Advertisement

Tag: ಚಲನಚಿತ್ರ

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಬದುಕೆಂಬ ಚಹಾಗೊಂದಿಷ್ಟು ಒಲವಿನ ಸಕ್ಕರೆ: ರಾಮ್ ಪ್ರಕಾಶ್ ರೈ ಕೆ. ಸರಣಿ

ಜನಾರ್ಧನನ ಸಹೋದ್ಯೋಗಿ, ಆಪ್ತ ಮಿತ್ರ ಅಸಿಸ್ಟೆಂಟ್ ಶ್ರೀನಿವಾಸ ಅಸಂಖ್ಯ ಬಾರಿ ಅವನ ಪತ್ನಿಯ ಜೊತೆ ಮಾತನಾಡುತ್ತಲೇ ಇರುತ್ತಿದ್ದ. ಜೊತೆಯಾಗಿ ದಿನಗಳು ರಾಶಿಗಟ್ಟಲೆ ಕಳೆದರೂ, ಆಷಾಢದ ಮಳೆಯಂತೆ ಇವರ ಸಂವಾದ ಮುಗಿಯುವುದಿಲ್ಲ, ಈ ಪ್ರೀತಿಯ ಬಣ್ಣಿಸುವ ಪರಿಯೆಂತು ಎಂದು ಜನಾರ್ಧನ ಅಂದುಕೊಳ್ಳುತ್ತಿದ್ದ. ಒಂದು ಬಾರಿ ಶ್ರೀನಿವಾಸನ ಮನೆಗೆ ಹೋಗುವ ಜನಾರ್ಧನನಿಗೆ ಅವನ ಪತ್ನಿಗೆ ಮಾತು ಬರುವುದಿಲ್ಲ ಎಂದು ತಿಳಿಯುತ್ತದೆ.
ರಾಮ್ ಪ್ರಕಾಶ್ ರೈ ಕೆ. ಸರಣಿ

Read More

ರಾಮ್ ಪ್ರಕಾಶ್ ರೈ ಕೆ. ಹೊಸ ಸರಣಿ “ಸಿನಿ ಪನೋರಮಾ” ಇಂದಿನಿಂದ

ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.
ರಾಮ್ ಪ್ರಕಾಶ್ ರೈ ಕೆ. ಬರೆಯುವ ಸಿನಿಮಾಗಳ ಕುರಿತ “ಸಿನಿ ಪನೋರಮಾ” ಸರಣಿ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಕಾಗೆ ಕಾರುಣ್ಯದ ಕಣ್ಣು: ಬರಗೂರು ರಾಮಚಂದ್ರಪ್ಪ ಕೃತಿಯ ಒಂದು ಬರಹ

ಇನ್ನೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಚಿತ್ರೀಕರಣಕ್ಕೆಂದು ನಾನು ಆಯ್ಕೆ ಮಾಡಿಕೊಂಡ ಸ್ಥಳಗಳು ಸಾಂಪ್ರದಾಯಿಕ ರಮಣೀಯ ಸ್ಥಳಗಳಲ್ಲ. ಅಂದರೆ ಹಸಿರು, ನದಿ ತೀರ ಇತ್ಯಾದಿಗಳಿಂದ ಕೂಡಿದ ಸ್ಥಳಗಳಲ್ಲ. ಬಯಲು ಸೀಮೆಯ ಬೆಟ್ಟ, ಗುಡ್ಡ, ಹಸಿರಿಲ್ಲದೆ ಒಣಗಿದ ಪರಿಸರಗಳನ್ನು ಆಯ್ಕೆ ಮಾಡಿಕೊಂಡೆ. ಪ್ರಕೃತಿಯಲ್ಲಿರುವ ಸಮಸ್ತವೂ ಮುಖ್ಯವೆಂಬ ತಾತ್ವಿಕತೆ ನನ್ನದು. ನನ್ನ ಸಿನಿಮಾ ಕತೆಗಳು ಬಹುಪಾಲು ನಮ್ಮ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ದೇವರಾಯನ ದುರ್ಗ, ಚಿತ್ರದುರ್ಗ – ಇವೇ ಮುಂತಾದ ವಲಯಗಳಿಗೆ ಹೊಂದುತ್ತಿದ್ದ ವಸ್ತುವನ್ನು ಒಳಗೊಂಡಿದ್ದವು.
ಬರಗೂರು ರಾಮಚಂದ್ರಪ್ಪ ಅವರ “ಕಾಗೆ ಕಾರುಣ್ಯದ ಕಣ್ಣು” ಆಯ್ದ ಅನುಭವಗಳ ಕಥನದ ಒಂದು ಬರಹ ನಿಮ್ಮ ಓದಿಗೆ

Read More

ಕಪ್ಪು ಬಿಳುಪಿನಾಚೆಯ…. ಇರಟ್ಟ

ಕೊನೆಗೂ ವಿನೋದ್ ಸತ್ತಿದ್ದು ಹೇಗೆ?! ಊರ ತುಂಬ ಶತ್ರುಗಳನ್ನು ಸಂಪಾದಿಸಿದ ಅವನನ್ನು ಅವನು ಕೆಲಸ ಮಾಡುವ ಸ್ಟೇಷನ್ನಿನಲ್ಲಿಯೇ ಸಾಯಿಸಿದವರು ಯಾರು?! ಎನ್ನುವುದು ಚಿತ್ರದ ಕಥಾ ಹಂದರ. ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಾ, ಅದು ಹೇಳುತ್ತಿರುವ ವಿಷಯವನ್ನು ಬಗೆಯುತ್ತಾ ಹೋದರೆ ಪ್ರತಿ ಸಲವೂ ಹೊಸ ಹೊಸ ಆಯಾಮಗಳು ಹೊಳೆಯುತ್ತವೆ, ಮನುಷ್ಯನ ಎರಡು ವೈರುಧ್ಯಗಳನ್ನ ಯಾವ ಅವಸರವಿಲ್ಲದೆ ಬೆನ್ನಲ್ಲೊಂದು ಛಳುಕು ಹುಟ್ಟಿಸುತ್ತ ಸಾಗುತ್ತದೆ.
ಮಲಯಾಳಂನ “ಇರಟ್ಟ” ಸಿನೆಮಾದ ಕುರಿತು ಜಯರಾಮಚಾರಿ ಬರಹ ನಿಮ್ಮ ಓದಿಗೆ

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ