Advertisement

Tag: Akira Kurosawa

ಕಹಿಗಳಿಗೆಗಳು: ಕುರಸೋವ ಆತ್ಮಕತೆಯ ಮತ್ತೊಂದು ಕಂತು

“ಒಟ್ಟಿನಲ್ಲಿ ಸೆನ್ಸಾರ್ ಶಿಪ್ ಬ್ಯೂರೋದ ಡಾಬರ್ ಮನ್ ಗಳು ಅಂದಿನ ಅಧಿಕಾರಶಾಹಿಯ ಕೈಗೊಂಬೆಯಾಗಿದ್ದರು ಎನ್ನುವುದಂತೂ ಸತ್ಯ. ಸಮಯದ ಕೈಗೊಂಬೆಯಾಗಿ ಸ್ವಂತಿಕೆಯಿಲ್ಲದ ಒಬ್ಬ ಅಧಿಕಾರಿಶಾಹಿ ಮನುಷ್ಯನಿಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ. ನಾಜಿ ಯುಗದಲ್ಲಿ ಹಿಟ್ಲರ್ ಹುಚ್ಚುಮನುಷ್ಯ. ಆದರೆ ಅವನ ಹಿಂದಿದ್ದ ಹಿಮ್ಲರ್ ಮತ್ತು ಈಚಮನ್ ನಂತಹವರನ್ನು ನೋಡಿದಾಗ ಅವರ ರಾಕ್ಷಸಿ ಮನೋಭಾವದ ಅರಿವಾಗುತ್ತದೆ….”

Read More

ಹುಟ್ಟುಗುಣ ಸುಟ್ಟರೂ ಹೋಗಲ್ಲ: ಕುರಸೋವ ಆತ್ಮಕತೆಯ ಮತ್ತೊಂದು ಕಂತು.

“ಆ ಸಮಯದಲ್ಲಿ ಸೈನ್ಯದಲ್ಲಿದ್ದವರ ಅಧಿಕಾರದ ದರ್ಪ ಯಾವ ಮಟ್ಟದ್ದೆಂದರೆ ಮಕ್ಕಳು ಅಳಲು ಕೂಡ ಇವರ ಅನುಮತಿ ತೆಗೆದುಕೊಳ್ಳಬೇಕು ಅನ್ನುವ ರೀತಿಯಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ನೇರವಾಗಿ ಕೊಲೊನಿಯಲ್ ಮಬುಚಿಯನ್ನೇ ಎದುರುಹಾಕಿಕೊಂಡಿದ್ದೆ. ಆದೇಶವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿತ್ತು. ಯಮಾ ಸಾನ್ ಮತ್ತು ನಿರ್ಮಾಪಕ ಮೊರಿಟ ನೊಬ್ಯೊಶಿ ನಿಧಾನವಾಗಿ ದೃಶ್ಯವನ್ನು ಕತ್ತರಿಸಿಬಿಡುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವತ್ತಲೇ…”

Read More

ಮರೆಯಲಾಗದ ಮೇಷ್ಟ್ರ ಕತೆ (ಭಾಗ-2): ಕುರಸೋವ ಆತ್ಮಕತೆಯ ಕಂತು

“ಯಮಾ ಸಾನರಿಂದ ಸಂಕಲನ ಕುರಿತು ಬೆಟ್ಟದಷ್ಟು ವಿಷಯಗಳನ್ನು ಕಲಿತೆ. ಆದರೆ ಒಂದು ಮುಖ್ಯವಾದ ಸತ್ಯವೆಂದರೆ ಸಂಕಲನ ಮಾಡುವಾಗ ನಿಮ್ಮದೇ ಕೃತಿಯನ್ನು ನೀವು ವಸ್ತುನಿಷ್ಠವಾಗಿ ನೋಡಬೇಕು. ಕಷ್ಟಪಟ್ಟು ತೆಗೆದ ತಮ್ಮದೇ ಸಿನೆಮಾವನ್ನು ಯಮಾ ಸಾನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಬಿಡುತ್ತಿದ್ದರು. ಅವರು ಸಂಕಲನದ ಕೋಣೆಯೊಳಗೆ ಖುಷಿಯಾಗಿ ಬಂದು “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ. ನೀನು ಈ ದೃಶ್ಯಗಳನ್ನು ಕತ್ತರಿಸು” ಎಂದು ಹೇಳುತ್ತಿದ್ದರು.”

Read More

ಮರೆಯಲಾಗದ ಮೇಷ್ಟ್ರ ಕತೆ: ಕುರಸೋವ ಆತ್ಮಕತೆಯ ಕಂತು

“ಯಮಾಸಾನ್ ಎಂದೂ ಕೋಪಗೊಳ್ಳುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಿಟ್ಟು ಬಂದಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗದು ಸಾಧ್ಯವಿರಲಿಲ್ಲ. ಅವರಿಗೆ ಕೋಪ ಬಂದಿದೆ ಎಂದು ಜನರಿಗೆ ನಾನರ್ಥಮಾಡಿಸುತ್ತಿದ್ದೆ. ಬೇರೆ ಸ್ಟುಡಿಯೋಗಳಿಂದ ಕೆಲಸಕ್ಕೆ ತೆಗೆದುಕೊಂಡಿದ್ದ ಹಲವು ಸ್ಟಾರ್ ಗಳು ಸ್ವ ಕೇಂದ್ರಿತರು ಹಾಗೂ ಅತಿಯಾದ ಆತ್ಮಪ್ರಶಂಸಕರಾಗಿದ್ದರು. ಯಾವಾಗಲೂ ಸೆಟ್ ಗೆ ತಡವಾಗಿ ಬರುತ್ತಿದ್ದರು.”

Read More

ಚಲನಚಿತ್ರ ನಿರ್ದೇಶನ ಕಲಿಕೆಯ ಪಾಠಗಳು: ಕುರಸೋವ ಆತ್ಮಕತೆಯ ಪುಟ

“ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ