ಪ್ರಜಾಪ್ರಭುತ್ವದ ಆಶಯಕ್ಕೆ ಆಸರೆಯಂತಹ ಬರಹ..

ರವೀಂದ್ರ ಭಟ್ಟರು ನಿರೂಪಿಸಿದ ಪ್ರಸಂಗ ಮತ್ತು ಅಂತಿಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯವಿದೆ. ಮಹಾಭಾರತದ ರಾಜಪ್ರಭುತ್ವವು ಜನಪರವಾಗಿರ ಬೇಕೆಂದು ಅಂದಿನ ಶ್ರೀಕೃಷ್ಣ ಬಯಸಿದಂತೆ, ಪ್ರಜಾಪ್ರಭುತ್ವದ ಇಂದಿನ ಜನರು ಆಗ್ರಹಿಸುತ್ತಾರೆ. ಅಂದಿನ ಶ್ರೀಕೃಷ್ಣನ ಅಭಿಮತ ಮತ್ತು ಇಂದಿನ ಜನರ ಆಗ್ರಹವು, ಪ್ರಭುತ್ವವು ಮೌಢ್ಯಾಚರಣೆಗಳನ್ನು ಮೀರಿದ ಜನಹಿತ ಕೆಲಸಗಳಲ್ಲಿ ಪುಣ್ಯವನ್ನು ಗಳಿಸ ಬೇಕೆಂಬ ನೀತಿಪಾಠವನ್ನು ಒಳಗೊಂಡಿದೆ. ಅಂದಿನ ಪ್ರಸಂಗದಲ್ಲಿರುವ ‘ಶ್ರೀಕೃಷ್ಣ’ ಒಂದು ‘ರೂಪಕ’ವಾಗಿ ಇಂದಿನ ಆಶಯವನ್ನೂ ಅಭಿವ್ಯಕ್ತಿಸುವುದು ಗಮನೀಯ.
ರವೀಂದ್ರ ಭಟ್ಟ ಐನಕೈ ಅವರ “ರಾಜಕಾರಣದಲ್ಲಿ ನಿಂಬೆ – ಹಾಗಲ” ಅಂಕಣ ಬರಹಗಳ ಸಂಕಲನಕ್ಕೆ ಬರಗೂರು ರಾಮಚಂದ್ರಪ್ಪ ಬರೆದ ಮುನ್ನುಡಿ

Read More