Advertisement

Tag: Camping

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು – ಭಾಗ ಎರಡು

ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ.
ಡಾ. ವಿನತೆ ಶರ್ಮ ಬರೆಯವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು: ಭಾಗ ಒಂದು

ಈ ಬಾರಿ ನಾವು ಹೂಡಿದ ‘ಅಡಿಗೆಮನೆ’ ಇದ್ದದ್ದು ಮರಗಳ ಅಂಚಿನಲ್ಲಿ. ಈ ಅಂಚಿನ ಆಚೆ ಕಡೆ ನೂರು ಮೀಟರ್ ದೂರದಲ್ಲಿ ನೀರಿಲ್ಲದೆ ಬೇಸಿಗೆಯ ಬಿಸಿಲಿಗೆ ಸೊರಗಿದ್ದ ನದಿಯಿತ್ತು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಂಭವಿಸಿದ ಅಧಿಕ ಮಳೆ-ಜಲ ಪ್ರವಾಹದಲ್ಲಿ ಈ ನದಿ ಉಕ್ಕೇರಿ ಆ ನೂರೂ ಮೀಟರ್ ದೂರವನ್ನಾಕ್ರಮಿಸಿಕೊಂಡು ಈ ಮರಗಳ ಅಂಚಿನ ತನಕ ಬಂದಿತ್ತು ಎನ್ನುವುದು ಅಲ್ಲಿ ಚೆಲ್ಲಾಡಿದ್ದ ಮರಕೊಂಬೆಗಳು, ರೆಂಬೆಗಳಿಂದ ಸ್ಪಷ್ಟವಾಗಿತ್ತು. ನಾವೇನೋ ಖುಷಿಯಿಂದಲೇ ಅಲ್ಲಿ ಅಡಿಗೆಮನೆ ಮತ್ತು ನೆಲದ ಹಾಸುಗಳನ್ನು ಸ್ಥಾಪಿಸಿದ್ದೆವು. ಒಂದೆರೆಡು ದಿನಗಳಲ್ಲಿ ಬಿದ್ದ ಮಳೆಯಿಂದ ನಮ್ಮ ಖುಷಿ ಕಡಿಮೆಯಾಯ್ತು. ನೆಲದ ಹಾಸು ಮಳೆನೀರು, ಮಣ್ಣಿನ ರಾಡಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮತ್ತೊಂದು ಜನಪದವನ್ನು ಗೌರವಿಸುವ ವಿನಯಶೀಲತೆಗೆ ಕಾಯುತ್ತಾ..

ಒಂದು ಕರಕುಶಲ ಮಳಿಗೆಯಲ್ಲಿ ಇರಿಸಿದ್ದ ಗಣೇಶನ ವಿಗ್ರಹಕ್ಕೆ ‘ಬುದ್ಧ’ ಎಂದು ಲೇಬಲ್ ಇತ್ತು. ನಾನು ಮಾಲೀಕಳ ಬಳಿ ಹೋಗಿ ‘ನೋಡಿ, ಅದು ಗಣೇಶನ ಪ್ರತಿಮೆ, ದಯವಿಟ್ಟು ಆ ‘ಬುದ್ಧ’ ಲೇಬಲ್ ತೆಗೆದುಹಾಕಿ’ ಎಂದರೆ ಆಕೆ ಉಡಾಫೆಯಿಂದ ‘ನನ್ನ ಸ್ಟಾಫ್ ಒಬ್ಬಳು ಆ ಲೇಬಲ್ ಹಚ್ಚಿದ್ದು. ನಾಳೆ ಬಂದಾಗ ಅವಳಿಗೆ ಹೇಳುತ್ತೀನಿ’ ಎನ್ನುವುದೇ! ಅಂದರೆ ಬೇರೆ ಸಂಸ್ಕೃತಿ, ಧರ್ಮ, ನಂಬಿಕೆಗಳಿಗೆ ಅಲ್ಲಿ ಕಿಂಚಿತ್ತೂ ಬೆಲೆಯಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸುತ್ತಿದ್ದ ಅಬೊರಿಜಿನಲ್ ಜನ ಈಗ ಯಾಕಿಲ್ಲ ಎನ್ನುವ ನನ್ನ ಪ್ರಶ್ನೆಗೆ ಸ್ವಲ್ಪಮಟ್ಟಿಗೆ ಉತ್ತರ ದೊರಕಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ