Advertisement

Tag: ಫ್ಯದೊರ್ ದಾಸ್ತಯೇವ್ಸ್ಕಿ

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

Read More

ಅಪರಾಧಕ್ಕೆ ತಕ್ಕ ಶಿಕ್ಷೆ ಮತ್ತು…. ಮುಂದಿನ ಹಾದಿ

ಅಪರಾಧಿಯು ತಪ್ಪೊಪ್ಪಿಕೊಂಡ ಐದು ತಿಂಗಳ ನಂತರ ತೀರ್ಪು ಹೊರಬಂದಿತು. ರಝುಮಿಖಿನ್ ಸಾಧ್ಯವಾದಾಗಲೆಲ್ಲ ಸೆರೆಮನೆಗೆ ಹೋಗಿ ಅವನ ಭೇಟಿ ಮಾಡುತ್ತಿದ್ದ. ಸೋನ್ಯಾಳೂ ಅಷ್ಟೇ. ದೂರವಾಗುವ ದಿನ ಬಂದಿತು. ಶಾಶ್ವತವಾಗಿ ದೂರವಾಗುತ್ತಿಲ್ಲ ನಾವು ಎಂದು ದುನ್ಯಾ ಆಣೆ ಮಾಡಿ ಹೇಳಿದಳು ಅಣ್ಣನಿಗೆ. ರಝುಮಿಖಿನ್ ಕೂಡ ಅದನ್ನೇ ಹೇಳಿದ. ಕನಿಷ್ಠಪಕ್ಷ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಏನು ಮಾಡಬೇಕೆಂಬ ಬಗ್ಗೆ ಅವನ ಸ್ನೇಹಪೂರ್ಣ ಮನಸಿನಲ್ಲಿ ಆಗಲೇ ಒಂದು ಯೋಜನೆ ದೃಢವಾಗಿ ರೂಪುತಳೆದಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಕೊನೆಯ ನುಡಿಗಳು.

Read More

ಅಪರಾಧ ಮತ್ತು ಶಿಕ್ಷೆ: ಸ್ಥಿಮಿತವಿಲ್ಲದ ಮನಸ್ಸು

ಈ ಎಲ್ಲ ಮಾತು ರಾಸ್ಕೋಲ್ನಿಕೋವ್‌ನನ್ನು ತಡೆದು ನಿಲ್ಲಿಸಿದವು. ಅವನ ನಾಲಗೆ ತುದಿಗೆ ಬಂದಿದ್ದ, ‘ನಾನು ಕೊಲೆಮಾಡಿದೆ,’ ಅನ್ನುವ ಮಾತು ಅಲ್ಲೇ ಹೆಪ್ಪುಗಟ್ಟಿತು. ಈ ಎಲ್ಲ ಉದ್ಗಾರ ಶಾಂತವಾಗಿ ಕೇಳಿಸಿಕೊಂಡ. ಹಿಂದೆ ತಿರುಗಿ ನೋಡದೆ ಪೋಲೀಸು ಸ್ಟೇಷನ್ನಿನ ರಸ್ತೆಯಲ್ಲಿ ನಡೆದ. ದಾರಿಯಲ್ಲಿ ಅವನ ಮುಂದೆಯೇ ಯಾವುದೋ ನೆರಳು ಹಾದು ಹೋದ ಹಾಗೆ ಅನ್ನಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಅವನು ಊಹಿಸಿದಂತಿತ್ತು. ಹೇಮಾರ್ಕೆಟ್ಟಿನಲ್ಲಿ ಎರಡನೆಯ ಬಾರಿ ಇಡೀ ಲೋಕಕ್ಕೆ….

Read More

ನಾನಿನ್ನು ಹೋಗಿ ಬರ್ತೀನಿ…. ಅಮ್ಮಾ…!

ಹೌದು. ಅವನಿಗೆ ಸಂತೋಷಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಇರುವುದರಿಂದ, ಅಮ್ಮನ ಜೊತೆ ಅವನೊಬ್ಬನೇ ಇದ್ದದ್ದರಿಂದ ಬಹಳ ಸಂತೋಷವಾಗಿತ್ತು. ಇದ್ದಕಿದ್ದ ಹಾಗೆ, ಇಷ್ಟೆಲ್ಲ ಭಯಂಕರ ತಿಂಗಳುಗಳ ನಂತರ ಅವನ ಮನಸ್ಸು ಬಹಳ ಮೃದುವಾಗಿತ್ತು. ಅಮ್ಮನ ಕಾಲಿಗೆ ಬಿದ್ದ, ಅಮ್ಮನ ಪಾದಕ್ಕೆ ಮುತ್ತಿಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು. ಈಗ ಅವಳಿಗೆ ಆಶ್ಚರ್ಯವಿರಲಿಲ್ಲ, ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಯಾವುದು ಕನಸು? ಯಾವುದು ನನಸು?

ಸೋನ್ಯಾಳನ್ನು ಅವಳ ದಿಗ್ಭ್ರಾಂತಿ, ಅಸ್ಪಷ್ಟ ಭಯಗಳಲ್ಲಿ, ಅಪಶಕುನದ ಹೆದರಿಕೆಗಳಲ್ಲಿ ಹಾಗೇ ಬಿಟ್ಟು ಅವನು ಹೊರಟು ಹೋದ. ಅವನು ಇನ್ನೊಂದು ವಿಚಿತ್ರವಾದ, ಅನಿರೀಕ್ಷಿತವಾದ ಭೇಟಿ ನೀಡಿದ್ದ ಅನ್ನುವುದು ಆನಂತರ ತಿಳಿಯಿತು. ಹನ್ನೊಂದು ಗಂಟೆಯ ನಂತರ ತಿಳಿಯಿತು. ಮಳೆ ಇನ್ನೂ ನಿಂತಿರಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ