Category: video of the day
ಯಕ್ಷಗಾನ ಶೈಲಿಯಲ್ಲಿ ಪು.ತಿ.ನ ವಿರಚಿತ “ಹರಿಣಾಭಿಸರಣ”
Posted by ಕೆಂಡಸಂಪಿಗೆ | Jul 18, 2022 | video of the day |
ಕವಿ ಪು.ತಿ.ನರಸಿಂಹಾಚಾರ್ ಅವರ ಗೀತನಾಟಕ ʻಹರಿಣಾಭಿಸರಣʼವನ್ನು ಯಕ್ಷಗಾನ ರೂಪಕಕ್ಕೆ ಅಳವಡಿಸುವ ಪ್ರಥಮ ಪ್ರಯೋಗವಿದು. ಕನ್ನಡ ಸಾಹಿತ್ಯ ಕಂಡ ಅಪರೂಪದ ದಾರ್ಶನಿಕ ಕವಿ ಪು.ತಿ.ನ. ಅವರ, ʻಹಂಸ ದಮಯಂತಿ ಮತ್ತು ಇತರ ರೂಪಕಗಳುʼ ಎಂಬ ಗುಚ್ಛದಲ್ಲಿನ ಒಂದು ರೂಪಕ ʻಹರಿಣಾಭಿಸರಣʼ. ಯಕ್ಷಗಾನದ ಛಂದಸ್ಸಿನಲ್ಲಾಗಲೀ ಅಥವಾ ಅದಕ್ಕೆ ಪೂರಕವಾದ ಮಟ್ಟಿನಲ್ಲಾಗಲೀ ಈ ಸಾಹಿತ್ಯ ಇಲ್ಲ. ಕೆಲವು ಚಿಕ್ಕ-ಪುಟ್ಟ ಬದಲಾವಣೆಗಳೊಂದಿಗೆ ಇದನ್ನು ಯಕ್ಷಗಾನ ಪಠ್ಯಕ್ಕೆ ಹೊಂದಿಸಿಕೊಂಡು, ರೂಪಕದ ಚೌಕಟ್ಟಿಗೆ ಅಳವಡಿಸಲು ಪ್ರಯತ್ನಿಸಿದ್ದೇವೆ. ರಾಮಾಯಣದ ಪಂಚವಟಿಯಲ್ಲಿನ ಮಾಯಾಜಿಂಕೆಯ ಕಥಾವಸ್ತುವನ್ನು ಹೊಂದಿರುವ ಈ ಕೃತಿ, ಯಕ್ಷಗಾನದ ಪಠ್ಯಗಳಿಗಿಂತ ಕೊಂಚ ಭಿನ್ನವಾಗಿದ್ದು, ಕವಿಯ ಕಲ್ಪನೆಯನ್ನು ಅಂತೆಯೇ ರೂಪಕಕ್ಕೆ ಅಳವಡಿಸಲು ಯತ್ನಿಸಿದ್ದೇವೆ. ಮೂಲ ಪಠ್ಯದಲ್ಲಿರುವ ಗದ್ಯ-ಪದ್ಯಗಳೆರಡನ್ನೂ ಸೂಕ್ತವಾಗಿ ಬಳಸಿಕೊಂಡು, ರಂಗಪ್ರಯೋಗದ ಹರವನ್ನು ವಿಸ್ತರಿಸುವ ನೂತನ ಸಾಧ್ಯತೆಯೊಂದರ ಈ ಅನ್ವೇಷಣೆ ಇದಾಗಿದೆ.
ಕೃಪೆ: ಅನಂತ ಹೆಗಡೆ ದಂತಳಿಗೆ
Read Moreಗೌರೀಶ ಕಾಯ್ಕಿಣಿಯವರ “ಕಿಸಾ ಗೌತಮಿ” ಬಾನುಲಿ ನಾಟಕ
Posted by ಕೆಂಡಸಂಪಿಗೆ | Jul 14, 2022 | video of the day |
ವೀಣಾ ಸುದರ್ಶನ್ ನಿರ್ದೇಶನದಲ್ಲಿ, ಅನಿವಾಸಿ ಕಲಾವಿದರಿಂದ ಗೌರೀಶ ಕಾಯ್ಕಿಣಿಯವರ “ಕಿಸಾ ಗೌತಮಿ” ಬಾನುಲಿ ನಾಟಕ
ಕೃಪೆ: ಅನಿವಾಸಿ ಆರ್ಟ್ಸ್ ಕಲೆಕ್ಟಿವ್
Read Moreಕನ್ನಡ ಛಂದಶಾಸ್ತ್ರ ಸಂಶೋಧನೆ ಕುರಿತು ಪ್ರೊ. ಡಿ.ವಿ.ಪರಮಶಿವಮೂರ್ತಿ ಮಾತುಗಳು
Posted by ಕೆಂಡಸಂಪಿಗೆ | Jul 12, 2022 | video of the day |
ಕನ್ನಡ ಛಂದಶಾಸ್ತ್ರ ಸಂಶೋಧನೆ ಕುರಿತು ಪ್ರೊ. ಡಿ.ವಿ.ಪರಮಶಿವಮೂರ್ತಿ ಮಾತುಗಳು
ಕೃಪೆ: ಕರ್ನಾಟಕ ಸಾಹಿತ್ಯ ಅಕಾಡೆಮಿ
Read Moreವಿವೇಕ ಶಾನಭಾಗ ರಚಿತ ನಾಟಕ “ಬಹುಮುಖಿ”
Posted by ಕೆಂಡಸಂಪಿಗೆ | Jul 8, 2022 | video of the day |
ಚನ್ನಕೇಶವ ನಿರ್ದೇಶನದಲ್ಲಿ, ನೀನಾಸಂ ತಂಡ ಅಭಿನಯಿಸಿದ ವಿವೇಕ ಶಾನಭಾಗರ “ಬಹುಮುಖಿ” ನಾಟಕ
ಕೃಪೆ: ಸಂಚಿ ಫೌಂಡೇಷನ್
Read Moreಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಓದುಗರ ಮೆಚ್ಚು
ನಮ್ಮ ಫೇಸ್ ಬುಕ್
ನಮ್ಮ ಟ್ವಿಟ್ಟರ್
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ
ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read Moreಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
ಬೇಸಿಗೆಯ ಬೇಗೆಗೆ ನೆನಪುಗಳ ಸಿಂಚನ: ಚಂದ್ರಮತಿ ಸೋಂದಾ ಸರಣಿApr 26, 2024 | ದಿನದ ಅಗ್ರ ಬರಹ
-
ಶೀರ್ಷಿಕೆಗಳ ಸಂಗತಿ: ಅರುಣಾ ಜಿ ಭಟ್. ಬದಿಕೋಡಿ ಬರಹApr 26, 2024 | ಸಂಪಿಗೆ ಸ್ಪೆಷಲ್
-
ದೀಪಕ್ ಬೈಪುರಾ ತೆಗೆದ ಈ ದಿನದ ಫೋಟೋApr 26, 2024 | ದಿನದ ಫೋಟೋ
-
ಮೂಕ ವೇದನೆ…: ಗುರುಪ್ರಸಾದ ಕುರ್ತಕೋಟಿ ಸರಣಿApr 25, 2024 | ಸರಣಿ