ಗಿಣಿಬಿಸ್ಕತ್ತು ಕಾದಂಬರಿಯ ಒಂದೆಸಳು

ನಾವು ಮಕ್ಕಳು ಒಂದು ಕಡೆ ಆಡುತ್ತಿದ್ದೆವು. ಮೋಡ ಕಪ್ಪಾಯಿತು. ಮೀನು ಸಾರಿನ ಸಂಭ್ರಮದ ಮಧ್ಯ ಮಳೆ ಬರುವುದು ಚಿಂತೆಗೀಡು ಮಾಡಿತ್ತು. ಸಂದಿಗೊಂದಿಗಳಲ್ಲಿ, ಮೂಲೆಮುಡುಕುಗಳಲ್ಲಿ ಇದ್ದ ಪುಳ್ಳೆ ಸೌದೆಗಳನ್ನು ಅಜ್ಜಿ ಅದೇನೇನೋ ಗೊಣಗುತ್ತಾ ಎತ್ತಿ ತಂದು ಒಳಗೆ ಹಾಕುತ್ತಿದ್ದಳು. ಅಜ್ಜ ರಾತ್ರಿ ಕತ್ತಲಾದಾಗ ಬೆಳಕು ಮಾಡಲು ಸೀಮೆ ಎಣ್ಣೆ ದೀಪದ ಬತ್ತಿಗಳನ್ನು ಹಿಚುಕಿ ಸರಿಪಡಿಸುತ್ತಿದ್ದ. ಚಿಕ್ಕಪ್ಪ, ಅಪ್ಪ ಎಲ್ಲಿ ಮನೆ ಸೋರುತ್ತದೆಯೋ ಅಲ್ಲಿಗೆ ಕಾತಾಳೆ ಪಟ್ಟೆ, ಅಡಿಕೆ ಪಟ್ಟೆಗಳನ್ನು ತೂರಿಸುತ್ತ ಸೂರನ್ನು ಸರಿಪಡಿಸುತ್ತಿದ್ದರು. ಅಜ್ಜ ಮಾತ್ರ ‘ಈ ಹಾಳಾದ್ದು ಎಲ್ಲೋಯ್ತೋ ಕಾಣೆ… ಹೊತ್ನಂತೆ ಮನೆಗೆ ಬರಬ್ಯಾಡ್ವ’ ಅಂತ ಕೆಂಪಿಯನ್ನು ನೆನಪು ಮಾಡಿಕೊಳ್ಳುತ್ತಿದ್ದನು.
ಆಲೂರು ದೊಡ್ಡನಿಂಗಪ್ಪ ಬರೆದ ‘ಗಿಣಿ ಬಿಸ್ಕತ್ತು’ ಹೊಸ ಕಾದಂಬರಿಯ ಕೆಲ ಪುಟಗಳು ನಿಮ್ಮ ಓದಿಗೆ

Read More