Advertisement

Category: ದಿನದ ಪುಸ್ತಕ

ಸುತ್ತಾಡಿದ ದೇಶಗಳ ಒಳಗೂ-ಹೊರಗೂ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ ಸಿಂಗಪುರದ ವಿದ್ಯಾರ್ಥಿನಿಯಿಂದಾದ ವರ್ಣಭೇದದ ಅನುಭವದಿಂದ ಲೇಖಕಿಯ ಮನಸ್ಸು ಮುದುಡುವುದು, ಹದಿನಾಲ್ಕು ಅಂತಸ್ತಿನ ತಮ್ಮ ಮಗನ ಮನೆಯಲ್ಲಿ ಲೇಖಕಿ ಒಬ್ಬರೇ ಇರುವಾಗ ಅದೇ ಕಟ್ಟಡದ ಒಂದು ಮಹಡಿಯ ಮನೆಗೆ ಬೆಂಕಿ ಬಿದ್ದು ಫೈರ್ ಇಂಜಿನ್ ಬಂದು ಬೆಂಕಿ ಆರಿಸುವಾಗಲೂ ಸುತ್ತಮುತ್ತಲಿನ ಜನ ಕಿಂಚಿತ್ತೂ ಗಮನ ಹರಿಸದೆ ಕಣ್ಣೆತ್ತಿಯೂ ನೋಡದೆ ಹೋಗುವುದು…. ಇದೆಂಥಾ ಮುಂದುವರಿದ ದೇಶ ಮಾರ್ರೆ?
ಶಾಂತಾ ನಾಗರಾಜ್‌ ಪ್ರವಾಸ ಕಥನ “ಯಾನ ಸಂಸ್ಕೃತಿ” ಕೃತಿಯ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ

Read More

ಸಾಮಾಜಿಕ ಸಾಮರಸ್ಯದ ಸೂಚಕ ‘ಭರಮದೇವರು’: ತೇಜಾವತಿ ಡಿ.ಎಸ್.‌ ಬರಹ

ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ.
ಶ್ರೀರಾಮ ಇಟ್ಟಣ್ಣವರ ಬರೆದ “ಭರಮದೇವರು” ಕೃತಿಯ ಕುರಿತು ತೇಜಾವತಿ ಡಿ.ಎಸ್.‌ ಬರಹ

Read More

ಭಾವನೆಗಳ ಬಿರುಕ ಹೊಲಿಯಲಾರ ಸಿಂಪಿಗ: ಚಂದ್ರಶೇಖರ ಪೂಜಾರ ಬರಹ

ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು.
ಶಿವಕುಮಾರ ಮೋ. ಕರನಂದಿ ಗಜ಼ಲ್‌ ಸಂಕಲನ “ನೆರಳಿಗಂಟಿದ ನೆನಪು” ಕುರಿತು ಚಂದ್ರಶೇಖರ ಯ. ಪೂಜಾರ ಬರಹ

Read More

ಘಾಂದ್ರುಕ್‌ ಮತ್ತು ಸೋಫಿಯ ಎನ್ನುವ ಸೂಜಿಮಲ್ಲಿಗೆ: ಎಚ್.ಆರ್.‌ ರಮೇಶ್‌ ಬರಹ

ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.
ಸತೀಶ್‌ ಚಪ್ಪರಿಕೆ ಅವರ “ಘಾಂದ್ರುಕ್”‌ ಕಾದಂಬರಿ ಕುರಿತು ಎಚ್.ಆರ್.‌ ರಮೇಶ್‌ ಬರಹ ನಿಮ್ಮ ಓದಿಗೆ

Read More

ಶಿವಶಿವ ಎಂದರೆ ಭಯವಿಲ್ಲ..: ಕೆ.ಎನ್.‌ ಲಾವಣ್ಯ ಪ್ರಭಾ ಬರಹ

ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು.
ನೂತನ ದೋಶೆಟ್ಟಿ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ”ದ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ