Advertisement

Category: ದಿನದ ಪುಸ್ತಕ

ಓದುಗರೊಟ್ಟಿಗೆ ಮಾತನಾಡುವ ಕಥೆಗಳು…

ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. ‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.
ದಯಾನಂದ ಅವರ ಕಥಾ ಸಂಕಲನ “ಬುದ್ಧನ ಕಿವಿ”ಯ ಕುರಿತು ಮಂಜಯ್ಯ ದೇವರಮನಿ ಬರಹ

Read More

ಗೋಕುಲದ ನಾಯಕರು ನಾವು….

ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ.
ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಎಚ್.ಎಸ್. ಅನುಪಮಾ ಕಾದಂಬರಿಯಲ್ಲಿ “ಅಕ್ಕ”

ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ.
ಡಾ. ಎಚ್.ಎಸ್. ಅನುಪಮಾ ಅವರ ಹೊಸ ಕಾದಂಬರಿ “ಬೆಳಗಿನೊಳಗು” ಕುರಿತು ಡಾ. ಎಲ್.ಸಿ. ಸುಮಿತ್ರಾ ಬರಹ

Read More

ಕಾದಂಬರಿಗಳಲ್ಲಿ ತಿರುಮಲೇಶರ ಅನನ್ಯತೆ

ಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು ಹೊಸಕಿ ಹಾಕುತ್ತಿರುತ್ತಾಳೆ. ಕೈಯಲ್ಲಿ ಕೆಲವೇ ರುಪಾಯಿಗಳನ್ನು ಹಿಡಿದು ಪೇಟೆಗೆ ಹೋಗುವ ಆಕೆ ರಿಸ್ಟ್ ವಾಚನ್ನು ನೋಡುತ್ತಾಳೆ. ತೆಗೆದುಕೊಳ್ಳುವುದಿಲ್ಲ. ಬಣ್ಣ ಬಣ್ಣದ ಸೀರೆಯನ್ನು ನೋಡುತ್ತಾಳೆ ಅದಕ್ಕೆ ಹೊಂದಿಕೆಯಾಗುವ ರವಿಕೆಯನ್ನೂ ನೋಡುತ್ತಾಳೆ. ಇನ್ನೊಮ್ಮೆ ಇನ್ನೊಮ್ಮೆ ಎಂದು ತನ್ನ ಬಯಕೆಗಳನ್ನು ಮುಂದೆ ಹಾಕುತ್ತಲೇ ಅಂಗಡಿಯವನು ಬೇರೆ ಗಿರಾಕಿಗಳ ಕಡೆ ಗಮನ ಕೊಟ್ಟಾಗ ತಾನು ಸದ್ದಿಲ್ಲದೆ ಅಂಗಡಿಯಿಂದ ಹೊರಬರುತ್ತಾಳೆ.
ಕೆ.ವಿ. ತಿರುಮಲೇಶರ “ಆರೋಪ” ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಕನಸು ಸಾಕಿಕೊಂಡವರ ಕಣ್ಣ ದೀಪದೆದುರು…

ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ.
ಮಂಡಲಗಿರಿ ಪ್ರಸನ್ನ ಅವರ “ನಿದಿರೆ ಇರದ ಇರುಳು” ಗಜಲ್‌ ಸಂಕಲನಕ್ಕೆ ಡಾ. ರಮೇಶ ಅರೋಲಿ ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ