Advertisement

Tag: ಎನ್.ಸಿ. ಮಹೇಶ್

ಕಂಡೂ ಕಾಣದಂತೆ ಸರಿದು ಹೋಗುವ ಅನಿವಾರ್ಯತೆಗಳು

ರಂಗಭೂಮಿ ಮೇಲ್ನೋಟಕ್ಕೆ ಕಾಣುವ ಹಾಗೆ ಕೇವಲ ಬಣ್ಣದ ಲೋಕದ ಹೊರಮೈ ಅಲ್ಲ. ಇದು ತಿಳಿಯುವುದು ಆ ರಂಗ ಒಳಹೊಕ್ಕಾಗ ಮಾತ್ರ. ಕಲೆ ಮತ್ತು ಕಲಾವಿದರನ್ನು ತುಂಬು ಆದರ ಭಾವದಿಂದ ಕಾಣುವವರಿಗೆ ಆ ಎಲ್ಲವನ್ನು ಒಟ್ಟು ಮಾಡಿ ಚಿತ್ರ ಕಟ್ಟಿಕೊಡುವವನಿಗೆ ಅಸಲಿ ಚಿತ್ರ ತಿಳಿದಿರುತ್ತದೆ. ಅವನು ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಕುಹಕವನ್ನೂ ಸೈರಿಸಿಕೊಳ್ಳಬೇಕಿರುತ್ತದೆ. ಮತ್ತೆ ಎಲ್ಲವನ್ನೂ ಕೇವಲ ಶೋಕಿಗೆ ಮಾಡುತ್ತ ಮಾರ್ಕೆಟಿಂಗ್ ಸರಕಾಗಲು ಹವಣಿಸುವವರನ್ನೂ ಅನಿವಾರ್ಯವಾಗಿ ಸೈರಿಸಿಕೊಂಡು ಮುಂದೆ ಸಾಗಬೇಕಿರುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಕೋವಿಡ್‌ ಸಮಯದಲ್ಲಿ ರಂಗ…

Read More

ವಸ್ತುನಿಷ್ಠ ವಿಮರ್ಶೆ-ಟೀಕೆಗಳಿಗೆ ಜಾಗವಿಲ್ಲದ ಕಾಲ

ಸರಿಸುಮಾರು ಇಪ್ಪತ್ತು ದಿನಗಳಿಂದ ಈ ಕಥೆಯನ್ನು ರೂಪಕವಾಗಿಸಿಕೊಂಡು ಯೋಚಿಸುತ್ತಿದ್ದೇನೆ. ವಿಭೂತಿಪುರುಷರ ಉತ್ತುಂಗ ಸ್ಥಿತಿಯ ಬಗ್ಗೆ ನನಗೆ ಇಂದಿಗೂ ತಿಳಿದಿಲ್ಲ. ಅವರು ಎಲ್ಲದರಲ್ಲೂ ಸುಂದರತೆ ಕಾಣಲು ಬಯಸುವವರು. ಆದರೆ ನಾನು ಆ ಸುಂದರತೆಯ ಬಗೆಗೆ ನಿತ್ಯ ಅನುಮಾನಗಳನ್ನ ಇಟ್ಟುಕೊಂಡಿರುವವನು. ತಮಾಷೆ ಮಾಡುತ್ತ ಎಲ್ಲವನ್ನೂ ತೇಲಿಸುತ್ತ ಜಗತ್ತನ್ನು ಸುಂದರ ಗೋಳವನ್ನಾಗಿ ಪರಿವರ್ತಿಸಿಕೊಳ್ಳುವವರ ಬಗೆಗೆ ನನ್ನಲ್ಲಿ ಗೌರವವೇನೊ ಇದೆ. ಹಾಗೆಯೇ ದಾರಿಹೋಕನಿಗೆ ಜ್ಞಾನೋದಯದ ಬಗೆಗೂ ಚಕಾರಗಳಿವೆ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಭೋಳೇತನದ ನಡುವೆಯೂ ಅರಳುವ ರಿಫ್ರೆಶಿಂಗ್ ಚಿಂತನೆಗಳು

ಈ ಜಗದ ಆಟವನ್ನು ನಿಚ್ಚಳವಾಗಿ ಮತ್ತು ಕಲಾತ್ಮಕವಾಗಿ ಕಾಣಿಸುವ ಹೊಣೆಹೊತ್ತ ರಂಗಭೂಮಿಯವರು ಕೊರೋನ ಕೊಟ್ಟ ವಿರಾಮದಲ್ಲಿ ಕೊಂಚ ನಿರಾಳವಾಗಿದ್ದರು. ನಿಧಾನಕ್ಕೆ ರಂಗಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ ಅನಿಸುವ ಹೊತ್ತಿಗೇ ಒಮೈಕ್ರಾನ್ ನಮ್ಮನ್ನು ಬೆರಳೆಣಿಸುತ್ತ ಕೂರುವಂತೆ ಮಾಡುತ್ತಿದೆ. ಇದು ಏರಿಕೆ ಕಂಡು ರಂಗಮಂದಿರಗಳು ಮತ್ತೆ ಮುಚ್ಚಲ್ಪಟ್ಟರೆ ಅಥವಾ ಕೇವಲ ಅರ್ಧದಷ್ಟು ಭರ್ತಿಗೆ ಅವಕಾಶ ಅಂತಾದರೆ ಮುಂದಿನ ಕಥೆ ಏನು ಎಂದು ಕೇಳಿಕೊಳ್ಳುವಂತಾಗಿದೆ. ಆದರೆ ಈ ಎರಡೂ ಎರಡೂವರೆ ವರ್ಷಗಳ ಪರ್ವ ಸಮಯದಲ್ಲಿ…

Read More

ನಾಟಕದ ನ್ಯೂನತೆಗಳೂ, ಬಂಡೇಳುವ ಜೀವಿಗಳೂ..

ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ…

Read More

ರಂಗದ ಬೆಳಕಿನಲ್ಲಿ ಅಕ್ಕನ ಹೃದಯವನ್ನು ‘ನೀವು ಕಾಣಿರೆ..’?

ಅಕ್ಕಮಹಾದೇವಿ ಅಂದಕೂಡಲೇ ಬಹುತೇಕರ ಮನಸ್ಸಲ್ಲಿ ಸುಳಿದಾಡುವ ಚಿತ್ರ ಆಕೆ ಬೆತ್ತಲಾಗಿದ್ದಳು ಎಂಬುದು. ಮತ್ತು ಆ ಬೆತ್ತಲನ್ನು ಅವಳ ನೀಳ ಕೂದಲು ಮರೆಮಾಚಿತ್ತು ಎಂಬುದು. ಆದರೆ ಆ ಬೆತ್ತಲೆ ಎಂಥದ್ದು? ಅಕ್ಕನ ಚೆನ್ನಮಲ್ಲಿಕಾರ್ಜುನ ಎಂಥವನು? ಇಷ್ಟಕ್ಕೂ ಶಿವ ಯಾರು? ಹೀಗೆ ನಾವು ಯೋಚಿಸುವ ಮತ್ತು ಅಕ್ಕನ ವಚನಗಳಲ್ಲಿ ಕಾಣುವ ಬೆತ್ತಲೆ ಪರಿಕಲ್ಪನೆಯನ್ನು ಬಿಟ್ಟು ನಾವು ಕಟ್ಟಿಕೊಂಡಿರುವ ಬೆತ್ತಲೆ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ