Advertisement

Category: ದಿನದ ಅಗ್ರ ಬರಹ

ಹೊಸಕಾವ್ಯದ ಗುರು ಗೋಪಾಲಕೃಷ್ಣ ಅಡಿಗ

1955 ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದಲ್ಲಿ ಗುರುಸಮಾನರಾಗಿ ಸ್ವೀಕರಿಸಲ್ಪಟ್ಟರು. ಹೊಸ ಪೀಳಿಗೆಯ ಸಾಹಿತಿಗಳು ಅವರ ಪ್ರಭಾವಕ್ಕೆ ಒಳಗಾದರು. ಅಡಿಗರ ಕಾವ್ಯವನ್ನು ಗಮನಿಸುವಾಗ ಅವರು ನವೋದಯ, ಪ್ರಗತಿಶೀಲ ಮತ್ತು ನವ್ಯ – ಈ ಮೂರೂ ಮಾರ್ಗಗಳಿಗೆ ಸೇರುವ ಕವಿತೆಗಳನ್ನು ಬರೆದು ಬೆಳೆದವರು ಎನ್ನುವುದು ತಿಳಿಯುತ್ತದೆ. ತಮ್ಮ ಹಿಂದಿನ ಕಾವ್ಯಮಾರ್ಗಗಳನ್ನು ಅರೆದು ಕುಡಿದವರಾದ ಕಾರಣ ಅಡಿಗರು ಅವುಗಳ ಮಿತಿಯನ್ನು ಹೇಳಿದಾಗ ಅದಕ್ಕೊಂದು ಅಧಿಕೃತತೆ ಪ್ರಾಪ್ತವಾಯಿತು ಮತ್ತು ಕವಿಗಳು ಅವರನ್ನು ಅನುಸರಿಸಿದರು. ಕರಾವಳಿಯ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ಹೊಸಕಾವ್ಯದ ಗುರು ಮೊಗೇರಿ ಗೋಪಾಲಕೃಷ್ಣ ಅಡಿಗರ ಕುರಿತು ಬರೆದಿದ್ದಾರೆ.

Read More

ಜಂತೆಯಲ್ಲಿದ್ದ ಕೈಚೀಲದಲ್ಲಿ ಪೋಲಿ ಪುಸ್ತಕಗಳು

ಪಿಯುಸಿ ಓದಲು ತುಮಕೂರಿಗೆ ಹೊರಟಾಗ ಹಲವು ಬದಲಾವಣೆಗಳಾದವು.  ಹೈಸ್ಕೂಲ್ ಹಾಸ್ಟೆಲ್‌ವರೆಗೆ ಕಡ್ಡಾಯವಾಗಿದ್ದ ‘ಟ್ರಂಕು ತಟ್ಟೆ’ ಜಾಗದಲ್ಲಿ ಈಗ ಸೂಟ್‌ಕೇಸ್ ಬಂತು. ಆ ವರ್ಷದ ಮಾವಿನ ಮರದ ಫಸಲಿನಲ್ಲಿ ಅಪ್ಪ ಮೊದಲ ಬಾರಿಗೆ ಕಾಲೇಜಿಗೆ ಹೋಗುವ ಮಗ ಎಂದು ಎರಡು ಜೊತೆ ಹೊಸ ಬಟ್ಟೆ ಕೊಡಿಸಿತು. ಕಾಲೇಜು ಪ್ರವೇಶ ಮಾಡಿದ್ದಕ್ಕೆ ಪ್ರಮೋಷನ್ ಎಂಬಂತೆ ಮೊದಲ ಬಾರಿಗೆ ಚಿ.ನಾ.ಹಳ್ಳಿಯ ಗೋಪಾಲ ಶೆಟ್ಟಿ ಅಂಗಡಿಗೆ ಕರೆದೊಯ್ದು ಎರಡೆರಡು ಡ್ರಾಯರ್, ಬನಿಯನ್ ಕೊಡಿಸಿತು. ಅವೆಲ್ಲವನ್ನು ಹೊಸ ಸೂಟ್ ಕೇಸ್‌ಗೆ ತುಂಬಿ ಜೋಪಾನ ಎಂದು ಹೇಳಿ ಅಪ್ಪ ಅಮ್ಮ ನನ್ನನ್ನ ಬೀಳ್ಕೊಟ್ಟರು. 
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹದಿಮೂರನೆಯ ಕಂತು.

Read More

ಗುಮ್ಮನ ಧ್ವನಿ ಕೇಳುವ ಆಸೆಯಿಂದ…

ನಮ್ಮ ಮನೆ ಹತ್ತಿರದ ಕಾಡುಗಳಲ್ಲಿ ಅನೇಕ ಗುಮ್ಮಗಳಿದ್ದವು. ರಾತ್ರಿಯಾದೊಡನೆ ಮೈನವಿರೇಳಿಸುವ ಅವುಗಳ ಕೂಗು ಆರಂಭವಾಗುತ್ತಿತ್ತು. ಒಂದು ಗುಮ್ಮ ‘ಊಂಹೂಂ’ ಎಂದರೆ ಇನ್ನೊಂದು ಗುಮ್ಮ ‘ಊಂಹೂಂಹೂಂ’ ಎಂದು ಉತ್ತರಿಸುತ್ತಿತ್ತು. ಈಗ ಎಣಿಸಿಕೊಂಡರೆ ಅದು ಪ್ರೇಮಸಲ್ಲಾಪ ಇರಬಹುದೆನಿಸುತ್ತದೆ! ಅದೇನು ಭಾಷೆಯೋ, ಯಾರಿಗೆ ಗೊತ್ತು! ಆ ದಿನಗಳಲ್ಲಂತೂ ಹೆದರಿಕೆಯಿಂದ ತಲೆ ಹೊರಹಾಕಲೂ ಭಯ. ಹಾಗಾಗಿ ನಾನು ಹಾಲು ಕುಡಿಯಲು ಹೋಗುವುದಿಲ್ಲವೆಂದು ಹಟ ಮಾಡುತ್ತಿದ್ದೆ. ಅಜ್ಜಿ ಕೊಂಗಾಟ ಮಾಡಿ “ನಿಧಾನ ಹರೆದುಕೊಂಡು ಹೋಗು ಮಗಾ, ಗುಮ್ಮನಿಗೆ ಕಾಣುವುದಿಲ್ಲ” ಎನ್ನುತ್ತಿದ್ದರು! ಐದಾರು ವರ್ಷಗಳ ನನಗೆ ಮುದ್ದು ಮಗುವಿನಂತೆ ಹರೆದು ಹೋಗುವುದು ಆ ಕ್ಷಣಕ್ಕೆ ಇಷ್ಟವೂ ಆಗಿಬಿಡುತ್ತಿತ್ತು.
ಗೂಬೆಯ ಬಗೆಗಿನ ರೋಚಕ ಅನುಭವಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ

Read More

ಹೊಟ್ಟೆ ಮತ್ತು ಮನಸ್ಸು ತುಂಬಿದ ಭಾರೀ ಭೋಜನ…

“ಅವರಿಗೆ ಸುಲಭವೆನಿಸಿದ ಲೆಕ್ಕವನ್ನು, ‘ಒಂದಲ್ಲ ನಾಲ್ಕು ಸಲ ಕೇಳಿ ಹೇಳಿ ಕೊಡ್ತಿನಿ’ ಎನ್ನುತ್ತಿದ್ದರು. ಅದೇ ಸಲುಗೆಯ ಮೇಲೆ ಹುಡುಗರೇನಾದರೂ ‘ಇದು ಅರ್ಥ ಆಗ್ಲಿಲ್ಲ ಯಂಗೆ ಸರ್’ ಎಂದು ಕೇಳಿದರೆ ಉಪಾಯವಾಗಿ ತಾವಿರುವಲ್ಲಿಯ ಬೋರ್ಡ್ ಹತ್ತಿರಕ್ಕೆ ಕರೆಸಿಕೊಂಡು. ‘ಇಂಥ ಸುಲಭದ್ದು ಅರ್ಥ ಆಗ್ಲಿಲ್ವ, ಹೇಳಿ ಕೊಡ್ಬೇಕಾದ್ರೆ ಯತ್ತಗೆ ನೋಡ್ತಿರ್ತಿರ, ಎಲ್ಲಾರ ದನ ಕಾಯದ ಬಿಟ್ಟು, ಸ್ಕೂಲಿಗೆ ಯಾಕೆ ಬತ್ತಿರ’ ಎಂದು ಒಂದೇ ಉಸಿರಿಗೆ ಬೈಯುತ್ತ ಕನಿಷ್ಠ ಎರೆಡು ಕೋಲು ಮುರಿಯುವವರೆಗೂ ಹೊಡೆಯುತ್ತಿದ್ದರು.”

Read More

ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಅಂಕಣ ಇಂದಿನಿಂದ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಬಲಿಪನಾರಾಯಣ ಭಾಗವತರದ್ದು ಅಗ್ರ ಹೆಸರು. ತೆಂಕುತಿಟ್ಟಿನ ಮಾರ್ಗಪ್ರವರ್ತಕರೆಂದು ಗುರುತಿಸಿಕೊಂಡವರು. ‘ಭಾಗವತ’ನಿಗಿರಬೇಕಾದ ಜ್ಞಾನವನ್ನು ಮೈಗೂಡಿಸಿಕೊಂಡು ಮನ್ನಣೆಗೆ ಪಾತ್ರರಾದವರು. ಲೇಖಕ ಕೃಷ್ಣಪ್ರಕಾಶ ಉಳಿತ್ತಾಯ ಅವರು ಯಕ್ಷಗಾನದ ಹಿಮ್ಮೇಳ ಕಲಾವಿದರೂ ಆಗಿರುವುದರಿಂದ, ಹಿರಿಯ ಬಲಿಪನಾರಾಯಣ ಭಾಗವತರ ಜೀವನವನ್ನು ಅವರ ಭಾಗವತಿಕೆಯ ಮಾರ್ಗವನ್ನು ಹೆಚ್ಚು ಸಮರ್ಥವಾಗಿ ನಿರೂಪಿಸಬಲ್ಲರು. ಇಂದಿನಿಂದ ಅವರು ಬರೆಯುವ ಬಲಿಪ ಮಾರ್ಗ ಅಂಕಣ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ