Advertisement

Tag: ಕೆಂಡಸಂಪಿಗೆ

ಶೀರ್ಷಿಕೆಗಳ ಸಂಗತಿ: ಅರುಣಾ ಜಿ ಭಟ್. ಬದಿಕೋಡಿ ಬರಹ

ಇತ್ತೀಚೆಗೆ ಕಾದಂಬರಿಗಳ ಶೀರ್ಷಿಕೆಗಳು ಅತಿ ಆಕರ್ಷಕವಾಗಿರಲು ಬಯಸುತ್ತಾರೆನೋ? ಹಾಗಾಗಿ ಹಿರಿಯ ಕವಿಗಳ ಕವಿತೆಯ ಸಾಲುಗಳನ್ನು ಕಾದಂಬರಿಗೆ ಶೀರ್ಷಿಕೆಯಾಗಿಸುತ್ತಾರೆ. ಆಹಾಹಾ… ಅದೇನು ಮೋಹಕ ಪದ ಮಾಲೆಗಳು! ಕೆಲವು ಸಲ ಆ ಸಾಲುಗಳಿಗೆ ಸೋತು, ಹೇಗಿದೆಯೆಂದು ಓದಲು ಹೊರಟರೆ! ಹತ್ತು ಸಾಲಿಗೆ ನಿಲ್ಲಿಸುವ ಹಾಗಾಗುತ್ತದೆ. ಅದು ಕಾದಂಬರಿಯೋ, ಲೇಖನವೋ? ಪ್ರಬಂಧವೋ? ಒಂದೂ ಗೊತ್ತಾಗದ ಹಾಗೇ.
ಸಾಹಿತ್ಯ ಕೃತಿಗಳ ಶೀರ್ಷಿಕೆಗಳ ಕುರಿತು ಅರುಣಾ ಜಿ ಭಟ್. ಬದಿಕೋಡಿ ಬರಹ

Read More

ಮೂಕ ವೇದನೆ…: ಗುರುಪ್ರಸಾದ ಕುರ್ತಕೋಟಿ ಸರಣಿ

ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾಲ್ಕನೆಯ ಬರಹ

Read More

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ ಕೂತಿರುವಾಗ “ಮುಚ್ಚಿದ ಕಿಟಕಿಯಿಂದ…. ಸೋರಿ ಅವಳ ಕೂದಲ ಗುಂಗುರುಗಳ ಮೇಲೆ” ಹೊಳಪು ಸುರಿಯುವ ಬಿಸಿಲು ಕೋಲುಗಳು ನೀಡುವ ಹಿತವನ್ನು ಗಮನಿಸದೇ ಇರುವುದಿಲ್ಲ.
ಕಾವ್ಯಾ ಕಡಮೆ ಕಾದಂಬರಿ “ಪುನರಪಿ”ಯ ಕುರಿತು ರಾಮಪ್ರಸಾದ್ ಬಿ.ವಿ. ಬರಹ

Read More

ಇಂಗ್ಲೀಷ್ ಪಾಠ ಹಾಗೂ ಜಲಕಂಟಕದ ಕಹಿ ನೆನಪು: ಬಸವನಗೌಡ ಹೆಬ್ಬಳಗೆರೆ ಸರಣಿ

ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ

Read More

ಸ್ವೋಪಜ್ಞ ಮನಸ್ಸಿನ ಉದಾತ್ತ ಮಾನವ: ರಂಜಾನ್ ದರ್ಗಾ ಸರಣಿ

ಹೊರಗೆ ಸ್ಥಿತಪ್ರಜ್ಞರಂತೆ ಇದ್ದ ಅನಂತಮೂರ್ತಿ ಅವರು ಒಳಗೆ ಸ್ಥಿತಿಪ್ರಜ್ಞರಾಗಿದ್ದರು. ಕುಹಕ ಮಾತುಗಳಿಗೆ ಅವರೆಂದೂ ವಿಚಲಿತರಾಗುತ್ತಿರಲಿಲ್ಲ. ಎಲ್ಲ ಟೀಕೆಗಳನ್ನು ಸಹಿಸಿಕೊಳ್ಳುತ್ತ ಸಮಾಧಾನ ಚಿತ್ತದಿಂದಲೇ ತಾವು ಕಂಡುಕೊಂಡ ನಿಜದ ನಿಲವಿಗೆ ಬದ್ಧರಾಗಿರುತ್ತಿದ್ದರು. ಮನುಷ್ಯನ ಒಳಿತಿಗಾಗಿ ಅವರು ಎಂಥ ಅವಮಾನವನ್ನೂ ಎದುರಿಸಲು ಸಿದ್ಧರಾಗಿದ್ದರು. ಮನುಷ್ಯತ್ವಕ್ಕಿಂತ ಯಾವುದೇ ಧರ್ಮ, ಜಾತಿ, ಕ್ರಾಂತಿ ಮತ್ತು ದೇಶ ಕೂಡ ದೊಡ್ಡದಲ್ಲ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 75ನೇ ಕಂತು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ