Advertisement

Tag: ಕೆ.ಆರ್.ಉಮಾದೇವಿ ಉರಾಳ

ಪಾಗಾರದಲ್ಲೊಂದು ಸೃಜನಾತ್ಮಕ ಕಲಾಕೃತಿ

ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

Read More

ಮುದ್ದು ಮಕ್ಕಳ ಉಸಿರು-ಉಲ್ಲಾಸದ ಹಸಿರು

ಶಿಶು ಲೋಕದಲ್ಲಿ ಎಲ್ಲವೂ ಎಷ್ಟು ಸರಾಗ! ಮೂವರೂ ಮಕ್ಕಳು ಪುಣ್ಯಕೋಟಿಯ ಕಥೆಗೆ ಕಣ್ಣೀರುಗರೆದವರೇ. ಪಂಚತಂತ್ರ, ಜಾತಕ, ಅರೇಬಿಯನ್ ನೈಟ್ಸ್, ಈಸೋಪ, ಅಮರಚಿತ್ರ ಕಥಾ ಸರಣಿಗಳು-ಇವರ ಕುತೂಹಲ ತಣಿಸಲು ಕಥೆಗಳ ಕಣಜವೇ ಬೇಕು. ಸಹಜವಾಗಿಯೇ ಪುಸ್ತಕಗಳ ಒಲವು. ನಾನು ರಾತ್ರಿಯಿಡೀ ಪ್ರಯಾಣ ಮಾಡಿ ಮಗಳ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಧನ್ಯ ಮತ್ತು ಮಾನ್ಯ ಹೊಸದಾಗಿ ಕೊಂಡ ಪುಸ್ತಕಗಳ ರಾಶಿ ಮುಂದಿಟ್ಟು ನಮಗೆ ವಿವರಿಸಲಾರಂಭಿಸುವುದು…

Read More

ಶರೀಫರ ಅನುಭವ ಲೋಕಕ್ಕೊಂದು ಕೈಪಿಡಿ

ಹತ್ತೊಂಬತ್ತನೇ ಶತಮಾನದಲ್ಲಿ ಮುಸ್ಲಿಂ ದಂಪತಿಯ ಮಗನಾಗಿ ಜನಿಸಿದ ವರಕವಿ ಮಹಾ ಮಾನವತಾವಾದಿ ಸಂತಶ್ರೇಷ್ಠ ಪರಿಪೂರ್ಣ ಶಿವಯೋಗಿ ಶರೀಫರು ರಾಮಾಯಣ ಮಹಾಭಾರತ, ದೇವಿಪುರಾಣ, ಪ್ರಭುಲಿಂಗಲೀಲೆ, ಬಸವ, ಅಲ್ಲಮ ಅಕ್ಕರನ್ನು ಮೈಗೂಡಿಸಿಕೊಂಡಿದ್ದವರು. ಮಾಸ್ತರರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿದ್ದವರು. ಕಳಸದ ಗೋವಿಂದ ಭಟ್ಟರನ್ನು ಸಂಧಿಸಿದಾಗ, ಗೋವಿಂದಭಟ್ಟರು ತಮ್ಮ ಅನುಭಾವದ ಆಧ್ಯಾತ್ಮ ಸಾಮ್ರಾಜ್ಯಕ್ಕೆ ಶರೀಫರನ್ನೇ ಉತ್ತರಾಧಿಕಾರಿಯಾಗಿಸುತ್ತಾರೆ.  ಚಂದ್ರಪ್ರಭಾ ಬರೆದ  ‘ತಗಿ ನಿನ್ನ ತಂಬೂರಿ, ಷರೀಫರ ತತ್ವ ಭಾಷ್ಯ’ ಪುಸ್ತಕದ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

ಸರ್ ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

“ದಿವಾನರಾದ ಅವಧಿಯಲ್ಲಿ ಮಹಾರಾಜರೊಂದಿಗೆ ಒಮ್ಮೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಸೂರ್ಯೋದಯಕ್ಕೂ ಮೊದಲೇ ಎದ್ದು ವಾಯುವಿಹಾರ ಕೈಗೊಂಡಿದ್ದ ಸರ್ ಎಂ.ವಿ.ಯವರಿಗೆ ಮಣ್ಣಿನ ರಾಶಿಯಲ್ಲಿನ ಬೆಣಚುಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಅವನ್ನು ಸೂರ್ಯನ ಬೆಳಕಲ್ಲಿ ಹಿಡಿದು ನೋಡಿದ ಅವರು ಉದ್ಗರಿಸುತ್ತಾರೆ. “ನಾವು ಕಲ್ಲಿದ್ದಲಿಗಾಗಿ ಇನ್ನು ಬರ್ಮಿಂಗ್ ಹ್ಯಾಂ ನತ್ತ ನೋಡಬೇಕಿಲ್ಲ!” ಮುಂದೆ ಅದಿರಿನ ನಿಕ್ಷೇಪಗಳನ್ನು ಗಮನಿಸುತ್ತಾರೆ.”
ಜಿ.ವಿ.ಸಂಗಮೇಶ್ವರ ಬರೆದ ‘ಕಬ್ಬಿಣದ ಕಥೆ ವ್ಯಥೆ’ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ