ಗಾಳಿಗೆ ಜೋಗುಳವಾಗುವ ಕವಿತೆಗಳು

ಇಡಿಯಾಗಿ ಕವಿತೆ ನಮ್ಮೊಳಗಿನ ಅರಿವಿನ ಅನುಪಸ್ಥಿತಿಯ ಕಾರಣವಾಗಿ ಮನುಕುಲಕ್ಕೆ ಮಾರಕವಾಗಿರುವ, ಸ್ವಯಂ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಪಂಥಗಳೆಂಬ ರುಗ್ಣಗಳಿಂದ ಬಾಧೆಗೊಳಗಾಗಿರುವ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತದೆ. ಇಡಿಯಾಗಿ ಕವಿತೆ ರೂಪಕಗಳ ಮೂಲಕವೇ ಓದುಗನೊಂದಿಗೆ ಮುಖಾಮುಖಿಯಾಗುತ್ತ, ನಾವೆಲ್ಲ ಕಂಡೂ ಕಾಣದಂತಿರುವ ಲೋಕದ ಅಸಹ್ಯಗಳನ್ನು ಕಾಣಿಸುತ್ತ ಹೋಗುತ್ತದೆ! ಹಾಗೆ ನೋಡಿದರೆ ಈ ಕವಿತೆಯಲ್ಲಿ ಬರುವ ‘ಫಕೀರ’ ಬೇರಾರೂ ಆಗಿರದೆ ಸಮಾಜವನ್ನು ನೈತಿಕತೆಯ ಪಾತಳಿಯ ಮೇಲೆ ಮುನ್ನಡೆಸಲು ಬೇಕಾಗಿರುವ ‘ಅರಿವು’ ಎಂಬ ಪ್ರಖರವಾದ ಬೆಳಕೇ ಆಗಿದೆ.
ದೇವು ಮಾಕೊಂಡ ಕವನ ಸಂಕಲನ ‘ಗಾಳಿಗೆ ತೊಟ್ಟಿಲು ಕಟ್ಟಿ’ ಪುಸ್ತಕದ ಕುರಿತು ಕಲ್ಲೇಶ್ ಕುಂಬಾರ್, ಹಾರೂಗೇರಿ ಬರಹ

Read More