ಬೊಳುವಾರು ಆತ್ಮಕತೆ ‘ಮೋನು ಸ್ಮೃತಿ’ಯ ಪುಟಗಳು

ಆ ದಿನಗಳಲ್ಲಿ ನನ್ನೂರ ನನ್ನ ಓದುಗರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಮುಸ್ಲಿಮೇತರರು. ದುಡ್ಡು ಕೊಟ್ಟು ದಿನಪತ್ರಿಕೆಗಳನ್ನೂ, ವಾರ ಅಥವಾ ಮಾಸ ಪತ್ರಿಕೆ ಗಳನ್ನೂ ತರಿಸಿಕೊಂಡು ಟೀಪಾಯಿಗಳನ್ನು ಚಂದಗಾಣಿಸುತ್ತಿದ್ದವರು ಅವರು ಮಾತ್ರ. ಓದುಗರಲ್ಲಿ ಹೆಚ್ಚಿನವರು ಅಡಿಕೆಭಟ್ಟರುಗಳು. ಹಾಗಾದರೆ, ಅವರೆಲ್ಲರಿಂದ ನನಗೆ ಸಿಗುತ್ತಿದ್ದ ಮೆಚ್ಚುಗೆಗಳೆಲ್ಲವೂ ಮುಸ್ಲಿಮರ ಕಂದಾಚಾರಗಳನ್ನು ಪ್ರಶ್ನಿಸುತ್ತಿರುವುದಕ್ಕೆ ಮಾತ್ರವೆ? ಹಿಂದೂಗಳ ಕಂದಾಚಾರಗಳನ್ನು ಪ್ರಶ್ನಿಸಿದರೆ, ಅವರಿಗೂ ನಾನೊಬ್ಬ ‘ಹರಾಮಿ’ಯಾಗಿ ಕಾಣಿಸಲಾರಂಭಿಸುತ್ತೇನೆಯೆ? ಯಾರಲ್ಲಿ ಕೇಳುವುದು?
ಬೊಳುವಾರು ಮಹಮದ್ ಕುಂಞಿ ಅವರ ಆತ್ಮಕತೆ ‘ಮೋನು ಸ್ಮೃತಿ’ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More