Advertisement

Category: ದಿನದ ಪುಸ್ತಕ

`ವ್ಯವಹಾರ ಚತುರ’ ಉಲುವಾಟು ಮಂಗಗಳು: ಡಾ. ಜೆ. ಬಾಲಕೃಷ್ಣ ಬರಹ

ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯವಾಗಿದೆ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು, ಆದರೆ ನಂತರ ಅದು ಹೇಗೆ ಒಂದು `ಸಾಂಸ್ಕೃತಿಕ ನಡವಳಿಕೆ’ಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಕೆಲವು ಬರಹಗಳ ಸರಣಿ ನಿಮ್ಮ ಓದಿಗೆ

Read More

ಕಾಲವೇ ಕಾಪಾಡಿ ಪೋಷಿಸಿದ ತಲೆಮಾರಿನ ಕಥೆ: ನಾರಾಯಣ ಯಾಜಿ ಬರಹ

ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು.
ರಾಜಶೇಖರ ಜೋಗಿನ್ಮನೆ ಕಾದಂಬರಿ “ಕೇಳು ಧನಂಜಯ..” ಕುರಿತು ನಾರಾಯಣ ಯಾಜಿ ಬರಹ

Read More

ಮಹಿಳಾ ಕಾವ್ಯ- ಅಲಕ್ಷಿತ ಮಹಿಳಾ ಸಾಹಿತ್ಯ ಚರಿತ್ರೆಯ ಆಕರ: ಸಬಿಹಾ ಭೂಮಿಗೌಡ

ಕವಯಿತ್ರಿಯರ ಸ್ಮೃತಿಯಲ್ಲಿ ಮತ್ತು ಅನುಭವದಲ್ಲಿ ಅಮ್ಮನ ಪಾತ್ರ, ಕಾರ್ಯ, ಲೋಕದೃಷ್ಟಿಗಳು ವಿಶಿಷ್ಟವಾಗಿವೆ. ಅಮ್ಮನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವಳು ಮನೆಯಿಂದ ಹೊರಹಾಕುವ ಕಸವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಕವಯಿತ್ರಿ! ಅಮ್ಮ ತನ್ನ ಮನೆಯ, ಮನದ, ಸಂಬಂಧದ ಯಾವ ವಸ್ತು ವಿಚಾರಗಳನ್ನೂ ಅವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ ಎನಿಸುವವರೆಗೂ ಹೊರಹಾಕುವುದಿಲ್ಲ, ಅನಂತರವೇ ವಿವಿಧ ಲಕೋಟೆಗಳಲ್ಲಿ ಹಾಕಿ ಮನೆ, ಮನದಿಂದ ಹೊರ ಅಟ್ಟುತ್ತಾಳೆ ಎಂಬ ಚಿಂತನೆಯು ಹೊಸ ಒಳನೋಟವನ್ನು ನೀಡುತ್ತದೆ.
ಪ್ರೊ. ಸಬಿಹಾ ಭೂಮಿಗೌಡ ಸಂಪಾದಿಸಿದ “ಕನ್ನಡ ಮಹಿಳಾ ಕಾವ್ಯ” ಕೃತಿಗೆ ಬರೆದ ಅವರ ಮಾತುಗಳು ಇಲ್ಲಿವೆ…

Read More

ಸಹಜತೆಯ ಚೆಲುವಿನ ಕಥೆಗಳು: ಅನುಪಮಾ ಪ್ರಸಾದ್‌ ಕೃತಿಗೆ ಕೇಶವ ಮಳಗಿ ಮಾತುಗಳು

ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು.
ಅನುಪಮಾ ಪ್ರಸಾದ್‌ ಕಥಾ ಸಂಕಲನ “ಚೋದ್ಯ”ಕ್ಕೆ ಕೇಶವ ಮಳಗಿ ಬರೆದ ಮಾತುಗಳು

Read More

ಹೊನ್ನೆಯ ಹಾಡಿನಂಥಾ ಆತ್ಮಕಥನ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್‌ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲಾ ರೀತಿಯಲ್ಲಿ ಅವರು ಆಕಾಶವಾಣಿಯಲ್ಲಿ ಕೆಲಸ ನಿರ್ವಹಿಸುತ್ತಲೇ ಮುಂದೆ ಆಕಾಶವಾಯ ಸಂಗೀತ ಸಂಯೋಜಕಿಯೂ ಆಗುತ್ತಾರೆ.
ಎಚ್. ಆರ್. ಲೀಲಾವತಿ ಆತ್ಮಕಥನ “ಹಾಡಾಗಿ ಹರಿದಾಳೆ” ಕೃತಿಯ ಕುರಿತು ಕೆ.ಎನ್.ಲಾವಣ್ಯ ಪ್ರಭಾ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ