗಿನ ಬಿರುಕುಗಳನ್ನು ಸಮುದಾಯಗಳ, ಜನಪದ ನಂಬಿಕೆಗಳ ವಿಶಾಲಭಿತ್ತಿಯಲ್ಲಿ ಪರೀಕ್ಷಿಸಲು ತೊಡಗಿದ್ದರಿಂದ ಕಂಬಾರರ ಕಾವ್ಯಕ್ಕೆ ದೊಡ್ಡ ಹರಹು ಒದಗಿಬಂದಿದೆ. ಎಸ್. ಸಿರಾಜ್ ಅಹಮದ್ ಅಂಕಣ..

Read More

ಜೀವನದ ʼರಂಗ ನೇಪಥ್ಯʼದಿಂದ ಮರೆಯಾದ ಗುಡಿಹಳ್ಳಿ

ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿ ಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿ ಬಿಡಬಹುದು ಎಂಬ ಅಂದಾಜೂ ಇರಲಿಲ್ಲ. ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ಕವಿಶೈಲದ ಹುಲಿಯೂ ದೂರದ ಕುದುರೆಮುಖವೂ

ಭಯವನ್ನು ಅನಾಮತ್ತಾಗಿ ಎತ್ತಿ ಬೆನ್ನ ಹಿಂದಕ್ಕೆ ಬಿಸಾಡಿ, ಕವಿಶೈಲದ ಕಲ್ಲುಬೆಂಚುಗಳ ಬಳಿ ನಿಂತು ಕಣಿವೆಯ ಕಡೆಗೆ ಕಣ್ಣು ಹಾಯಿಸಿದರೆ, ಅಸ್ಪಷ್ಟ ಬೆಳಕುಗಳಲ್ಲಿ ಕಂಡೂ ಕಾಣದಂತಿದ್ದ ದಟ್ಟ ಕಾಡು. ಬೆಳಗ್ಗೆ ಕಂಡಿದ್ದ ನೋಟದ ಅಂದಾಜಿನ ಮೇರೆಗೆ ಮೆಲ್ಲಗೆ ಗೆರೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತ ಹೋದಂತೆ ರೋಮಾಂಚನ. ಅಷ್ಟೊಂದು ಅಗಾಧ ಕಾಡನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವುದೊಂದು ಅದ್ಭುತ ಪುಳಕ. ನಿಮ್ಮ ಕಂಗಳು ಬರೀ ಕಂಗಳಾಗಿಯಷ್ಟೇ ಉಳಿಯದಂಥ ಜಾದೂ ಅದು.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ

Read More

ಕನಸಿಗಿದೆ ಘನತೆ ಎನ್ನುತ ಕಾಡುವ ವಸಂತ

ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ