Advertisement

Category: ದಿನದ ಅಗ್ರ ಬರಹ

ನಾಟಕ ರೂಪದ ವರದಿ ವಾಚನದ ಮಜಾ… ಬಸವನಗೌಡ ಹೆಬ್ಬಳಗೆರೆ ಸರಣಿ

ತಮಾಷೆಯ ಸಂಗತಿ ಅಂದರೆ ಇನ್ಸಲ್ಟ್ ಆಗಿದ್ದ ದಯಾನಿಗೆ ಹೊರಗೆ ಹೋದ ಕೂಡಲೇ ಅವನು ಮದುವೆಯಾಗಬೇಕೆಂದುಕೊಂಡಿದ್ದ ಅವನ ಮನದರಸಿ ಕರೆ ಮಾಡಿದ್ದಾಳೆ. ಅವಳ ಕರೆಯಲ್ಲಿ ಅವನು ತಲ್ಲೀನನಾಗಿಬಿಟ್ಟಿದ್ದಾನೆ. ನಾಟಕವನ್ನು‌ ಮರೆತುಬಿಟ್ಟಿದ್ದಾನೆ ಅನಿಸುತ್ತೆ. ತಕ್ಷಣ ನಾನೇ ಹೊರ ಹೋಗಿ ಅವನನ್ನು ಒಪ್ಪಿಸಿ ವಾಪಸ್ಸು ಕರೆ ತಂದಿದ್ದಾಯ್ತು, ನಂತರ ಕಾಳಿದಾಸ ಫಿಲಂ ನಲ್ಲಿನ ‘ಕಮಲೇ ಕಮಲೋತ್ಪತ್ತಿಃ’ ಪದದ ಬದಲು ಪ್ರೇರಣಾ ತರಬೇತಿಯಾದ್ದರಿಂದ ‘ಪ್ರೇರಣೇ ಪ್ರೇರಣೋತ್ಪತ್ತಿಃ’ ಎಂದು ಹೇಳುತ್ತಾ ಬಂದು ಪ್ರಶ್ನೆ ಕೇಳಿಸಿ ನಮ್ಮ ವರದಿ ವಾಚನದ ನಾಟಕವು ಮೂಡಿಬಂತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಪವಾಡದ ಮಲ್ಲಮ್ಮರು!: ಸುಕನ್ಯಾ ಕನಾರಳ್ಳಿ ಅಂಕಣ

ಸಾಮಾಜಿಕ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಧರ್ಮಗಳು, ಸ್ತ್ರೀಶೋಷಣೆ ಸಂಪ್ರದಾಯದಲ್ಲೇನೂ ಇರಲಿಲ್ಲ, ಅಂದೂ ಸಹ ಸ್ತ್ರೀಸ್ವಾತಂತ್ರ್ಯವಿತ್ತು, ನಮ್ಮ ಗಾರ್ಗಿ ಮೈತ್ರೇಯಿಯರ ಉದಾಹರಣೆಯನ್ನು ನೋಡಿದರೆ ಸಾಕಲ್ಲ ಎನ್ನುತ್ತಾ ‘ಸುವರ್ಣ ಯುಗ’ವೊಂದನ್ನು ಕಟ್ಟಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತವೆ. ಹಾಗಿದ್ದರಿಂದಲೇ ಸಂಪ್ರದಾಯವೆನ್ನುವುದು ಆಧುನಿಕದ ಜೊತೆಗೆ ಸುಲಲಿತವಾಗಿ ಬೆರೆತು ಹರಿಯಿತು ಎಂದು ಸಂಪ್ರದಾಯದ ಗೋಡೆಯಲ್ಲಿ ಇರುವ ಘೋರ ಅರೆಕೊರೆಗಳನ್ನು ಮುಚ್ಚಿ ಸುಣ್ಣ ಬಳಿಯುವ ಪ್ರಯತ್ನ ಅದು. ಒಂದಾನೊಂದು ಕಾಲದಲ್ಲಿ ಸಹ ಎಲ್ಲವೂ ಚೆನ್ನಿತ್ತು, ಆ ಚೆನ್ನ ಚೆಲುವು ಇಂದು ಆಧುನಿಕದಲ್ಲಿ ಇನ್ನೊಂದು ರೂಪವನ್ನು ತಳೆದು ನಿಂತಿದೆ ಎಂದು ತಲೆ ಸವರುವ ಹುನ್ನಾರವೇ ಅದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ಮೂರನೆಯ ಬರಹ

Read More

ಈಗಿನ ಮಕ್ಕಳು ಹೀಗೇಕೆ?: ಬಸವನಗೌಡ ಹೆಬ್ಬಳಗೆರೆ ಸರಣಿ

ಮಕ್ಕಳ ಮುಂದೆ ಇವನ್ನೆಲ್ಲಾ ಹೇಳಿದರೆ ಬರೀ ಕೇಳುತ್ತಾರಷ್ಟೇ ಆದರೆ ಈ ಕಷ್ಟದ ತೀವ್ರತೆ ಅವರಿಗೆ ಅರಿವಾಗುವುದಿಲ್ಲ. ಮೊದಲು ಅನ್ನಕ್ಕೆ ಭಾರಿ ಬೆಲೆಯಿತ್ತು. ನಮ್ಮ ಊರಲ್ಲಿ ಕೆಲ ಮನೆಗಳಲ್ಲಿ ಹಬ್ಬಕ್ಕೆ ಮಾತ್ರ ಅನ್ನ ಮಾಡುತ್ತಿದ್ದರು. ಆದರೆ ಈಗ ಇಂತಹ ಪರಿಸ್ಥಿತಿ ಯಾರಿಗೂ ಇಲ್ಲ. ಮಕ್ಕಳಲ್ಲಿ ಮೊದಲು ಇದ್ದ ಕಮಿಟ್‌ಮೆಂಟ್, ಗುರು ಶಿಷ್ಯರ ಬಾಂಧವ್ಯ, ತಮ್ಮ ಹೆತ್ತವರ ಬಗ್ಗೆ ಇರುವ  ಪ್ರೀತಿಯ ಬಂಧ ತುಸು ಬಿರುಕು ಬಿಡುತ್ತಿದೆ! ಒಂದು ಹಂತದವರೆಗೂ ಬಾಂಧವ್ಯ ಇದ್ದರೂ ಅದು ಬರೀ ಮೆಟೀರಿಯಲಿಸ್ಟಿಕ್ ಆಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಉಳಿದ ಗೋಡೆ…: ವಿನಾಯಕ ಅರಳಸುರಳಿ ಅಂಕಣ

ಒಂದು ಕಾಲಕ್ಕೆ ಅತ್ಯಾಧುನಿಕ ರೂಪ-ವಿನ್ಯಾಸವೇ ಆಗಿದ್ದು, ಪ್ರಸ್ತುತವಾಗಿ ನಿಂತಿದ್ದ ಈ ಕಟ್ಟಡ ಆ ಹೊತ್ತಿನ ಪ್ರಮುಖ ಮಳಿಗೆಯೇ ಆಗಿದ್ದಿರಬಹುದು. ಇಲ್ಲೂ ಆ ಹೊತ್ತಿನ ನಗರ ಜೀವನಕ್ಕೆ ಅತ್ಯವಶ್ಯಕವಾಗಿದ್ದ ಯಾವುದೋ ವ್ಯವಹಾರವೊಂದು ನಡೆದಿದ್ದಿರಬಹುದು. ತಿರುಗುವ ಫ್ಯಾನಿನ ಕೆಳಗೆ ರಸೀತಿ ಬರೆಯುತ್ತ ಇದರ ಮಾಲಿಕ ಕುಳಿತಿದ್ದಿರಬಹುದು. ಹರಿದು ಹರಿದು ರಸೀತಿಯ ಪುಸ್ತಕ ಮುಗಿದಂತೆ ಇವರ ಕಾಲವೂ ಅದ್ಯಾವಾಗ ಮುಗಿಯಿತೋ? ಬದಲಾದ ವೈಖರಿಯಲ್ಲಿ ಅಪ್ರಸ್ತುತವಾದ ಈ ಕಟ್ಟಡ ಪೂರ್ತಿ ಕೆಡವುವವರೂ ಇಲ್ಲವಾಗಿ, 2026ರ ಡೈರಿಯ ನಡುವೆ ಸೇರಿಕೊಂಡ 1990ರದೊಂದು ಹಾಳೆಯಂತೆ ನಿಂತುಬಿಟ್ಟಿದೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಅವಳು ಮತ್ತು ಅವಳೊಂಟಿತನ”

ದಾರಿಯನ್ನು ಸವೆಸುವ ಸಮಯ ಎಲ್ಲ ಋತುಗಳನೂ ತೆರೆದು ತೋರಿಸುವುದು. ಅದ್ಯಾಕೋ ವಸಂತವೆಂಬ ಋತು ನನ್ನೊಳಗಿನ ಆರಜೂಗಳಿಗೆ ತುಂಬ ಆಪ್ತವೆನ್ನಿಸುವುದು. ಶಿಶಿರದಲ್ಲಿ ಉದುರುವ ಎಲೆಗಳನ್ನು ನೋಡುತ್ತಿದ್ದರೆ ಒಳಗೊಂದು ನಂಟನು ಬೆಸೆದುಕೊಳ್ಳಲಾಗದ ಮತ್ತೊಂದು ಅಸಹಾಯಕತೆಗೆ ಗಭರಾಹಟ್ ಧುತ್ತೆಂದು ಎದುರಿಗೆ ನನಗೂ ಎತ್ತರಕ್ಕೆ ಕಾಲಿಲ್ಲದಿದ್ದರೂ ಎದ್ದು ನಿಲ್ಲುವುದು.
ಲಕ್ಷ್ಮಣ ಶರೆಗಾರ ಬರೆದ ಕತೆ “ಅವಳು ಮತ್ತು ಅವಳೊಂಟಿತನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ