Advertisement

Category: ದಿನದ ಅಗ್ರ ಬರಹ

ಎಸ್. ಜಾನಕಿಗೆ ಯಾಕೆ ಕೇವಲ ಪದ್ಮ?: ಸುಕನ್ಯಾ ಕನಾರಳ್ಳಿ ಅಂಕಣ

ಅವರೇನೂ ತೆಪ್ಪಗೆ ಅದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮಲ್ಲಿ ಜಾಗೃತವಾಗಿರುವ ಆಧುನಿಕ ಮಹಿಳಾಪ್ರಜ್ಞೆಗೆ ನೀವು ಅಪಚಾರ ಮಾಡುತ್ತಿದ್ದೀರಿ ಎಂದು ಗಾಂಧೀಜಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಯಾವ ಚಳುವಳಿಯೂ ತಾವಿಲ್ಲದೆ ನಡೆಯಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ದಾದಾಬಾಯಿ ನವರೋಜಿಯವರ ಮೊಮ್ಮಗಳು ಕುರ್ಷೆದ್ ಬೆನ್ ನವರೋಜಿ ಒಂದು ಸಿಟ್ಟಿನ ಪತ್ರವನ್ನು ಸಹ ಬರೆದು ಗಾಂಧಿಗೆ ರವಾನಿಸಿದರು. ‘ಸ್ತ್ರೀಧರ್ಮ’ ಎಂಬ ಪತ್ರಿಕೆಯಲ್ಲಿ ಮಾರ್ಗರೆಟ್ ಕಸಿನ್ಸ್ ಹೀಗೆ ‘ಹೊರಗಿರಿಸುವ’ ಹುನ್ನಾರವನ್ನು ಪ್ರತಿಭಟಿಸಿದರು. ಯಾವುದೇ ಸಮಾವೇಶ, ಸಮಿತಿ, ಸಂಚಲನೆಗಳು ಹೆಣ್ಣಿಲ್ಲದೆ ನಡೆಯಬಾರದೋ, ಹಾಗೆಯೇ ಯಾವುದೇ ಹೋರಾಟ, ಪ್ರತಿಭಟನೆಗಳು ಸಹ ಹೆಣ್ಣಿಲ್ಲದೆ ಅಪೂರ್ಣ ಎಂದು ಎಚ್ಚರಿಸಿದರು
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೆಂಟನೆಯ ಬರಹ

Read More

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಅವಳು ಮತ್ತು ಅವಳೊಂಟಿತನ”

ದಾರಿಯನ್ನು ಸವೆಸುವ ಸಮಯ ಎಲ್ಲ ಋತುಗಳನೂ ತೆರೆದು ತೋರಿಸುವುದು. ಅದ್ಯಾಕೋ ವಸಂತವೆಂಬ ಋತು ನನ್ನೊಳಗಿನ ಆರಜೂಗಳಿಗೆ ತುಂಬ ಆಪ್ತವೆನ್ನಿಸುವುದು. ಶಿಶಿರದಲ್ಲಿ ಉದುರುವ ಎಲೆಗಳನ್ನು ನೋಡುತ್ತಿದ್ದರೆ ಒಳಗೊಂದು ನಂಟನು ಬೆಸೆದುಕೊಳ್ಳಲಾಗದ ಮತ್ತೊಂದು ಅಸಹಾಯಕತೆಗೆ ಗಭರಾಹಟ್ ಧುತ್ತೆಂದು ಎದುರಿಗೆ ನನಗೂ ಎತ್ತರಕ್ಕೆ ಕಾಲಿಲ್ಲದಿದ್ದರೂ ಎದ್ದು ನಿಲ್ಲುವುದು.
ಲಕ್ಷ್ಮಣ ಶರೆಗಾರ ಬರೆದ ಕತೆ “ಅವಳು ಮತ್ತು ಅವಳೊಂಟಿತನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಯಶಸ್ವಿ ಕಾರ್ಯಕ್ರಮದ ವರದಿ…: ಎಚ್. ಗೋಪಾಲಕೃಷ್ಣ ಸರಣಿ

ಬಹುಶಃ ಈ ಕಾರ್ಯಕ್ರಮದ ಯಶಸ್ಸು ಮುಂದಿನ ಕಾರ್ಯಕ್ರಮಗಳಿಗೆ ಒಂದು ಮಟ್ಟ ಅಂದರೆ ಮಾಪನ ನಿರ್ಮಿಸಿತು ಎಂದು ಹೇಳಬೇಕು. ಮುಂದಿನ ಕಾರ್ಯಕ್ರಮಗಳು ಈ ಮಟ್ಟ ಅಥವಾ ಇದಕ್ಕಿಂತಲೂ ಮಿಗಿಲಾಗಿರಬೇಕು ಎನ್ನುವ ಸ್ಟ್ಯಾಂಡರ್ಡ್ ನಾವೇ ರೂಪಿಸಿಕೊಳ್ಳಬೇಕಾಯಿತು. ಅದರ ಅಂದರೆ ಮುಂದೆ ನಮ್ಮ ಕಾರ್ಯವ್ಯಾಪ್ತಿ ಹೇಗೆ ಹಿಗ್ಗಿತು ಎನ್ನುವ ನೆನಪುಗಳು ನುಗ್ಗಿ ನುಗ್ಗಿ ಬರುತ್ತಿವೆ… ಹೇಗೆ ಅಂದರೆ ಹಿಂದೆ ನಮ್ಮ ಕಾಲದಲ್ಲಿ ಎಸ್ಸೆಸ್‌ಎಲ್ಸಿ ಪಿಯುಸಿ ರಿಸಲ್ಟ್ ಬಂದ ಮಾರನೇ ದಿವಸ ಮಾತ್ರ ಹೆಚ್ಚಿನ ಅಂಕ ಪಡೆದವರ ವಿವರ ಬರುತ್ತಿತ್ತು. ಈಗ ನೋಡಿ ಆರೇಳು ತಿಂಗಳಾದರೂ ಹೆಚ್ಚಿನ ಅಂಕ ಪಡೆದವರ ಫೋಟೋಗಳು ಬರ್ತಾನೇ ಇರ್ತದೆ, ಇದೂ ಹಾಗೇನೇಯ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೪ನೇ ಬರಹ ನಿಮ್ಮ ಓದಿಗೆ

Read More

ಒಳಬಾರದು ಆ ವಸಂತ…:  ವಿನಾಯಕ ಅರಳಸುರಳಿ ಅಂಕಣ

ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ.‌ ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ವಾಸುಕಿ ಸಿ.ಜಿ. ಬರೆದ ಈ ಭಾನುವಾರದ ಕತೆ “ಕನಸಿನ ಕಾಗೆ”

ಕೊನೆಗೂ ನಾನು ನೀರಿಗೆ ಇಳಿದೆ. ನೆನ್ನೆ ಆ ಮನುಷ್ಯ ಮಾಡಿದ್ದನ್ನೇ ನಾನೂ ಮಾಡಿದೆ. ಎರಡು ಅಂಗೈಗಳಲ್ಲಿ ನೀರನ್ನು ತುಂಬಿಸಿಕೊಂಡು ತಲೆಯ ಮೇಲೆ ಸುರಿದುಕೊಂಡೆ. ಮೈಗೆ ನೀರು ತಾಗಿದ್ದೇ ತಡ, ಹೊಸ ಹುಮ್ಮಸ್ಸು ಬಂದಂತಾಯಿತು. ಆ ಕ್ಷಣದಲ್ಲಿ ನನ್ನೊಳಗೆ ಏನೋ ಒಂದು ಬದಲಾವಣೆ ಆಯಿತು; ಇಂತಹ ಸುಖವನ್ನು ನಾನು ಅದಕ್ಕೂ ಮುಂಚೆ ಯಾವತ್ತೂ ಕಂಡವನಲ್ಲ. ತಲೆಯಲ್ಲಿ ಓಡುತ್ತಿದ್ದ ನೂರಾರು ಯೋಚನೆಗಳು ಇದಕ್ಕೆ ಕಾರಣ ಇರಬಹುದು. ಯಾವುದೋ ಸಿಂಹದ ತೂಕದ ಹೊರೆ ಮೈಮೇಲಿಂದ ಇಳಿದು ಹೋದಂತೆ ಹಗುರ ಎನಿಸಿತು.
ವಾಸುಕಿ ಸಿ.ಜಿ. ಬರೆದ ಕತೆ “ಕನಸಿನ ಕಾಗೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ