Advertisement

Tag: ಅಕಿರ ಕುರಸೋವ

ಕಸದಗುಂಡಿಯ ನೆರೆಹೊರೆ: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ನಾಯಕನನ್ನು ಪ್ರಾಂತ್ಯವೊಂದರ ಭೂಗತದೊರೆ ಮಾಡಿದೆ. ಅವನ ಪಾತ್ರವನ್ನು ನಿಕಷಕ್ಕೆ ಒಡ್ಡಲು ಅವನ ಎದುರು ಮತ್ತೊಂದು ಪಾತ್ರವನ್ನು ಇಡಲು ನಿರ್ಧರಿಸಿದೆ. ಮೊದಲು ಈ ಪ್ರತಿನಾಯಕ ಮಾನವೀಯ ಅನುಕಂಪವುಳ್ಳ ಆ ಪ್ರದೇಶದಲ್ಲಿ ತನ್ನ ದವಾಖಾನೆಯನ್ನು ತೆರೆಯುತ್ತಿರುವ ಯುವವೈದ್ಯ ಎಂದುಕೊಂಡೆ. ಆದರೆ ನಾನು ಮತ್ತು ವೆಕ್ಸಾ ಎಷ್ಟೇ ಪ್ರಯತ್ನಿಸಿದರೂ ಈ ಪಾತ್ರವನ್ನು ಜೀವಂತಗೊಳಿಸಲು ಸಾಧ್ಯವಾಗಲಿಲ್ಲ. ಈ ಪಾತ್ರದಲ್ಲಿ ಚೈತನ್ಯವೇ ಇರಲಿಲ್ಲ..”

Read More

ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್: ಕುರಸೋವ ಆತ್ಮಕತೆಯ ಪುಟ

“ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ಈ ಎಲ್ಲ ಏಳುಬೀಳುಗಳ ನಡುವೆ ಹುಟ್ಟಿತು. ಈ ಚಿತ್ರದ ಕುರಿತು ನನ್ನಾಳದಲ್ಲಿ ಭಾವನೆಗಳ ಅಲೆಗಳು ಏಳುತ್ತವೆ. ಯುದ್ಧಾನಂತರದಲ್ಲಿ ಸ್ವತಂತ್ರ ವಾತಾವರಣದಲ್ಲಿ ಮಾಡಿದ ಮೊದಲ ಚಿತ್ರ. ಕ್ಯೋಟೊದ ಹಳೆಯ ರಾಜಧಾನಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೆವು. ಹುಲ್ಲಿನ ಬೆಟ್ಟಗಳು, ಬೀದಿ ಬದಿಯ ಸಾಲು ಹೂಗಳ ರಸ್ತೆಗಳು, ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತಿದ್ದ ಹೊಳ್ಳಗಳು ಇವೆಲ್ಲವೂ …”

Read More

ಜಪಾನಿಯರ ಮನೋಭಾವಗಳು: ಕುರೊಸಾವನ ಆತ್ಮಕತೆಯ ಪುಟ

“ಯುದ್ಧದ ಸಮಯದಲ್ಲಿ ಸೌಂದರ್ಯಕ್ಕಾಗಿ ಹಸಿದು ಜಪಾನಿನ ಸಾಂಪ್ರದಾಯಿಕ ಕಲೆಗಳತ್ತ ನಡೆದಿದ್ದೆ. ಬಹುಶಃ ಸುತ್ತಲಿನ ವಾಸ್ತವದಿಂದ ಓಡಿಹೋಗುವ ಇಚ್ಛೆಯಿಂದ ಹೀಗೆ ಮಾಡಿರಬಹುದು. ಆದರೆ ಈ ಪಲಾಯನದ ಉದ್ದೇಶವು ಮಹತ್ವವಾದದ್ದನ್ನು ನೀಡಿತು. ಮೊಟ್ಟಮೊದಲ ಬಾರಿಗೆ ನೊಹ ನಾಟಕವನ್ನು ನೋಡಲು ಹೋದೆ. ಹದಿನಾಲ್ಕನೆಯ ಶತಮಾನದ ನೊಹ ನಾಟಕಕಾರ ಜಿಯಾಮಿಯು ಬರೆದಿದ್ದ ಸಿದ್ಧಾಂತಗಳನ್ನು ಓದಿದೆ.”

Read More

ಸುಗತ ಸಂಶಿರೊ- ಭಾಗ 2: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು”

Read More

ತಾವರೆ ಅರಳುವ ಸದ್ದು: ಅಕಿರ ಕುರಸೋವಾ ಆತ್ಮಕತೆಯ ಕಂತು

“ಇಲ್ಲೇ ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಗುರುಗಳಿಂದ ಬೈಯಿಸಿಕೊಂಡ ನಂತರ ತನ್ನ ಗುರುಗಳಿಗಾಗಿ ತಾನು ಪ್ರಾಣಕೊಡಲು ಕೂಡ ಸಿದ್ಧ ಎನ್ನುವುದನ್ನು ತೋರಿಸಲು ಉದ್ಯಾನದಲ್ಲಿದ್ದ ಕೊಳದೊಳಕ್ಕೆ ಹಾರುತ್ತಾನೆ. ಇಡೀ ರಾತ್ರಿ ಅಲ್ಲೇ ದಿಮ್ಮಿಯೊಂದನ್ನು ಹಿಡಿದು ಕಳೆಯುತ್ತಾನೆ. ಅವನ ಹಠ ಮುರಿದು ವಿಧೇಯತೆ ಅವನಲ್ಲಿ ಮೂಡುತ್ತದೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ