Advertisement

Tag: ಭಾರತಿ ಬಿ. ವಿ

ನೆನಪಾಗಿ ಉಳಿದ ಟ್ರೂತನ್

ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!
ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಭಾರತಿ ಬಿ.ವಿ. ಅನುವಾದಿಸಿದ ಮಾಂಟೋನ ಕತೆ “ದಾದಾ ಮಮ್ಮದ್”

ಬಾಗಿಲು ತೆರೆಯಿತು. ಒಬ್ಬ ಸಣಕಲು ಮನುಷ್ಯ ಒಳ ಬಂದ. ಮೊದಲ ನೋಟದಲ್ಲೇ ಅವನ ಮೀಸೆ ನನ್ನ ಗಮನ ಸೆಳೆಯಿತು. ನಿಜಕ್ಕೂ ಹೇಳಬೇಕೆಂದರೆ ಅವನ ಮೀಸೆಯಿಂದಲೇ ಅವನು ಎದ್ದು ಕಾಣುತ್ತಿದ್ದ, ಅದಿಲ್ಲದಿದ್ದರೆ ಯಾರೂ ಅವನ ಕಡೆಗೆ ಗಮನ ನೀಡದಂತಿದ್ದ ಆ ವ್ಯಕ್ತಿ. ಅವನು ತನ್ನ ಕೈಸರ್ ವಿಲ್ಹೆಮ್‌ ಮೀಸೆಯನ್ನು ಬೆರಳಿನಿಂದ ತೀಡಿಕೊಳ್ಳುತ್ತ ನನ್ನ ಮಂಚದ ಬಳಿ ಬಂದ. ಅವನ ಹಿಂದೆಯೇ ಒಂದಿಷ್ಟು ಜನರು ಒಳಬಂದರು. ಸಾದತ್‌ ಹಸನ್ ಮಾಂಟೋನ ಕತೆಗಳನ್ನು ಭಾರತಿ ಬಿ.ವಿ. “ಯಕ್..” ಎನ್ನುವ ಸಂಕಲನದ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕತೆ ನಿಮ್ಮ ಓದಿಗೆ

Read More

ಸಾಸಿವೆ ತಂದವಳ ಅಕ್ಷರಗಳಲ್ಲಿ ಕಂಡ ಜೀವಚೈತನ್ಯ

ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದು‌ನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ, ತಮ್ಮ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ…

Read More

ಅಬ್ದುಲ್ ರಶೀದ್ ಕೃತಿಗೆ ಭಾರತಿ ಬಿ.ವಿ. ಬರೆದ ಮುನ್ನುಡಿ

“ರಶೀದ್ ಬರಹಗಳನ್ನು ಮೊದಲಲ್ಲಿ ಓದುವಾಗ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು ‘ಅದು ಹೇಗೆ ಇವರ ಬದುಕಿನಲ್ಲಿ ನನಗೆ ಅಸಾಧ್ಯವಾದ ಏನೆಲ್ಲ ಆಗುತ್ತದಲ್ಲ’ ಎಂದು. ಅದು ಕೇವಲ ನನ್ನ ಪ್ರಶ್ನೆಯಲ್ಲದೇ ಬೆರಗು ಕೂಡಾ ಆಗಿತ್ತು! ಬದುಕನ್ನು ತುಂಬ ಕಠೋರವಾಗಿ… ಅಂದರೆ ಅಗತ್ಯಕ್ಕಿಂತ ಹೆಚ್ಚು ಕಠೋರವಾಗಿ ಬದುಕುವ ಅಗತ್ಯವಿಲ್ಲ ಮತ್ತು ಸಣ್ಣದೊಂದು ಕಾರುಣ್ಯದ ಹನಿ ಜಗತ್ತಿಗೆ ಚುಮುಕಿಸಲು ಹೆಚ್ಚೇನೂ ಶ್ರಮ ವಹಿಸಬೇಕಿಲ್ಲ ಎಂದು ಅರ್ಥವಾದ ನಂತರ, ಅವರ ಕಷ್ಟಸುಖ ಕೇಳುತ್ತಲೇ ಎದೆಯಲ್ಲಿ ಕಾರುಣ್ಯ ಮೂಡಿ, ತುಸು ‘ಹೆಚ್ಚು ಮನುಷ್ಯಳಾಗುತ್ತಾ’ ಹೋದೆ ಅನ್ನಬಹುದು”
ಕತೆಗಾರ ಅಬ್ದುಲ್ ರಶೀದ್ ಅವರ ‘ಮೈಸೂರು ಪೋಸ್ಟ್’ ಕೃತಿಗೆ  ಭಾರತಿ ಬಿ.ವಿ. ಬರೆದ ಮುನ್ನುಡಿ

Read More

’ಯಕ್!’:ಬಿ.ವಿ.ಭಾರತಿ ಅನುವಾದಿಸಿದ ಸಾದತ್ ಹಸನ್ ಮಾಂಟೋ ಕಥೆ

“ಅವನು ಹಾಸಿಗೆಗೆ ಹಿಂತಿರುಗುವುದರಲ್ಲೇ ನಾನು ಹಾರಿಹೋಗಿ ದೀಪವಾರಿಸಿದೆ. ಆ ಕೂಡಲೇ ಮತ್ತೆ ಗಾಭರಿಗೊಂಡ ಅವನು! ಅಬ್ಬ, ಎಂಥ ತಮಾಷೆ ಎನ್ನುತ್ತೀ ಇಡೀ ರಾತ್ರಿ! ಒಮ್ಮೆ ಕತ್ತಲು, ಮತ್ತೊಮ್ಮೆ ಬೆಳಕು, ಮತ್ತೊಮ್ಮೆ ಬೆಳಕು, ಇದ್ದಕ್ಕಿದ್ದಂತೆ ಕತ್ತಲು…..! ಬೆಳಗಿನ ಜಾವದಲ್ಲಿ ಮೊದಲ ಟ್ರಾಮಿನ ಸದ್ದು ಕಿವಿಗೆ ಬಿದ್ದಿದ್ದೇ ತಡ, ಬೇಗ ಬೇಗ ಬಟ್ಟೆ ಹಾಕಿದವನೇ ಎದ್ದು ಬಿದ್ದು ಓಡಿಹೋದ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ