Advertisement

Tag: ವಿಜಯಶ್ರೀ ಹಾಲಾಡಿ

ಪಪ್ಪುನಾಯಿ ಮತ್ತು ದೆಯ್ಯದ ಚಪ್ಪಲಿ: ವಿಜಯಶ್ರೀ ಹಾಲಾಡಿ ಪ್ರಬಂಧ

ಮಲೆನಾಡು, ಕರಾವಳಿ ಭಾಗದ ಹಳ್ಳಿಯ ಮನೆ ಮನೆಗಳಲ್ಲಿ ನಾಯಿಗಳಿರುವುದು ಕಡ್ಡಾಯ. ಕಾಡು, ಹಾಡಿ, ಗುಡ್ಡ, ಬಯಲುಗಳ ನಡುವೆ ಫರ್ಲಾಂಗುಗಳ ಅಂತರದಲ್ಲಿ ಅವಿತುಕೊಂಡಿರುವ ಮನೆಗಳ ರಕ್ಷಣೆಗೆ, ಜೀವಂತಿಕೆಗೆ ನಾಯಿಗಳು ಅನಿವಾರ್ಯ. ಕಳ್ಳಕಾಕರು, ಜೀವಾದಿಗಳು, ದೆವ್ವ-ಭೂತ-ಪೀಡೆ-ಕುಲೆಗಳನ್ನು ಕೂಡಾ ನಾಯಿಗಳು ದೂರವಿಡುತ್ತವೆಂಬ ನಂಬಿಕೆಯಿದೆ! ಮನುಷ್ಯರ ಕಣ್ಣಿಗೆ ಕಾಣದ ದೆವ್ವ ಭೂತಗಳು ನಾಯಿಗಳಿಗೆ ಕಾಣುತ್ತವಂತೆ, ಇದರಿಂದಾಗಿಯೇ ಅವು ರಾತ್ರಿಯಿಡೀ ಬೊಗಳುವುದಂತೆ! ನಮ್ಮ ಹಳ್ಳಿಯವರ ಈ ತರದ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲವಾದರೂ ಇಂತವುಗಳನ್ನು ಕೇಳುವುದು ರೋಮಾಂಚನಕಾರಿಯಾಗಿತ್ತು.
ವಿಜಯಶ್ರೀ ಹಾಲಾಡಿ ಹೊಸ ಪ್ರಬಂಧ ಸಂಕಲನ “ಕಣ್ಣ ಕಾಡಿದ ಹಾಡು” ಒಂದು ಪ್ರಬಂಧ ನಿಮ್ಮ ಓದಿಗೆ

Read More

ಮಂಜುನಾಯಕ ಚಳ್ಳೂರ ಕಥಾಲೋಕ…

“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ‌‌. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು‌. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಕರುಣಾಳು ಬಾ ಇರುಳೇ

ಈಗ ಹಗಲಿನಲ್ಲಿ ಮತ್ತು ರಾತ್ರಿ ಕೂಡಾ ಜನನಿಬಿಡ ಪೇಟೆಯ ಮಧ್ಯೆ, ಝಗಮಗಿಸುವ ಕಾಂಕ್ರೀಟ್ ರಂಗಸ್ಥಳದಲ್ಲಿ ನಡೆಯುವ ಆಟಗಳು ಅಂಥಾ ತೀವ್ರ ಅನುಭವದಿಂದ ರೈಸುವುದೇ ಇಲ್ಲ. ಕತ್ತಲು ಮತ್ತು ಕಾಡುಮೇಡುಗಳ ಹಿನ್ನೆಲೆಯೇ ಯಕ್ಷಗಾನ, ಭೂತಕೋಲ, ನಾಗಮಂಡಲ ಮುಂತಾದವುಗಳಿಗೆ ಸೊಬಗಿನ ಮುಖವೊಂದನ್ನು ಒದಗಿಸುತ್ತದೆ. ಯಕ್ಷಗಾನಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನ ದಾರಿಯಲ್ಲಿ ಸೂಡಿ ಬೀಸುತ್ತಾ, ಸುತ್ತಲೂ ಇರಬಹುದಾದ ಹಲವು ಜೀವಾದಿಗಳಿಗೆ ಹೆದರಿಸುವಂತೆ (ಅಥವಾ ತಾವೇ ಹೆದರಿ) ಗಟ್ಟಿ ಗಂಟಲಲ್ಲಿ ಹರಟುತ್ತಾ ಹಳ್ಳಿಗರು ನಡೆದುಹೋಗುವ ಹೊತ್ತು ರಸಗಳಿಗೆ. ವಿಜಯಶ್ರೀ ಹಾಲಾಡಿ ಬರಹ

Read More

ಸೀರೆ ಎಂಬ ಮಾಯಾವಿನಿ

ಸೀರೆ ಎಂಬ ಈ ವಿಚಿತ್ರ. ವಿಶಿಷ್ಟ ಉಡುಪು ಯಾಕೆ ಮತ್ತು ಹೇಗೆ ರೂಪು ತಳೆದಿರಬಹುದು ಎಂದು ಯೋಚಿಸುತ್ತ ಹೋದ ಹಾಗೂ ಇದು ಪುರುಷ ಪ್ರಧಾನ ವ್ಯವಸ್ಥೆಯ ರಾಜಕಾರಣದ ಒಂದು ಭಾಗವಾಗಿ ಬೆಳೆದಿದೆ ಅನ್ನಿಸಿದೆ. ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ನಮ್ಮ ದೇಶದ ಕೆಲಭಾಗಗಳ ಮಹಿಳೆಗೆ ಸೀರೆ ಉಡುವುದನ್ನು ಕಡ್ಡಾಯ ಮಾಡಲಾಗಿದೆ! ಕೆಲವು ಪ್ರದೇಶಗಳಲ್ಲಿ ಸೀರೆಯ ಸೆರಗನ್ನು ತಲೆಗೆ ಹೊದೆಯುವುದೂ ಕಡ್ಡಾಯ. ವಿಜಯಶ್ರೀ ಹಾಲಾಡಿ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಪ್ರಾಣಿ ಪ್ರಪಂಚದ ತರ್ಕ ಮೀರಿದ ಕತೆಗಳು

ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಜಿರಳೆಯನ್ನೂ ಹಿಡಿಯಲಾರ! ಪ್ರಾಣಿಪ್ರಪಂಚದ ಲವಲವಿಕೆಯ ಕತೆಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ. 

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ