ಮೌಲ್ಯ ಸ್ವಾಮಿ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ

“ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ.”

Read More