Advertisement

Tag: ರಘುನಾಥ ಚ.ಹ.

ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಘುನಾಥ ಚ.ಹ. ಕತೆ

ಅಪ್ಪನ ನಂಬಿಕೆಗಳು ಬದಲಾಗಿದ್ದರೂ, ನೈತಿಕವಾಗಿ ಅವರು ಕುಸಿದಿದ್ದರೂ, ಅಪ್ಪ ಬ್ರಾಂದಿ ಅಂಗಡಿಯ ಗಲ್ಲಾದ ಮೇಲೆ ಕೂರುವ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಮೋಹನನಿಗೆ ತೀರಾ ಅಸಹನೀಯವಾಗಿ ಕಂಡಿತು. ಬ್ರಾಂದಿ ಅಂಗಡಿಯ ಗುತ್ತಿಗೆ ಹಿಡಿದರೆ ಅಪ್ಪ ಇನ್ನೆಂದೂ ಮೊದಲಿನ ದಾರಿಗೆ ಬರುವುದಿಲ್ಲ ಎನ್ನಿಸಿ, ಅಪ್ಪನ ನಿರ್ಧಾರವನ್ನು ವಿರೋಧಿಸಲು ಮೋಹನ ನಿರ್ಧರಿಸಿದ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ರಘುನಾಥ ಚ.ಹ. ಬರೆದ ಕತೆ “ಕಾಲ ದಾರಿಯಲಿ ಹುಲ್ಲು”

Read More

ಕನ್ನಡ ಪ್ರಬಂಧಲೋಕದ ಹೊಸ ಕಿಟಕಿ

ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ.
ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಮೋಹಕ ಚಿತ್ರಕ ಶಕ್ತಿಯ ʻಪರವಶʼದ ಕತೆಗಳು

ಕುಮಾರ ಬೇಂದ್ರೆ ಅವರ ಕತೆಗಳ ವಿಶೇಷತೆ ಎಂದರೆ ಬಹಳ ಸುಲಭವಾಗಿ ಓದಿಸಿಕೊಳ್ಳುವಂತಹ ಗುಣ. ಓದುಗನಿಗೆ ಸಂವಹನದ ದೃಷ್ಟಿಯಿಂದ ಹೆಚ್ಚು ಸರಾಗವಾಗಿ, ಹೆಚ್ಚು ತೊಂದರೆ ಕೊಡದೇ ಓದಿಸಿಕೊಳ್ಳುವ ಗುಣ ಅವರ ಎಲ್ಲ ಕತೆಗಳಲ್ಲೂ ಇದೆ. ಇದನ್ನು ಒಂದು ಗುಣ ಎಂದೇ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಸರಳತೆ ಎನ್ನುವಂಥದ್ದು ಸುಲಭವಲ್ಲ, ಅದನ್ನು ಎಟಕಿಸಿಕೊಳ್ಳುವುದೂ ಕೂಡ ಸುಲಭವಲ್ಲ. ಸರಳವಾಗಿ ಬರೆಯುವುದು ಮತ್ತು ಸರಳವಾಗಿ ಸಂವಹನ ಮಾಡುವುದು ಯಾವಾಗಲೂ ಒಂದು ಸವಾಲು.
ಕುಮಾರ ಬೇಂದ್ರೆಯವರ “ಪರವಶ” ಕಥಾಸಂಕಲನದ ಕುರಿತು ರಘುನಾಥ ಚ.ಹ. ಅವರ ಮಾತುಗಳು

Read More

ಹೂ ನೋಡಿ ಗಿಡದ ಪರೀಕ್ಷೆ

ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ.
ಆಶಾ ಜಗದೀಶ್‌ ಹೊಸ ಪುಸ್ತಕ “ಕಾಣೆಯಾದವರು” ಪ್ರಬಂಧಗಳ ಸಂಕಲನಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ