Advertisement

Tag: ಗಿರಿಜಾ ರೈಕ್ವ

ಇಂಟರ್‌ನೆಟ್‌ ಸೃಷ್ಟಿಸುತ್ತಿರುವ ಆಧುನಿಕ ಪುರಾಣಗಳು

ಭೂಲೋಕದಲ್ಲಿರುವ ಬೆರಗು ಹುಟ್ಟಿಸುವ ಎಲ್ಲ ಕೆಲಸಗಳನ್ನು ಅನ್ಯಲೋಕದ ಜೀವಿಗಳು ಬಂದು ಮಾಡಿದ್ದಾರೆ ಅಂತ ಎಲ್ಲವನ್ನೂ ಏಲಿಯನ್‌ ಟೆಕ್ನಾಲಜಿಗೆ ಒಪ್ಪಿಸುವ ಅಸಂಬದ್ಧತೆ ಈಗ ಎಲ್ಲಾ ಕಡೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಜನರನ್ನು ನಂಬಿಸಿದೆ ಅಂದರೆ ಇತ್ತೀಚೆಗೆ ಒಬ್ಬರು ನನ್ನೊಂದಿಗೆ ಯಾರಾದರೂ ಮನುಷ್ಯರು ಅಷ್ಟು ಚೆನ್ನಾಗಿ ಕೆತ್ತಲು ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದರು. ಅವರಿಗೆ ಈಗಲೂ ಕೆತ್ತನೆ ಮಾಡುವ ಸ್ಥಪತಿಗಳಿರುವುದು ತಿಳಿದಂತಿಲ್ಲ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

Read More

ನಮ್ಮಲ್ಲೆ ಅದೆಷ್ಟು ನಂದನದ ತುಣುಕುಗಳು!

ಹಿಮಾಲಯದ ಒಳ ಸುಳಿಗಳಲ್ಲಿ ಇರುವ ದೇವಸರೋವರಗಳದ್ದೇ ಒಂದು ಲೋಕ. ಕೈಲಾಸದ ಮಾನಸಸರೋವರ, ಲೇ ಲಡಾಕ್‌ನ ಪಾಂಗಾಂಗ್‌, ಚಂದ್ರತಾಲ್‌, ನಾಕೋ, ಟ್ರೆಕ್ಕಿಂಗ್‌ ಮಾಡಿ ಮಾತ್ರ ತಲುಪಬಹುದಾದ ಹೆಸರೇ ಇಲ್ಲದ ಇನ್ನೂ ಅನೇಕ ಸರೋವರಗಳಿವೆ. ಮನುಷ್ಯ ಜಗತ್ತು ಕೊನೆಗೊಳ್ಳುತ್ತಾ ಅದು ದೇವಜಗತ್ತಾಗುತ್ತದೆ. ಅದೆಲ್ಲಾ ದೇವಸಂಚಾರಕ್ಕೆ ಮಾಡಿದ ಜಾಗಗಳೇನೋ ಅನಿಸುತ್ತದೆ. ಈ ಸುಂದರ ಸರೋವರಗಳನ್ನು ಆಸ್ವಾದಿಸಲು ಸೂರ್ಯನ ಸಹಕಾರ ಬೇಕು.
‘ದೇವಸನ್ನಿಧಿ’ ಅಂಕಣದಲ್ಲಿ ತಾವು ಕಂಡ ಸರೋವರಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ದಂಡಕಾರಣ್ಯದ ಆದಿವಾಸಿಗಳ ದೇವ-ದೇವಿಯರು

ಶಿವ ಶಕ್ತಿಯ ಸಂಗಮವು ನಾನಾರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಮತ್ತು ವಿಸ್ಮಯವೆನಿಸುವ ರೀತಿಗಳಲ್ಲಿ ಅದು ಅಭಿವ್ಯಕ್ತಿ ಹೊಂದಿದೆ. ಬುಡಕಟ್ಟಿನವರ ದೇವಲೋಕವೂ ಇದಕ್ಕೆ ಹೊರತಾಗಿಲ್ಲ. ನದಿಯ ನಡುವೆ ಒಂದು ಕಲ್ಲಿದೆ. ಅಲ್ಲಿ ತ್ರಿಶೂಲದ ಹಾಗೂ ಒಂದು ಪಾದದ ಗುರುತಿದೆ. ದಂತೇಶ್ವರಿ ಮತ್ತು ಭೈರವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ದೇವಿಯು ಶಿವ ಮೋಸ ಮಾಡಿದ ಎಂದು ಕೋಪದಿಂದ ಅವನ ಮೇಲೆ ಎಸೆದ ತ್ರಿಶೂಲ ಅಲ್ಲಿ ಸಿಕ್ಕಿಕೊಂಡಿದೆ ಎನ್ನುವುದು ನಂಬಿಕೆ. ಅದಕ್ಕೇ ತಪ್ಪಿಸಿಕೊಂಡು ಹೋದ ಭೈರವನ ದೇವಾಲಯ ನದಿಯ ಆಚೆ ದಡದಲ್ಲಿದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ಧೋಲ್ಕಲ್ ಗಣೇಶನಿಗಾಗಿ ಬೆಟ್ಟ ಹತ್ತಿಯೇಬಿಟ್ಟೆ!

ಅಲ್ಲಿಂದ ಸ್ವಲ್ಪ ದೂರ ಸೂರ್ಯನ ಕಿರಣ ಬಿದ್ದು, ಗಾಳಿಯೂ ಸೋಕಿ ತುಸು ದಣಿವು ಕಡಿಮೆಯಾಯಿತು. ಮತ್ತೆ ಮುಂದುವರೆದಂತೆ ತುಸು ಇಳಿಜಾರಿಗೆ ಸಾಗಿದ ದಾರಿ ಮತ್ತೆ ಸ್ವಲ್ಪ ಹೆಚ್ಚೇ ಏರುಹಾದಿಯಲ್ಲಿ ಕರೆದುಕೊಂಡುಹೋಯಿತು. ಅದು ತಲುಪಿದ್ದು ದೊಡ್ಡ ದೊಡ್ಡ ಬಂಡೆಗಳ ಬಳಿ. ಅಲ್ಲಿಂದ ಮುಂದೆ ಯಾವ ದಾರಿಯಿರಲಿಲ್ಲ. ಹತ್ತೋಕೆ ಆಗುತ್ತೋ ಇಲ್ವೋ ಅನ್ನೋ ಹಾಗಿದ್ದ ಬಂಡೆಗಳು. ಇಲ್ಲಿಂದ ಮುಂದೆ ಮುಂದಿನ ೨೦೦—೩೦೦ ಮೀಟರಿನ ದಾರಿ ತುಸು ಕಠಿಣವಾಗೇ ಇತ್ತು. ಹೆಜ್ಜೆ ಇಡೋದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಒಂದು ನಾಲ್ಕು ಮೂಳೆಗಳು ರಿಪೇರಿಗೆ ಹೋಗೋದು ಗ್ಯಾರಂಟಿ. ಅಲ್ಲಿಂದಲೂ ಗಣೇಶ ಏನೂ ಕಾಣಿಸುತ್ತಿರಲಿಲ್ಲ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ಲಲಿತಾಸಹಸ್ರನಾಮ ಹುಟ್ಟಿದ್ದು ಈ ದೇವಾಯದಲ್ಲೇ

ಅಲ್ಲಿನ ಅರ್ಚಕರು ಒಂದು ಘಟನೆಯನ್ನು ಹೇಳಿದರು. ೧೯೯೯ ರಲ್ಲಿ ಬೆಂಗಳೂರಿನ ಒಬ್ಬ ಮಹಿಳೆಗೆ ಕನಸಿನಲ್ಲಿ ದೇವಿಯ ದರ್ಶನವಾಗಿ ತನಗೆ ಕಾಲ್ಗೆಜ್ಜೆ ನೀಡೆಂದು ತಿಳಿಸಿದಳಂತೆ. ಆದರೆ ಆ ದೇವಿ ಯಾರು, ದೇವಸ್ಥಾನ ಎಲ್ಲಿದೆ ಅನ್ನುವುದು ಆಕೆಗೆ ತಿಳಿದಿರಲಿಲ್ಲ. ಯಾವುದೋ ಪತ್ರಿಕೆಯಲ್ಲಿನ ಚಿತ್ರ ನೋಡಿ ಇದೇ ಕನಸಿನಲ್ಲಿ ಬಂದ ದೇವಿ ಎಂದು ಗುರುತಿಸಿ ತಿರುಮೀಯಚೂರಿಗೆ ಹೋಗುತ್ತಾಳೆ. ಅಲ್ಲಿ ಕಾಲ್ಗೆಜ್ಜೆಯನ್ನು ದೇವರಿಗೆ ತೊಡಿಸಿರೆಂದು ಕೇಳಿದಾಗ ಅರ್ಚಕರು ಹಾಗೆ ಹಾಕಲು ಆಗುವುದಿಲ್ಲ ಎನ್ನುತ್ತಾರೆ. ಆಕೆ ಪದೇ ಪದೇ ಕೇಳಿಕೊಂಡು ತನ್ನ ಕನಸನ್ನು ಹೇಳಿಕೊಂಡ ಮೇಲೆ ಪರಿಶೀಲಿಸಿದಾಗ ಕಾಲಿನ ಸುತ್ತ ಗೆಜ್ಜೆ ತೊಡಿಸಲು ಸಣ್ಣ ತೂತು ಇರುವುದು ಕಂಡುಬರುತ್ತದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ