‘ಚಾಲುಕ್ಯರ ಶಿಲ್ಪಕಲೆ’ಯೆಂಬ ಮಹಾನ್ ವೃಕ್ಷದ ಸುತ್ತ

ಬಾದಾಮಿ ಐಹೊಳೆಗಳ ಗುಹೆಗಳನ್ನು ಕಡೆಯುವ ವೇಳೆಗಾಗಲೇ ಆ ರೂವಾರಿಗಳಿಗೆ ಸುಮಾರು 800 ವರ್ಷಗಳ ಪರಂಪರೆಯ ಹಿನ್ನೆಲೆ ಇದ್ದಿತು. ಕಲ್ಪನೆ ಮತ್ತು ರೂಪಿಸುವ ಕುಶಲತೆಯೂ ಬೆಳೆಯಿತು: ಒಳ ಮತ್ತು ಹೊರ ಭಿತ್ತಿಗಳ ಅಲಂಕರಣವು ಸೇರ್ಪಡೆಗೊಂಡಿತು. ಚಾಲುಕ್ಯರ ರೂವಾರಿಗಳು ತಮ್ಮ ಪೂರ್ವಸೂರಿಗಳ ವಾರಸುದಾರರಂತೆ ತಮ್ಮ ಕರಕುಶಲತೆಯನ್ನು ಮೆರೆದರು. ಪರಂಪರೆಗೆ ಋಣಿಗಳಾಗಿಯೂ ತಮ್ಮದೇ ಆದ ಅನುಭವ, ಸ್ಥಳೀಯ ಪರಿಕರ, ಮಾಧ್ಯಮಗಳಿಂದ ಅನನ್ಯ ದೃಶ್ಯ ಲೋಕವನ್ನೇ ಸೃಷ್ಟಿಸಿದರು.
ಚಿತ್ರಕಲಾವಿದ ಪುಂಡಲೀಕ ಕಲ್ಲಿಗನೂರು ಅವರ “ಚಾಲುಕ್ಯರ ಶಿಲ್ಪಕಲೆ” ಶಿಲ್ಪಕಲಾ ಪುಸ್ತಕಕ್ಕೆ ಕೆ.ವಿ. ಸುಬ್ರಹ್ಮಣ್ಯ ಬರೆದ ಮುನ್ನುಡಿ

Read More