Advertisement

Tag: ವಿನತೆ ಶರ್ಮಾ

ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು

ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು.  ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

‘ಊಲುರು ಮಾತು’ ಎಂಬ ಹೊಸ ಭಾಷ್ಯ

ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ.  ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿದೆ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನಗಳನ್ನು ಬರೆದಿದ್ದಾರೆ. 

Read More

ಸಾಮಾನ್ಯ ಪ್ರಜೆಯ ಅರ್ಧಸತ್ಯಗಳು

ಯಾವುದೇ ಸರಕಾರ ಬರಲಿ ಅಥವಾ ಇರಲಿ, ಕೋವಿಡ್ ಮಾರಿ ಬರಲಿ ಹೋಗಲಿ, ಯುಕ್ರೇನಿನಲ್ಲಿ ಯುದ್ಧವಾಗುತ್ತಿರಲಿ ಬಿಡಲಿ, ದಿನನಿತ್ಯದ ಸಾಮಾನ್ಯಪ್ರಜೆಯ ಪರಿಸ್ಥಿತಿ ಯಥಾಪ್ರಕಾರ ಅಯೋಮಯವಾಗಿದೆ. ಆಸ್ಟ್ರೇಲಿಯವು ಪ್ರಪಂಚದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದು. ಇಲ್ಲಿನ ದಿನನಿತ್ಯ ಜೀವನದ ಅಂದಾಜು ಖರ್ಚುವೆಚ್ಚವು ಸದಾ ದುಬಾರಿಯಾಗಿಯೇ ಇರುತ್ತದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ವಸತಿ ಸಮಸ್ಯೆ ವಿಪರೀತವಾಗಿದೆ.
ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಕ್ಕಳಾಗದ ಗಂಡಸರ ದುಃಖ, ಫೋರ್ ವೀಲ್ ಡ್ರೈವಿಂಗ್ ಸಾಹಸ ಕ್ರೀಡೆ

ಆಸ್ಟ್ರೇಲಿಯಾದಲ್ಲಿ ಫೋರ್ ವೀಲ್ ಡ್ರೈವಿಂಗ್ ಕ್ಲಬ್ ಎನ್ನುವುದು ಬಹಳ ಹಳೆಯ ಕಲ್ಪನೆ. ಬ್ರಿಟಿಷರೊಡನೆ ಆ ಕಲ್ಪನೆ ಮತ್ತು ಹವ್ಯಾಸ ಈ ದೇಶಕ್ಕೆ ಆಮದಾಗಿ ಬಂದದ್ದು. ಒಂದು ಶತಮಾನಕ್ಕೂ ದೀರ್ಘ ಕಾಲ ಫೋರ್ ವೀಲ್ ಡ್ರೈವಿಂಗ್ ಹವ್ಯಾಸವು ಲಂಗುಲಗಾಮಿಲ್ಲದೆ ಬೇಕಾಬಿಟ್ಟಿ ನಡೆದಿತ್ತು. ಅದಕ್ಕೆ ಕಾನೂನಿನ ಹಿಡಿತವಾಗಲಿ, ಒಂದಷ್ಟು ಚೌಕಟ್ಟಾಗಲಿ ಇಲ್ಲದೇ ಇದ್ದಾಗ, ಪ್ರಕೃತಿಗೆ, ಜೀವಸಂಕುಲಕ್ಕೆ ಆದ ಹಾನಿಗೆ ಲೆಕ್ಕವಿರಲಿಲ್ಲ. -ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಲಸಿಕೆ ಪರ-ವಿರೋಧಗಳ ನಡುವೆ ಹಬ್ಬ, ಮಳೆ, ಗಡಿ ತೆರವು

ಈ ಮಧ್ಯೆ ಒಳ್ಳೆಯ ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ