ಎಂಬತ್ತರ ದಶಕದ ಮಹತ್ವದ ಸಾಹಿತ್ಯ

ವಿಮರ್ಶಾ ಕ್ಷೇತ್ರದಲ್ಲಿ ಕಣ್ಣನ್ನು ಸೆಳೆಯುವಂತಹ ಬೆಳವಣಿಗೆ ಆಗಿದೆ. ಸೃಜನಶೀಲ ಸಾಹಿತ್ಯದ ಹಿಂದೆಯೂ ಪ್ರಜ್ಞಾಪೂರ್ವಕ ಚಿಂತನೆ ಇರುವುದು ಅನಿವಾರ್ಯವಾದ ಯುಗದಲ್ಲಿ ಸಾಹಿತ್ಯ ವಿಮರ್ಶೆ ಬೆಳೆದಷ್ಟೂ ಸೃಜನಶೀಲ ಸಾಹಿತ್ಯಕ್ಕೂ ಲಾಭ. ಜಿ.ಎಚ್. ನಾಯಕ, ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚನ್ನಿ, ಡಿ.ಆರ್. ನಾಗರಾಜ ಮೊದಲಾದವರ ವಿಮರ್ಶೆಯ ಬರಹಗಳನ್ನು ಓದಿದಾಗ ವಿಮರ್ಶೆಯ ಉಪಕರಣಗಳು ಎಷ್ಟು ಸೂಕ್ಷ್ಮವಾಗಿವೆ ಎನ್ನುವುದು ಸಂತೋಷವನ್ನುಂಟು ಮಾಡುತ್ತದೆ. ಹಲವೊಮ್ಮೆ ಈ ವಿಶ್ಲೇಷಣೆಯಲ್ಲಿ ಬೌದ್ಧಿಕ ಅಂಶ ತಾನೇತಾನಾಗಿ, ರಸಾ ಸ್ವಾದನೆ ಹಿಂದುಳಿಯುತ್ತಿದೆಯೋ ಎಂದು ಆತಂಕವಾಗುತ್ತದೆ.
ಪ್ರೊ. ಎಲ್.ಎಸ್. ಶೇಷಗಿರಿರಾವ್ ಬರೆದ “ಆಧುನಿಕ ಕನ್ನಡ ಸಾಹಿತ್ಯ” ಕೃತಿಯಿಂದ ಒಂದು ಲೇಖನ ನಿಮ್ಮ ಓದಿಗೆ

Read More