Advertisement

Tag: ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ನರೇಂದ್ರ ಪೈ ಕತೆ

ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ. ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನರೇಂದ್ರ ಪೈ ಕತೆ “ಭೇಟಿ” ನಿಮ್ಮ ಓದಿಗೆ

Read More

ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ

ಆಹಹಹಾ, ಯಾಕಮ್ಮಣ್ಣಿ ಬಂದ್ಬಿಡು, ಅಯ್ಯೋ ಅಯ್ಯೋ ಅಯ್ಯೋ…., ಕೇಳಿಸ್ಕೊಂಡ್ಯೇನೋ ಕೆಪ್ರ, ಮನೆಹಾಳಿ, ಗೆಣಸು ಕೀಳು ಹೋಗು, ಚಿನಾಲಿ, ಚಂಗ್ಲು… ಹೀಗೆ ಅವಳ ಶಬ್ದಕೋಶದ ತುಂಬ ಆ ಪಾತ್ರದ ಮಾತುಗಳದ್ದೇ ಪಾರಮ್ಯ. ಕತ್ತೆ, ಕೋತಿ, ಗೂಬೆ ಎನ್ನುವ ಮೂರು ಪದದಿಂದಾಚೆ ಬೈಗುಳವೇ ಆಡಿ, ಕೇಳಿ ಗೊತ್ತಿಲ್ಲದ ಮನೆಯಲ್ಲಿ, ಇವಳ ಈ ಹೊಸ ವ್ಯಾಕರಣ, ಶಬ್ದಕೋಶ ಅಸಮಾಧಾನದ ಹೊಗೆ ಹಬ್ಬಿಸಿತ್ತು.
ಎಸ್ ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಹೆಜ್ಜೆ ಮೂಡದ ಹಾದಿ” ನಿಮ್ಮ ಓದಿಗೆ

Read More

ಡಾ. ಕೆ. ಎಸ್. ಗಂಗಾಧರ ಬರೆದ ಈ ಭಾನುವಾರದ ಕತೆ

ಹುಡುಗ ಹೋದ ಮೇಲೆ ಜಗನ್ನಾಥನಿಗೆ ಜೋಂಪು ಹತ್ತಿದಂತೆ ಆಯಿತು. ಎದ್ದು ಮಲಗುವ ಕೋಣೆಗೆ ಹೋದ. ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಗಾಢವಾದ ನಿದ್ರೆ. ಅವನು ಸರಿಯಾಗಿ ನಿದ್ರೆ ಮಾಡಿದರೆ ಸಾಕೆಂಬ ಭಾವದಲ್ಲಿದ್ದ ರಾಧಾ ಸುಮ್ಮನೆ ನೋಡುತ್ತಾ ಗಂಡನಿಗೆ ತೊಂದರೆಯಾಗದಿರಲೆಂಬ ಕಾರಣದಿಂದ ಶ್ಯಾಮನನ್ನು ಪಕ್ಕದ ಕೋಣೆಯಲ್ಲಿ ಮಲಗಿಸಿದಳು.
ಡಾ. ಕೆ. ಎಸ್. ಗಂಗಾಧರ ಬರೆದ ಕತೆ “ಕನಸುಗಳು ಬೇಕೇ ಕನಸುಗಳು!”

Read More

ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ

“ಈ ಘಟನೆಯಲ್ಲಿ ತಪ್ಪು ಅಂತ ಏನಾದರೂ ಇದ್ರೆ ಅದು ಒಬ್ಬರ ಖಾಸಗಿತನದ ಪರಿಧಿ ದಾಟಿ ನುಗ್ಗಿ ವಿಡಿಯೋ ಮಾಡಿದವರದ್ದು. ಅದು ನೈತಿಕವಾಗಿ ಅಷ್ಟೆ ಅಲ್ಲ ಕಾನೂನಾತ್ಮಕವಾಗಿಯೂ ತಪ್ಪು ಹಾಗೂ ಅಪರಾಧ. ಹೀಗಿದ್ದೂ ತಪ್ಪು ಮಾಡದೇ ಇರವವರೊಬ್ಬರನ್ನ ಪಿಜಿಯಿಂದ ಹೊರಗೆ ಹಾಕ್ತಿವಿ ಅಂತ ಬೆಂಕಿಗೆ ದೂಡಿದ್ದು ಆ ವಾರ್ಡನ್ ತಪ್ಪು. ಆ್ಯಕ್ಚುಲಿ ನಿಜ ಹೇಳಬೇಕೆಂದರೆ ಇವರು ನಮ್ಮ ನಿಮ್ಮ ಕೋಪಕ್ಕೆ ಅರ್ಹರು.”
ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ “ಪ್ರೈವೆಸಿ” ನಿಮ್ಮ ಓದಿಗೆ

Read More

ಯಾರು ದೊಡ್ಡೋರು?: ರಹಮತ್ ತರೀಕೆರೆ ಕಥಾ ಸಂಕಲನದ ಒಂದು ಕತೆ

“ಹಿಂಗ್ ಬಂದು ಸಮುದ್ರದಾಗೆ ತೇಲ್ತಾ ಇರುವಾಗ ಒಂದು ಕುಲ್ಡುಗೊಕ್ಕರೆ ಮೇಲ್ಗಡೆ ಹರ‍್ತಾ ನೀರ್ ಮೇಲಿರೋ ಕುಂಬಳ್‌ಕಾಯೀನಾ ನೋಡ್ತು. ಯಲಾ ಯಲಾ! ಒಂದ್ ವಾರಕ್ಕೆ ಆಗೋವಷ್ಟು ತಿನ್ನಕೆ ಸಿಕ್ತು ಕಣಲೆ ಅಂದ್ಕೊಂಡು ಕೊಕ್ನಾಗೆ ಕಚ್ಕೊಂಡ್ ಬಂದು ಒಂದು ದೊಡ್ಡ ಆಲದಮರದ ಮ್ಯಾಲೆ ಬಂದು ಕುತ್ಕೊಂಡ್ತು. ಕುತ್ಕಂಡು ಎಲ್ಡ್ ಕಾಲಾಗೆ ಕಾಯಿನ ಅಮುಕ್ಕೊಂಡು ಚಂದರ್ಕಿಗೆ ಬಾಯಿಹಾಕಿ ಮುಚ್ಚಳ ತಗೀತು. ಆಗ ಒಳಗಿದ್ದೋರೆಲ್ಲ ಅಲೆಲೆಲೆ, ಏಳ್ರಲಾ ಬೆಳಕ್ ಹರೀತು.”
ರಹಮತ್‌ ತರೀಕೆರೆ ಕಥಾ ಸಂಕಲನ “ಗೇರಮರಡಿ ಕತೆಗಳು”ದಿಂದ ಒಂದು ಕತೆ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ