Advertisement

Category: ದಿನದ ಪುಸ್ತಕ

ಎಂದಿಗೂ ಸಲ್ಲುವ ಕನಸಿನ ನೆಲೆ-ಹಿನ್ನೆಲೆ

ಈ ಕಾದಂಬರಿಯಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರಲ್ಲಿಯೂ ತಮ್ಮ-ತಮ್ಮ ನೆಲೆ, ನಿಲವು, ಬೆಳಸು-ಕನಸುಗಳೆಲ್ಲದಕ್ಕೆ ಹಿಮ್ಮೇಳವಾದ ಧರ್ಮ, ಸಂಸ್ಕೃತಿ, ಕಲೆಗಳನ್ನು ಒಂದು ಸೂರಿನಡಿ ಕಾಯ್ದಿಡುವ ರಾಷ್ಟ್ರಪ್ರಜ್ಞೆಯ ಪಸೆಯನ್ನು ಕಾಣುವ ಹಂಬಲವಿದೆ. ಹಾಗೆಂದು ಇದು ಸಮಾಜ-ರಾಜಕೀಯ-ಧರ್ಮಗಳ ಗಡಸು ಮುದ್ದೆಯಲ್ಲ; ಸಂಸ್ಕೃತಿಯ ಸಂವೇದನೆಯಲ್ಲಿ, ಸಾರ್ವತ್ರಿಕವಾದ ಜೀವನತತ್ತ್ವ-ಕಲಾತತ್ತ್ವಗಳ ನೆಲಗಟ್ಟು-ಸೂರುಗಳ ನಡುವೆ ಬೆಳೆದ ಕಾದಂಬರೀವಧುವಿನ ಯಾತ್ರೆ.
ಶತಾವಧಾನಿ ಡಾ. ಗಣೇಶ್‌ ಬರೆದ “ಮಣ್ಣಿನ ಕನಸು” ಕಾದಂಬರಿಯ ಕುರಿತು ನೀಲಕಂಠ ಕುಲಕರ್ಣಿ ಲೇಖನ

Read More

“ಕಾನನ ಜನಾರ್ದನ” ಕಾದಂಬರಿಯ ಒಂದೆರಡು ಪುಟಗಳು

ಹತ್ತು ದಿನಗಳಿಂದ ಅವರು ಹೆಚ್ಚು ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ನಮ್ಮದೇ ರೀತಿಯಲ್ಲಿ ಅವಲೋಕಿಸುತ್ತಿದ್ದೆವು. ನಮಗೆ ಇಬ್ಬರು ಮಾತ್ರವೆ ಕೆ. ನಾಗಯ್ಯ ಅವರ ಈಗಿನ ಸ್ಥಿತಿಗೆ ಸಂಬಂಧ ಹೊಂದಿರಲು ಸಾಧ್ಯ ಎಂಬ ಸಂಶಯ ಮೂಡಿತು. ಇಬ್ಬರೂ ಕೂಡ ಇತ್ತೀಚೆಗೆ ಅವರು ತೊಡಗಿಸಿಕೊಂಡಿದ್ದ ಚಟುವಟಿಕೆಗೆ ಸಂಬಂಧ ಪಟ್ಟವರು: ಒಬ್ಬರು ನಾಗಯ್ಯ ಇತ್ತೀಚೆಗೆ ಬರೆದ ಕಾದಂಬರಿಯ ಪ್ರಕಾಶಕರು.
ಡಾ. ಕೆ. ಎನ್. ಗಣೇಶಯ್ಯ ಬರೆದ “ಕಾನನ ಜನಾರ್ದನ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಕುರಿತೋದದ ಚಿತ್ತಾರಗಿತ್ತಿಯರು ಎಳೆವ ಗೆರೆಗಳು

ಮಲೆಕರ್ನಾಟಕದ ದೀವರರ ಜನಾಂಗದ ಮಹಿಳೆಯರು ಹಸೆಚಿತ್ತಾರವನ್ನು ಗೋಡೆಯ ಮೇಲೆ, ಬುಟ್ಟಿಗಳು, ಬಾಗಿಲು, ಕಿಟಕಿ, ಇಡುಕಲು, ಮಡಕೆ ಇವುಗಳ ಮೇಲೆ ಸಸ್ಯಜನ್ಯ ಮೂಲದ ಬಣ್ಣಗಳಿಂದ ಶುಭ ಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ. ಚಿತ್ರಿಸಲು ಬೇಕಾದ ಬಣ್ಣಗಳನ್ನು ಅವರೇ ತಯಾರಿಸಿಕೊಳ್ಳುವರು. ಈ ಕಲೆಯನ್ನು ದೀವರ  ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ
ರವಿರಾಜ್ ಸಾಗರ್ ಬರೆದ ಸಂಶೋಧನಾ ಕೃತಿ “ಕರ್ನಾಟಕ ದೇಶಿ ಚಿತ್ರಕಲೆ ಹಸೆ ಚಿತ್ತಾರ” ಕುರಿತು ಮಧು ಗಣಪತಿರಾವ್ ಮಡೆನೂರು ಬರಹ .

Read More

ಕಾಲನ ಮಹಿಮೆಗೆ ಶರಣಾದ ಕತೆಗಳ ಗುಚ್ಛ

ಮಲೆನಾಡಿನ ಮಡಿಲಲ್ಲಿರುವ ಸಕ್ರೆಬೈಲಿನಲ್ಲಿ ಬಹುತೇಕ ನಡೆಯುವ ಕತೆಗಳು ಮನುಷ್ಯ ಸಂಬಂಧಗಳಲ್ಲಿನ ತಾಕಲಾಟಗಳನ್ನು ಬಿಂಬಿಸುತ್ತವೆ. ಸಮಾಜದ ಅಧೋಮುಖಿ ಬೆಳವಣಿಗೆಗಳನ್ನು, ಸೋಗಲಾಡಿತನವನ್ನು, ಮುಖವಾಡದ ಹಂಗನ್ನು, ಸುಖದ ಹಪಾಹಪಿಯನ್ನು, ಆಧುನಿಕತೆ ತಂದೊಡ್ಡಿರುವ ಅಪಾಯಗಳನ್ನು, ವ್ಯಕ್ತಿತ್ವದ ವಿಕಾಸವನ್ನು, ಬದುಕಿನ ಸಂಕೀರ್ಣತೆಗಳನ್ನು ಕತೆಗಳು ಹದವಾಗಿ ಮೈಗೂಡಿಸಿಕೊಂಡು ಬೆಳೆದಿವೆ.
ಅಲಕಾ ಕಟ್ಟೆಮನೆಯವರ ʻಹೊರಳು ಹಾದಿಯ ನೋಟʼ ಕಥಾಸಂಕಲನದ ಕುರಿತು ನಿವೇದಿತಾ ಎಚ್. ಬರಹ

Read More

ಮುಸ್ಲಿಮರ ಆತಂಕ ಮತ್ತು ಅನಿಶ್ಚಿತ ಭವಿಷ್ಯ

ಗಜಾಲಾ ವಹಾಬ್ ಬರೆದ ಈ ಪುಸ್ತಕದಲ್ಲಿ ಚಿಂತನಶೀಲ ಬರಹಗಳಿವೆ.  ಇಸ್ಲಾಮಿನ ಧಾರ್ಮಿಕ ರಚನೆ-ನೀತಿನಿಯಮಗಳ ಇತಿಹಾಸವನ್ನು ಆಳವಾಗಿ ಶೋಧಿಸುತ್ತ ಪ್ರವಾದಿಯವರ ಮರಣಾನಂತರ ಖಲೀಫರ ಕಾಲದಿಂದ ಧಾರ್ಮಿಕ ಏಕಸ್ವಾಮ್ಯಕ್ಕಾಗಿ   ಶಿಯಾ ಸುನ್ನಿಗಳ ನಡುವಿನ ಮತಬೇಧಗಳು, ಕುಲೀನ ಆಶ್ರಫ್, ಸೈಯದ್ ಮತ್ತು ಪಠಾಣರ ನಡುವಿನ ಶ್ರೇಣೀಕರಣಗಳು ಮುಸ್ಲಿಮ್ ಸಮಾಜವನ್ನು ಒಳಗಿನಿಂದಲೇ ಹೇಗೆ ಶಿಥಿಲಗೊಳಿಸಿದವು ಎಂದು ದಾಖಲಿಸುತ್ತಾರೆ. ಡಾ. ಎಸ್. ಸಿರಾಜ್ ಅಹ್ಮದ್‍ ಲೇಖನ ಇಲ್ಲಿದೆ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ