Advertisement

Tag: ನೆದರ್ಲ್ಯಾಂಡ್ಸ್

ನೆದರ್ಲ್ಯಾಂಡ್ಸ್‌ ಕಟ್ಟಿಕೊಟ್ಟ ಮರೆಯಲಾಗದ ನೆನಪುಗಳು…

ಉದ್ಘಾಟನಾ ಸಮಾರಂಭದಲ್ಲಿ ಭವ್ಯ ಸಭಾಂಗಣದ ಹೊರಗಡೆ ನೂರಾರು ಹಣತೆಗಳ ಗೋಪುರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದರು. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಬಾಂಬುದಾಳಿಗೆ ಈಡಾದ ಲಕ್ಷಾಂತರ ನತದೃಷ್ಟರ ಸ್ಮರಣಾರ್ಥ ಆ ಹಣತೆಗಳನ್ನು ಬೆಳಗುವ ಅವಕಾಶವನ್ನು ಪ್ರತಿನಿಧಿಗಳಿಗೆ ಕಲ್ಪಿಸಲಾಗಿತ್ತು. ಅಮೆರಿಕದ ಹದಿಹರೆಯದ ಹುಡುಗಿಯೊಬ್ಬಳು ಬಹಳ ತಲ್ಲೀನತೆಯಿಂದ ದೀಪ ಬೆಳಗಿಸಲು ಪ್ರಯತ್ನಿಸುತ್ತಿದ್ದಳು. ಬಾಂಬು ದುರಂತಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳ ಪೋಸ್ಟರ್‌ಗಳನ್ನು ಅಲ್ಲಿಯೆ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಭಯಂಕರ ಚಿತ್ರಗಳು ಅವಳನ್ನು ಘಾಸಿಗೊಳಿಸಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 60ನೇ ಕಂತು ನಿಮ್ಮ ಓದಿಗೆ.

Read More

ಡಚ್ ಜನರ ಸೈಕಲ್ ಪ್ರೀತಿ!

ಗಿತೋರ್ನ್ ಪಟ್ಟಣದ ಐತಿಹಾಸಿಕ ಭಾಗಗಳಿಗೆ ರಸ್ತೆ ಮಾರ್ಗವಿಲ್ಲ. ದೋಣಿಯ ಸಹಾಯದಿಂದ ಮಾತ್ರ ತಲುಪಬಹುದು. ಇಲ್ಲಿನ ಬಹುತೇಕ ಮನೆಗಳು ಇಂದು “ಹೋಂ ಸ್ಟೇ” ಆಗಿ ಮಾರ್ಪಟ್ಟಿವೆ. ಪ್ರವಾಸಿಗರಿಗೆ ಇದೊಂದು ಅನನ್ಯ ಅನುಭವ. ನಮ್ಮಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಇದ್ದಂತೆ, ಇಲ್ಲಿ ಬೋಟಿನ ವ್ಯವಸ್ಥೆ ಇದೆ. ಕಾಲುವೆಗಳ ಪಕ್ಕದಲ್ಲಿ ನಡೆದು ಹೋಗಲು ಪಾದಚಾರಿ ಮಾರ್ಗವಿದೆ. ಅಲ್ಲಲ್ಲಿ ಪಾದಚಾರಿಗಳಿಗೆ ಸಣ್ಣ ಸೇತುವೆಗಳಿವೆ.
ಗುರುದತ್ ಅಮೃತಾಪುರ ಬರೆಯುವ “ದೂರದ ಹಸಿರು” ಸರಣಿ

Read More

ನೆದರ್ಲ್ಯಾಂಡ್ಸ್ ನೆನಪು: ಕಂದಪುಷ್ಪದ ಕಥೆ

ಟುಲಿಪ್ ಹೂವು ಒಂದು ಪದರದ ಹೂವು. ಮೊಗ್ಗಾಗಿದ್ದಾಗ ಅಷ್ಟು ವಿಶೇಷವಾಗಿ ಕಾಣುವುದಿಲ್ಲ. ಪೂರ್ಣ ಅರಳಿ, ದಳಗಳು ತೆರೆದರೂ ಅಷ್ಟು ವಿಶೇಷ ಅನ್ನಿಸುವುದಿಲ್ಲ. ಅರಳುವ ಹಂತಗಳಲ್ಲಿ ಬಹಳ ಸುಂದರವಾಗಿ ಕಾಣುವುದು ಇವೆರಡರ ಮಧ್ಯದ “ಬಲ್ಬ್” ಹಂತ. ಟುಲಿಪ್ ಬಲ್ಬ್ ಗಳ ಅವಧಿ ಎರಡರಿಂದ ಮೂರೂ ವಾರಗಳು ಅಷ್ಟೇ. ಸಂಪೂರ್ಣ ಅರಳುವ ಪ್ರಕ್ರಿಯೆ ಆಯಾ ವರ್ಷದ ಚೈತ್ರ ಕಾಲದ ಹವಾಮಾನಕ್ಕೆ ತಕ್ಕಂತೆ ಒಂದೆರೆಡು ವಾರ ಅತ್ತಿಂದಿತ್ತ ಬದಲಾಗುತ್ತಿರುತ್ತದೆ.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಚೀಸನು ಮೆಲ್ಲದ ನಾಲಗೆ ಯಾಕೆ?:ಸೀಮಾ ಹೆಗಡೆ ಅಂಕಣ

“ಚೀಸ್ ಮಾರುಕಟ್ಟೆಯಲ್ಲಿ ಬೆಲೆ ಚೌಕಾಶಿಮಾಡಿ ಕೈ ಮುಟ್ಟುತ್ತಾ, ಒಬ್ಬರು ಇನ್ನೊಬ್ಬರ ಕೈಗೆ ಚಪ್ಪಾಳೆ ಹೊಡೆಯುವುದನ್ನು ಮೊದಲಬಾರಿಗೆ ನೋಡಿದಾಗ ನನಗೆ ಚಿಕ್ಕಂದಿನಲ್ಲಿ ಅಪ್ಪನ ಕೊಟ್ಟಿಗೆಗೆ ಆಕಳುಗಳನ್ನು ಕೊಳ್ಳಲು ಗಿರಾಕಿಗಳನ್ನು ಕರೆತರುವ ದಲ್ಲಾಳಿಗಳ ನೆನಪಾಗಿತ್ತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ