Advertisement

Tag: ಅಭಿಷೇಕ್ ವೈ.ಎಸ್

ಕಾವ್ಯ ಸಾಗರದಲ್ಲೊಂದು ‘ಒದ್ದೆಗಣ್ಣಿನ ದೀಪ’….

ಈ ಎಲ್ಲ ಕವಿತೆಗಳೂ ವಿವಿಧ ವಿಷಯಗಳನ್ನು ಕುರಿತು ಮಾತನಾಡಿವೆ. ಧರ್ಮ, ರಾಜಕೀಯ, ಪ್ರಭುತ್ವ, ನಿರಂಕುಶಾಧಿಕಾರ, ಕೋಮುವಾದ, ಧರ್ಮಾಂಧತೆ, ಬಡತನ, ಹಸಿವು, ಗೊಡ್ಡು ಸಂಪ್ರದಾಯ, ಪ್ರೇಮ, ಅಗಲಿಕೆ, ಸಾವು ಇತ್ಯಾದಿಗಳು ಸೇರಿಕೊಂಡಿವೆ. ಕಾವ್ಯದ ಕುರಿತು ಹೆಚ್ಚು ಗಂಭೀರ ಚರ್ಚೆಗಳಾಗುತ್ತಿಲ್ಲ ನಿಜ. ಆದರೆ ನಿಜವಾದ ಕಾವ್ಯಕ್ಕೆ ಇಂಥ ಔಪಚಾರಿಕ ಚೌಕಟ್ಟುಗಳೇಕೆ ಬೇಕು? ಸತ್ವಯುತವಾದ ಕಾವ್ಯ ಎಂದೆಂದಿಗೂ ತನ್ನ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ. ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಚಾಂದ್‌ ಪಾಷಾ ಎನ್.ಎಸ್. ಕವನ ಸಂಕಲನದ ಕುರಿತು ಬರೆದಿದ್ದಾರೆ

Read More

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕೊರೊನಾ ಕವಿತೆಗಳು

ದಾರಿ ತಪ್ಪಬಾರದೆಂದು ರೈಲು ಹಳಿಯ ಹಿಡಿದು ಹೊರಟ ಮುಗ್ಧ ಜನಗಳು ದೇಶದೆಲ್ಲೆಡೆ ಸಾರ್ವಜನಿಕ ಸಮಚಾರ ನಿರ್ಬಂಧವಾಗಿರುವಾಗ ಈ ಹಳಿಯಮೇಲೆ ಒಂದಿಷ್ಟು ಹೊತ್ತು ವಿರಮಿಸೋಣವೆಂದು ಮಲಗಿರುತ್ತಾರೆ. ದುರಾದೃಷ್ಟವಶಾತ್ ಗೂಡ್ಸ್ ರೈಲು ಹರಿದು ಹಳಿಯ ಮೇಲೆ ಮಲಗಿದ್ದವರು ಶವಗಳಾಗುತ್ತಾರೆ. ಅವರ ಪಕ್ಕವೇ ಬಿದ್ದಿದ್ದ ರೊಟ್ಟಿ ಚೂರುಗಳು, ರಕ್ತಸಿಕ್ತ ಮಾಂಸದ ತುಂಡುಗಳಾದ ಅಮಾಯಕ ಹೆಂಗಸರು ಮಕ್ಕಳು ಇಡೀ ದೇಶವನ್ನು ಮರುಗುವಂತೆ ಮಾಡುತ್ತವೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ “ಕೊರೊನಾ” ಕವನ ಸಂಕಲನದ ಕುರಿತ ಬರಹ ಇಲ್ಲಿದೆ

Read More

‘ಕಟ್ಟುತ್ತಿರುವೆ ಕವಿತೆ ನೋಡಾ…..’

‘ತಲೆಮಾರು’ ಕವಿತೆಯಲ್ಲಿನ ‘ಮೂಕಹಕ್ಕಿ’ ಪೂರ್ವಜರನ್ನು ಕುರಿತ ಕವಿತೆಯೆನ್ನಲು ಅನೇಕ ಪುರಾವೆಗಳು ಸಿಗುತ್ತವೆ. ಆಧುನಿಕತೆ ಮತ್ತು ಗತಕಾಲದ ಪಳೆಯುಳಿಕೆಗಳ ನಡುವೆ ತಣ್ಣನೆಯ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದಾಗಿದೆ. ಅವ್ವನ ತಾಯ್ತನದ ಕುರಿತು ‘ಮೀಯುವುದೆಂದರೆ ಚೈತನ್ಯಗಳ ಹುಟ್ಟು’ ಕವಿತೆಯಲ್ಲಿ ಆಪ್ತ ದಾಟಿಯಲ್ಲಿ ಬರೆಯುವ ಕವಯತ್ರಿಗೆ ಇಲ್ಲಿ ಬಾಲ್ಯದ ನೆನಪು ಮರುಕಳಿಸಿದೆ. ‘ಮಿಂದಾಗಲೆಲ್ಲ ಅವ್ವನದು ಶೀತದ ಚಡಪಡಿಕೆ’ ಎನ್ನುವಲ್ಲಿ ಅವ್ವನ ಕಾಳಜಿಯೊಂದಿಗೆ ಆಕೆಯ ಜವಾಬ್ದಾರಿಯನ್ನು ಕಂಡು ಮರುಗಲೇಬೇಕಾಗುತ್ತದೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ

Read More

‘ಒಂದು ಅಂಕ ಮುಗಿದು’ ಧ್ಯಾನಿಸುತ್ತಾ….

‘ತುಂಬೆಗಿಡ ಮತ್ತು ಹುಡುಗಿ’ ಸತ್ತು ಮಣ್ಣಾದ ಹುಡುಗಿಯೊಬ್ಬಳ ಸಮಾಧಿಮೇಲೆ ನೆಟ್ಟ ತುಂಬೆ ಗಿಡದ ವಿಷಯವಿರುವ ಕವಿತೆ. ಬದುಕಿನ ಉತ್ತರಗಳ ಹಂಗು ಹುಡುಗಿಗೂ, ತುಂಬೆಗಿಡಕ್ಕೂ ಇಲ್ಲ. ಬದುಕಿನ ನಶ್ವರತೆಗಳು, ಹುಟ್ಟು, ಸಾವಿನ ಕುರಿತು ಏಳುವ ಜಿಜ್ಞಾಸೆಗಳು ಕವಯತ್ರಿಯ ಭಾವಾತ್ಮಕತೆಯ ತೀವ್ರತರ ಹುಡುಕಾಟವನ್ನು ದರ್ಶಿಸುತ್ತವೆ. ‘ನೀನೆ ಒಂದು ಅಪೂರ್ಣ ಚಿತ್ರ’ ಕವಿತೆಯೂ ಬದುಕಿನ ಎಲ್ಲಾ ಕ್ಷಣಗಳಿಗೆ ಮುಖಾಮುಖಿಯಾಗಿ ಮುಪ್ಪಿನಲ್ಲಿ ಹಿಂದಿನ ಪುಟಗಳನ್ನು ತಿರುವಿಹಾಕುವ ವ್ಯಕ್ತಿಯೊಬ್ಬನ ಕುರಿತು ಬರೆದ ಕವಿತೆ.
ಅಭಿಷೇಕ್‌ ವೈ.ಎಸ್. ಬರೆಯುವ ಅಂಕಣ “ಕಾವ್ಯದ ಹೊಸ ಕಾಲ”

Read More

ಸಮಕಾಲೀನ ತಲ್ಲಣಗಳಿಗೆ ಹೆಗಲುಕೊಡುವ ಕವಿತೆಗಳು

ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ವಿಶಾಲ್‌ ಮ್ಯಾಸರ್‌ ಕವನ ಸಂಕಲನ ‘ಬಟ್ಟೆಗಂಟಿದ ಬೆಂಕಿ’ಯ ಕುರಿತ ಬರಹ ಇಲ್ಲಿದೆ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ