ಅಣ್ಣನೆಂಬ ಅಕ್ಕರೆಯ ಅಪ್ಪ….

ಈಗಿನಂತೆ ಬೀದಿ ದೀಪಗಳು, ಕೈಯಲ್ಲೊಂದು, ಜೇಬಲ್ಲೊಂದು ಟಾರ್ಚು ಇಲ್ಲದ ದಿನಗಳವು. ಅಣ್ಣ ನನ್ನ ಕೈಯನ್ನು ಹಿಡಿದುಕೊಂಡೆ ಮೆಲ್ಲಗೆ ಸಾಗತೊಡಗಿದ. ನನಗೆ ಇದ್ದ ಅತಿ ಮುಖ್ಯ ಭಯವೆಂದರೆ ಹಾವಿನದ್ದು. ಒಂದೆರಡು ದಿನಗಳ ಹಿಂದೆ ಎಮ್ಮೆ ಕಾಯಲು ಹೋದಾಗ ಹನುಮಪ್ಪನ ನಾಲಿನಲ್ಲಿ ನನ್ನ ಕಾಲಿನ ನಡುವೆ ಸರ ಸರನೆ ಹಾದು ಹೋಗಿ ಹೆಡೆ ಎತ್ತಿ ಆಡಿದ್ದ “ನಾಗರಾಜ”ನನ್ನು ನೆನೆದು ನಾನು ಇನ್ನಷ್ಟು ಭಯಭೀತನಾಗಿದ್ದೆ, ಮತ್ತು ಈಗ ಹೆಚ್ಚೇ ಎನ್ನುವಷ್ಟು ಜೋರಾಗಿ ಅಳತೊಡಗಿದೆ. ನನ್ನನ್ನು ಸುಮ್ಮನಾಗಿಸಲು ಹರ ಸಾಹಸ ಪಟ್ಟ ಅಣ್ಣ, ನನ್ನ ಅಳುವಿಗೆ ನೈಜ ಕಾರಣ ತಿಳಿದುಕೊಂಡ.
ಸಾವನ್ ಕೆ ಸಿಂಧನೂರು ಬರಹ

Read More