Advertisement

Category: ಸರಣಿ

ಒಮಾಹಾದಲ್ಲಿ ಟೊಮೆಟೋ ಸಾರು!: ಗುರುಪ್ರಸಾದ ಕುರ್ತಕೋಟಿ ಸರಣಿ

ನಮ್ಮವರಲ್ಲಿ ಹೆಚ್ಚಿನವರು ಅಲ್ಲಿನವರಿಗೆ ತುಂಬಾ ಹೆದರುತ್ತೇವೆ. ಅಮೆರಿಕನ್ನರು ತುಂಬಾ superior ಅಂತ ನಮ್ಮವರು ಭಾವಿಸಿಬಿಡುತ್ತಾರೆ. ಅಲ್ಲಿಗೆ ಹೋದಾಗಲೆ ಅದು ಸುಳ್ಳು ಅಂತ ಗೊತ್ತಾಗುತ್ತದೆ. ಅವರೂ ಕೂಡ ನಮ್ಮಂತೆಯೇ ಮನುಷ್ಯರೇ, ಅವರಿಗೂ ತಮ್ಮ ದೈನಂದಿನ ಆಗುಹೋಗುಗಳ ಬಗ್ಗೆ ಕಳವಳ ಇದೆ, ಅವರಿಗೂ ದುಡ್ಡಿನ ಚಿಂತೆ ಇದೆ, ತಾವು ಒಂದು ವೇಳೆ ಕೆಲಸ ಕಳೆದುಕೊಂಡರೆ ಹೇಗೆ ಎಂಬ ಭಯ ಇದೆ.. ಇತ್ಯಾದಿ..
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಏಳನೆಯ ಬರಹ

Read More

ಆಫ್‌ಲೈನ್ ಹಾಗೂ ಆನ್‌ಲೈನ್ ಭಿಕ್ಷುಕರು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮನೆಯಲ್ಲಿ ಬೆಳೆದ ಭತ್ತದಲ್ಲಿ ಭಿಕ್ಷುಕರಿಗೆಂದೇ, ಭತ್ತ ಕೊಯ್ದು, ತುಳಿಸಿ, ತೂರಿ ಚೀಲದಲ್ಲಿ ತುಂಬಿಕೊಂಡು ಕೊನೆಯಲ್ಲಿ‌ ಮಿಕ್ಕಿದ ಗುಡಿಸಿಟ್ಟುಕೊಂಡ ಭತ್ತವನ್ನು ಚೀಲದಲ್ಲಿ ತುಂಬಿಟ್ಟುಕೊಳ್ಳುತ್ತಿದ್ದರು. ಅದನ್ನು ಮನೆಗೆ ನೀಡಿಸಿಕೊಳ್ಳೋಕೆ ಬರುವ ಭಿಕ್ಷುಕರಿಗೆ ಹಾಕಲು ಇಟ್ಟುಕೊಳ್ಳುತ್ತಿದ್ದರು. ಸಣ್ಣ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡಿ ಬಂದೋರಿಗೆ ಭತ್ತ ಹಾಕಿದ ನಂತರ ‘ಏನಾದ್ರೂ ತಿನ್ನೋಕಿದ್ರೆ ಕೊಡಪ್ಪ’ ಅಂತಾ ಅವರು ಕೇಳಿದಾಗ ಕರುಳು ಚುರ್ ಎನ್ನುತ್ತಿತ್ತು..
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ನನ್ನ ತವನಿಧಿ…: ರಂಜಾನ್ ದರ್ಗಾ ಬರೆಯುವ ಸರಣಿ

ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 68ನೇ ಕಂತು ನಿಮ್ಮ ಓದಿಗೆ

Read More

ರಾಮ್ ಪ್ರಕಾಶ್ ರೈ ಕೆ. ಹೊಸ ಸರಣಿ “ಸಿನಿ ಪನೋರಮಾ” ಇಂದಿನಿಂದ

ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.
ರಾಮ್ ಪ್ರಕಾಶ್ ರೈ ಕೆ. ಬರೆಯುವ ಸಿನಿಮಾಗಳ ಕುರಿತ “ಸಿನಿ ಪನೋರಮಾ” ಸರಣಿ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಮಲಗು ಮಲಗೆನ್ನ ಮಗುವೆ…: ಚಂದ್ರಮತಿ ಸೋಂದಾ ಸರಣಿ

ನನಗೆ ಈಗಲೂ ನೆನಪಿದೆ, ನನ್ನ ತಮ್ಮಂದಿರನ್ನು, ಅಕ್ಕನ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ಅಮ್ಮ ಹೇಳುತ್ತಿದ್ದಳು. ಸುಮ್ಮನೆ ತೂಗಿದರೆ ಮಕ್ಕಳು ಅಳುತ್ತಿದ್ದವು. ಲಾಲಿಪದ ಹೇಳಿದರೆ ಸಾಕು ಕೆಲವೇ ಹೊತ್ತಿನಲ್ಲಿ ಅವು ಮಲಗುತ್ತಿದ್ದವು. ಆಗೆಲ್ಲ ನಾವು ದೊಡ್ಡವರು ಹೇಳುತ್ತಿದ್ದ ಜೋಗುಳ, ಲಾಲಿಪದಗಳನ್ನು ಕೇಳಿ ಕಲಿಯುತ್ತಿದ್ದೆವು. ʻಅಳದಿರು ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ ಬೆಳಗಾದರೆ ಬಕ್ಕು ನಿನ ಮಾವ ತಮ್ಮಯ್ನ ಮಡಿಲಿಗೆ ತಕ್ಕು ಕಡಲೆಯʼ ಅಂತಲೋ ನಮ್ಮದೇ ಆದ ರಾಗದಲ್ಲಿ ಹಾಡುವುದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿಮೂರನೆಯ ಕಂತಿನಲ್ಲಿ ಲಾಲಿಹಾಡುಗಳ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ