ಕರಿಯಣ್ಣ ಕೆಂಚಣ್ಣರೆಂಬ ಜಾನಪದ ದೈವಗಳು

ನಿಧಾನವಾಗಿ ಜನ ಆಗ ತಾನೆ ಸ್ನಾನ ಮಾಡಿ, ಒಪ್ಪ ಓರಣ ಮಾಡಿಕೊಂಡು ಬರಲಾರಂಭಿಸಿದ್ದರು. ಭಜನೆಯ ವೇಳೆಯಲ್ಲಿ ಗುಡಿಗೆ ಬರುವಾಗ ಸ್ನಾನ ಮಾಡಿ ಬರುವ ಪದ್ಧತಿಯೂ ಗಮನಾರ್ಹ. ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ವರ್ಗ ದುಡಿಮೆ ಮುಗಿಸಿಕೊಂಡು ಮನೆಗೆ ಬಂದು ಸ್ನಾನ ಮಾಡಿ ದೇವಾಲಯಕ್ಕೆ ಬರಲು ಸಂಜೆ ೭.೩೦ ಕಡಿಮೆ ಆಗುವುದಿಲ್ಲ ಅಂತ. ಅದಕ್ಕೇ ಇಡೀ ದೇವಾಲಯ ಗಲಗಲ ಅನ್ನಲು ೮ ಗಂಟೆ ತನಕ ಬೇಕಾಯಿತು. ನನ್ನ ವಾಪಸ್‌ ಊರಿಗೆ ಹೋಗುವ ಆತುರಕ್ಕೆ ಅರ್ಥವಿಲ್ಲ ಅಂತ ತಿಳಿದು ಮುಗಿದಾಗ ಹೊರಡೋದು ಅಂತ ತೀರ್ಮಾನಿಸಿ ವಾಚ್‌ ನೋಡಿಕೊಳ್ಳುವುದನ್ನು ಬಿಟ್ಟು ತೆಪ್ಪಗೆ ಕುಳಿತುಕೊಂಡೆ.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

Read More