“ಆತ್ಮ ಧ್ಯಾನವೇ ಬುತ್ತಿಯಾದ ಕ್ಷಣ”

ಪುಸ್ತಕ ಕೆಳಗಿಡುವಾಗ ‘ನಾಗೇಶಿ’ ಒಬ್ಬ ಆಪ್ತ ಸಖನಾಗಿ ಎದೆಹೊಕ್ಕಿಬಿಡುತ್ತಾನೆ. ಲೌಕಿಕದ ಬದುಕು ತೋರುವ ವಿಭಿನ್ನ ಮುಖಗಳ ಕರಾಳತೆಯ ದರ್ಶನದೊಂದಿಗೆ ಹೇಗೆ ಅವನ್ನು ಮೆಟ್ಟಿ ನಿಂತು ಅಲೌಕಿಕದತ್ತ ಸಾಗಬೇಕೆಂಬ ಪರಾಮರ್ಶೆಯಿದೆ. ಒಣ ಉಪದೇಶ ಕೊಡುವ ಒಂದೂ ಸಾಲಿರದ, ಆದರೆ ನಮ್ಮೊಳಗೆ ನಾವೇ ಇಳಿದು ತಿದ್ದಿಕೊಳ್ಳಬಹುದಾದ ಒಂದು ಪ್ರಚೋದನೆ ಇಲ್ಲಿದೆ. ಕೊನೆಯಲ್ಲಿ ಬದುಕಿನ ಮಾದರಿ ಹೇಗಿರಬೇಕು ಎಂಬ ಸೂಕ್ಷ್ಮದರ್ಶನಗೈವ ಈ ಗಜಲ್ಲುಗಳು ಖಂಡಿತ ಖುಷಿ ಕೊಡುವ, ಎಲ್ಲ ಬೇಸರದ ಕ್ಷಣಗಳಿಗೂ ಜೊತೆಯಾಗಿ ಜೀವದ್ರವ್ಯ ಸಿಂಪಡಿಸುವ ಸಖರಂತೆ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ.
ನಾಗೇಶ್ ನಾಯಕ ಅವರ “ಆತ್ಮ ಧ್ಯಾನದ ಬುತ್ತಿ” ಗಝಲ್‌ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More