Advertisement

Tag: ಗಿರಿಜಾ ಶಾಸ್ತ್ರಿ

ಕಿನ್ನರಿ…

ಯಾವ ಪ್ರಚಾರವನ್ನೂ ಒಲ್ಲದ ತಮ್ಮ ಪಾಡಿಗೆ ತಾವಿರುವ ಈ ತಪಸ್ವಿನಿ ತಮ್ಮ ಪೂರ್ವಾಶ್ರಮದಲ್ಲಿ ಒಬ್ಬ ಶ್ರೇಷ್ಠ ಸಾಹಿತಿಯೂ ಆಗಿದ್ದರು. ನಾನು ಇವರ ಅದ್ಭುತ ವ್ಯಕ್ತಿತ್ವದ ಬಗ್ಗೆ ಬರೆದ ಒಂದು ಲೇಖನ ಇವರಿಗೆ ಮುಜುಗರ ತಂದಿತ್ತು. ಅಸಮಾಧಾನಕ್ಕೆ ಕಾರಣವಾಗಿತ್ತು. ಇಂತಹವರನ್ನು ಭೇಟಿ ಮಾಡಿಸಬೇಕೆಂದೂ ಅವರ ಸಮ್ಮುಖದಲ್ಲಿ ಒಂದು ಪತ್ರಿಕಾ ಸಭೆಯನ್ನು ಕರೆಯಬೇಕೆಂದೂ ನನ್ನ ಪರಿಚಯದ ಸಾಹಿತಿಯೊಬ್ಬರು ನನಗೆ ಬಹಳ ದಿನಗಳಿಂದ ದುಂಬಾಲು ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ಬದುಕುತ್ತಿರುವ ಇವರನ್ನು ನಾನು ಒಮ್ಮೆ ಭೇಟಿಯಾಗಿ ಬಂದಿದ್ದುದೇ ಇದಕ್ಕೆ ಕಾರಣವಾಗಿತ್ತು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿ

Read More

ಕರುಣಾಳು ಬಾ ಬೆಳಕೆ…

ಅಂಗಳದಲ್ಲಿ ಯಾರೂ ಕಾಣಲಿಲ್ಲ. ಅಲ್ಲಿ ಯಾವ ಮರ್ಸಿಡಿಸ್, ಬೆನ್ಝ್ ಕಾರುಗಳೂ ನಿಂತಿರಲಿಲ್ಲ. ಭಕ್ತಾದಿಗಳ ಜನಜಂಗುಳಿ ಇರಲಿಲ್ಲ. ಝಗ ಝಗಿಸುವ ದೀಪಾಲಂಕೃತ ವೇದಿಕೆ, ಮೆತ್ತನೆಯ ಗಾದಿ ಯಾವುದೂ ಇರಲಿಲ್ಲ. ಇದ್ದುದೆಲ್ಲ ಕೇವಲ ನೀರವತೆ. ಒಳಗೆ ಯಾವುದೋ ಕೋಣೆಯೊಳಗಿಂದ ಬೆಳಕು ಕಾಣುತ್ತಿತ್ತು. ಆ ಕೋಣೆಯ ಕಿಟಕಿಯ ಬಳಿ ನಿಂತೆವು.
ಗಿರಿಜಾ ಶಾಸ್ತ್ರಿ ಬರೆಯುವ “ಆ ಕಾಲದ ರಾಜಲಕ್ಷ್ಮಿ” ಸರಣಿಯಲ್ಲಿ ಹೊಸ ಬರಹ

Read More

“ಆ ಕಾಲದ ರಾಜಲಕ್ಷ್ಮಿ…” ಸರಣಿ ಆರಂಭ

ರಾಜಲಕ್ಷ್ಮಿ ಎನ್. ರಾವ್ ಅವರನ್ನು ಅವರ ಕತೆಗಳ ಮೂಲಕ ಪರಿಚಯ ಮಾಡಿಕೊಂಡು ಸುಮಾರು ಮೂವತ್ತು ವರುಷಗಳ ಮೇಲಾಯಿತು. ನನ್ನ ಅಧ್ಯಯನ ಮತ್ತು ವೆಂಕಟಲಕ್ಷ್ಮಿಯವರ ಸಂದರ್ಶನದ ಒಟ್ಟು‌ ಮೊತ್ತವಾಗಿ ನಾನು ಕಂಡುಕೊಂಡ ಕತೆಗಾರ್ತಿ ರಾಜಲಕ್ಷ್ಮಿಯವರು ಬೆರಗು ಹುಟ್ಟಿಸಿದರು. ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ಸನ್ಯಾಸಿನಿಯಾದ ಅವರನ್ನು ನಾನು ಅವರ ಆಶ್ರಮದಲ್ಲಿ ಭೇಟಿಯಾದಾಗ ಆ ಬೆರಗು ಬೆಳಕಾಗಿ ನನ್ನ ಮುಂದೆ ನಿಂತಿತ್ತು. ಆ ಬೆಳಕು ಈಗ ವಿಸ್ಮಯವಾಗಿದೆ.
ಗಿರಿಜಾ ಶಾಸ್ತ್ರಿ ಬರೆಯುವ ಸರಣಿ “ಆ ಕಾಲದ ರಾಜಲಕ್ಷ್ಮಿ” ಪ್ರತಿ ಶುಕ್ರವಾರದಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು

‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು.
ಇಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳ ಕುರಿತು ಗಿರಿಜಾ ಶಾಸ್ತ್ರಿ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ