Advertisement

Tag: ಕೇಶವ ಕುಲಕರ್ಣಿ

ಸ್ಥಿರವಲ್ಲದ ಕಾಯದ ಸುತ್ತ ‘ಕಾಯಾ’ದ ಕಥಾಹಂದರ

ಸಮಂತಾ ಬೆಳೆಯುತ್ತಾ ‘ಹನಿ’ ಎನ್ನುವ ಹೆಂಗಸಿನೊಡನೆ ಸಲಿಂಗ ಸಂಬಂಧದಲ್ಲಿ ಜೊತೆಯಾಗುತ್ತಾಳೆ. ತನ್ನ ಪ್ರಿಯತಮೆ ಹನಿಯ ಕಲೆಗಳನ್ನು ಹೋಗಲಾಡಿಸಲು ಪ್ಲಾಸ್ಟಿಕ್ ಸರ್ಜರಿಗೆಂದು ಮಲೀಕನ ಹತ್ತಿರ ಬರುತ್ತಾಳೆ. ಮಲೀಕ ಹನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಾಗ, ತಕ್ಕ ಮಟ್ಟಿಗೆ ಧಡೂತಿ ತೂಕದ ಸಮಂತಾಳಿಗೂ ಪ್ಲಾಸ್ಟಿಕ್ ಸರ್ಜರಿಗೆ ಪ್ರಚೋದಿಸಿ ಒಪ್ಪಿಸುತ್ತಾನೆ; ಸಮಂತಾಳಿಗೆ ಮೇಲಿನಿಂದ ಕೆಳಗಿನವರೆಗೂ ಕಾಸ್ಮೆಟಿಕ್ ಸರ್ಜರಿ ಮಾಡುತ್ತಾನೆ. ಸಮಂತಾಳ ಪ್ಲಾಸ್ಟಿಕ್ ಸರ್ಜರಿಯ ಹೊತ್ತಿಗೆ ಮಲೀಕ ಮತ್ತು ಸಮಂತಾ ಇಬ್ಬರೂ ಜೊತೆಗಿದ್ದು ಮದುವೆಯಾಗುತ್ತಾರೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ಅನಿವಾಸಿ ಕನ್ನಡಿಗರ ಕತೆಗಳ ʼಗುರುʼ

ಗುರುಪ್ರಸಾದ್ ಕಾಗಿನಲೆ ಅವರ ಕತೆಗಳಲ್ಲಿ ರೂಪಕಗಳ ಉಪಯೋಗ ಮತ್ತು ಪ್ರಯೋಗ ಎರಡೂ ತುಂಬ ಕಡಿಮೆ. ಒಳಪ್ರಪಂಚದ ವಿವರಗಳನ್ನು ಎಷ್ಟು ಬೇಕೋ ಅಷ್ಟೇ ಉಪಯೋಗಿಸುತ್ತಾರೆ. ಅಂತರಂಗದ ಭಾವನಾಲೋಕವನ್ನು ತುಂಬ ಕೆದಕುತ್ತ ಹೋಗುವುದಿಲ್ಲ. ಬಾಹ್ಯವಿವರಗಳನ್ನು ಹೆಚ್ಚಾಗಿ ಕೊಟ್ಟು ಪುಟ ತುಂಬಿಸುವುದೆಂದರೆ ಇವರಿಗಾಗದು. ಯಾವ ಪಾತ್ರವನ್ನೂ ಅವರ ರೂಪ, ಎತ್ತರ, ಅಗಲ ಇತ್ಯಾದಿಗಳನ್ನು ತಿದ್ದಿ ತೀಡಿ ಬರೆಯುವುದಿಲ್ಲ. ಪಾತ್ರಗಳ ಊಹೆಯ ಸ್ವಾತಂತ್ರ್ಯವನ್ನು ನಮಗೇ ಬಿಡುತ್ತಾರೆ…

Read More

ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ಆಲೋಚನೆಗಳನ್ನು ರೂಪಿಸಿದ ಪತ್ರಿಕೆಗಳೂ, ಕಾಡುವ ಸೋಂಕುಗಳ ವಿಚಾರವೂ..

‘ತರಂಗ’ವಾಗಲಿ, ‘ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ‘ಸುಧಾ’ ಅಥವಾ ‘ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ‘ತರಂಗ’ ಇಂಥದ್ದೇ ಯುದ್ಧದಲ್ಲಿ ಹರಿದು ಹೋದದ್ದಿದೆ!
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳು

ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಓಟಿಟಿಯಲ್ಲಿ ನೋಡಿದ ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳ ಬಗ್ಗೆ ‘ಇಂಗ್ಲೆಂಡ್‌ ಪತ್ರ’ ಬರೆದಿದ್ದಾರೆ ಕೇಶವ ಕುಲಕರ್ಣಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ