ಎ.ಎನ್. ಪ್ರಸನ್ನ ಅವರ ಕಥನ ಕಲೆ ಮತ್ತು ಕಥಾ ಜಗತ್ತು

ಇಲ್ಲಿನ ಎಲ್ಲಾ ಕಥೆಗಳಲ್ಲಿ ಪಾತ್ರಗಳ ದಿನನಿತ್ಯದ ಬದುಕಿನ ಲಯಗಳನ್ನು ಸೂಕ್ತ ವಿವರಗಳ ಮೂಲಕ ನಿರೂಪಿಸಲಾಗಿದೆ. ಪ್ರಸನ್ನ ಅವರದೇ ಆದ ಒಂದು ನಿರೂಪಣಾ ವಿಶೇಷತೆ ಎಂದರೆ, ಅವರು ಪಾತ್ರಗಳನ್ನು ಸುತ್ತುವರಿದಿರುವ ಗಾಳಿ, ಬೆಳಕು ಮತ್ತು ಪೀಠೋಪಕರಣಗಳು ಹಾಗೂ ಇತರ ವಸ್ತುವಿಶೇಷಗಳ ಮೂಲಕವೂ ಪಾತ್ರಗಳ ಮಾನಸಿಕ ಏರುಪೇರುಗಳನ್ನು ಪ್ರತಿಫಲಿಸುವುದು. ಈ ಮಾತುಗಳಿಗೆ `ಹುಡುಕಾಟ’ ಕಥೆಯ ನಾಯಕಿ ಸುಕೃತಾಳ ಬಗೆಗೆ ದಿನದ ವಿವಿಧ ಹಂತಗಳಲ್ಲಿ, ವಿವಿಧ ಆವರಣಗಳಲ್ಲಿ ಅವಳ ವಿವಿಧ ಮಾನಸಿಕ ಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ಈ ನಿರೂಪಣೆಗಳನ್ನು ಗಮನಿಸಬಹುದು.
ಎ.ಎನ್. ಪ್ರಸನ್ನ ಹೊಸ ಕಥಾ ಸಂಕಲನ ‘ಬಿಡುಗಡೆ’ಗೆ ಗಿರೀಶ್ ವಿ. ವಾಘ್ ಬರೆದ ಮುನ್ನುಡಿ ನಿಮ್ಮ ಓದಿಗೆ

Read More