Advertisement

Tag: ಸ್ಮಿತಾ ರಾಘವೇಂದ್ರ

‘ಹುಲಿಕಡ್ಜಿಳʼ ಕಥಾ ಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

ಇಲ್ಲಿನ ಹೆಚ್ಚಿನ ಕಥೆಗಳು ಮಲೆನಾಡು, ಆಗುಂಬೆ,ತೀರ್ಥಹಳ್ಳಿಯಂತಹ ಗ್ರಾಮಾಂತರ ಪ್ರದೇಶದ ಪರಿಸರದ ಸಂಪೂರ್ಣ ಚಿತ್ರಣವನ್ನು ಓದುಗನಿಗೆ ನೀಡುತ್ತದೆ. ಹೆಣ್ಣು ಹೇಳಿಕೊಳ್ಳದ ಕೆಲವು ಸೂಕ್ಷ್ಮಗಳನ್ನು ಅತಿ ಸೂಕ್ಷ್ಮವಾಗಿ ಕಥೆಯಲ್ಲಿ ಲೇಖಕ ಹರೀಶ್ ದಾಖಲಿಸಿದ್ದಾರೆ. ತಾನು ಹುಟ್ಟಿ ಬೆಳೆದ ಊರು ಮನೆಗಳನ್ನು ಬಿಟ್ಟು, ಇಷ್ಟಕ್ಕೋ, ಅನಿವಾರ್ಯಕ್ಕೋ, ಪಟ್ಟಣ ಸೇರಿಕೊಂಡ ನೂರಾರು ಮನಸ್ಸುಗಳು. ದಾರಿ ಕಾಯುತ್ತ ಹಳ್ಳಿಯಲ್ಲೇ ಉಳಿದ ಹಿರಿ ಜೀವಗಳು. ಇಂತಹ ನಯನಾಜೂಕಿನ ಭಾವಗಳ ಚಿತ್ರಣ ಸೆರೆಹಿಡಿದಿದ್ದಾರೆ.
ಹರೀಶ್‌ ಟಿ.ಜಿ ಬರೆದ ‘ಹುಲಿಕಡ್ಜಿಳ’ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಇತಿಹಾಸದ ಪದರಗಳ ಅವಲೋಕನ..

ಸಾವಿರಾರು ವರ್ಷಗಳನ್ನು ಎಳೆದು ತಂದು ತನ್ನ ಮೂಗಿನ ನೇರದಂತೆ ಇತಿಹಾಸದ ತುಣುಕನ್ನು ಬರೆದ ಮೆಗಾಸ್ತಾನಿಸನ ಇತಿಹಾಸದ ಆಧಾರದಿಂದ ನಾವು ಅಧ್ಯಯನ ಆರಂಭಿಸುತ್ತೇವೆಯೇ ವಿನಹಃ ಮೂಲಕ್ಕೆ ಹೋಗುವುದಿಲ್ಲ. ಸಂಸ್ಕೃತ ಭಾಷೆಯ ವ್ಯಾಕರಣ ಕೊಟ್ಟ ಪತಂಜಲಿ, ವರರುಚಿ, ಪಾಣಿನಿಯ ಮೊದಲಾದವರೆಲ್ಲ ಇದ್ದುದು ಪೂರ್ವದಲ್ಲಿ, ಆದರೆ ಅದ್ಯಾಕೋ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಂಸ್ಕೃತ ಕಣ್ಮರೆಯಾಗಿ ಪ್ರಾಕೃತ ಆಕ್ರಮಿಸಿದ್ದು ಅಂದರೆ ಗೋಜಲು ಗೋಜಲಿನ ಇತಿಹಾಸ ಅಂದಿನಿಂದಲೇ ಆರಂಭವಾಯಿತು ಎಂದು ಸ್ಪಷ್ಟವಾದ ಮಾಹಿತಿ ನೀಡುತ್ತದೆ ಈ ಪುಸ್ತಕ.
ಸದ್ಯೋಜಾತ ಭಟ್ಟ ಬರೆದ ‘ಮಿಹಿರಕುಲಿ’ ಪುಸ್ತಕದ ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಜಯಂತ ಕಾಯ್ಕಿಣಿ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

“ಅದೆಷ್ಟು ಮಾತಿನ ಮಲ್ಲ ! ಮಾತೇ ಮರೆತು ಮುಂಬೈ ಗಲ್ಲಿ ಗಲ್ಲಿ ಸುತ್ತುತ್ತಾನೆ. ಪಿಟ್ಸ್‌ ಬಂದ ವ್ಯಕ್ತಿಯ ಮುಷ್ಟಿಯೊಳಗಿನ ಮುದ್ದೆಯಾದ ಹಾಳೆಯಲ್ಲಿ ಪುಟ್ಟ ಮಗುವಿನ ಪಾದದ ಗುರುತನ್ನು ಪತ್ತೆ ಹಚ್ಚಿ ಆಗುವ ಅನಾಹುತ ತಪ್ಪಿಸುತ್ತಿದ್ದರೆ, ಸುಮ್ಮನೇ ಕಣ್ಣಾಲಿಗಳನ್ನು ತೇವವಾಗುತ್ತದೆ. ಹಾಗೆ ಮುಂಬೈ ಸುತ್ತಿಸಿ ಮತ್ತೆ ಸೀದಾ ನಮ್ಮ ಮಲೆನಾಡಿನ ಸೀಮೆಗೆ ಹಾಜರಾದ ಕಾಯ್ಕಿಣಿಯವರು ಇಡೀ ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿಗಳನ್ನು ಸುತ್ತಿಸುತ್ತ ಕಥೆ ಹೇಳುತ್ತ ಹೋಗುತ್ತಾರೆ.”
ಜಯಂತ ಕಾಯ್ಕಿಣಿ ಕಥಾ ಸಂಕನಲ “ಬಣ್ಣದ ಕಾಲು” ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ