ನಾಗ ಐತಾಳರು ಇನ್ನಿಲ್ಲ….

ಬಾವಿಕಟ್ಟೆಯ ಪಶ್ಚಿಮಕ್ಕೆ ಬಚ್ಚಲು ಮನೆ. ಸ್ನಾನ ಮಾಡಲು ಬಚ್ಚಲು ಹೊಂಡವಿದ್ದಿತು, ಸ್ನಾನಕ್ಕೆ ಬಿಸಿನೀರು ಕಾಯಿಸಲೊಂದು ಬಹಳಷ್ಟು ದೊಡ್ಡ ಗಾತ್ರದ ಹಂಡೆ, ಬಟ್ಟೆ ಬದಲಾಯಿಸಲು ಸಾಕಷ್ಟು ವಿಸ್ತಾರವಾದ ಸ್ಥಳ. ಚಿಕ್ಕಂದಿನಲ್ಲಿ ನಾನು ನನ್ನ ತಮ್ಮಂದಿರನ್ನು ಕೂಡಿಕೊಂಡು ಬಚ್ಚಲು ಒಲೆಯ ಮುಂದೆ ಚಳಿಗಾಲದಲ್ಲಿ ಮೈ ಕಾಯಿಸುತ್ತ, ಹುಲ್ಲು ಕಡ್ಡಿಗಳಿಗೆ ಬೆಂಕಿ ತಗುಲಿಸಿ, ಸಿಗರೇಟು ಸೇದುತ್ತಿದ್ದೇವೆಂಬ; ಆಟವಾಡಿದ ದಿನಗಳ ನೆನಪಾಗುತ್ತಿದೆ.
ಹಿರಿಯ ಸಾಹಿತಿಗಳಾದ ನಾಗ ಐತಾಳರು (ಆಹಿತಾನಲ) ನೆನ್ನೆ ತೀರಿಕೊಂಡರು. ಅವರ ನೆನಪಿನಲ್ಲಿ ಅವರ “ಕಾಲ ಉರುಳಿ ಉಳಿದುದಷ್ಟೇ ನೆನಪು” ಆತ್ಮಕತೆಯ ಭಾಗವೊಂದನ್ನು ನಿಮ್ಮ ಓದಿಗೆ ಇಲ್ಲಿ ಹಂಚಿಕೊಳ್ಳಲಾಗಿದೆ

Read More