Advertisement

Tag: Giridhar Gunjagod

‘ಅವಧೇಶ್ವರಿ’ ನನ್ನ ಸೆಳೆದ ಕಥೆಯೂ…

ಕಥಾನಾಯಕಿಯಾದ ನರ್ಮದಾ ಪುರುಕುತ್ಸಾನಿಯ ಪಾತ್ರ ಅತ್ಯಂತ ಸಶಕ್ತವಾಗಿದೆ. ಕನ್ನಡ ಕಾದಂಬರಿ ಲೋಕದಲ್ಲಿ ಶಕ್ತಿಯುತವಾದ ನಾಯಕಿ ಮುಖ್ಯ ಪಾತ್ರದಲ್ಲಿರುವುದು ಸ್ವಲ್ಪ ಅಪರೂಪವೇ. ಪುರುಕುತ್ಸಾನಿಯ ಪಾತ್ರವನ್ನು ಪುಣೇಕರ್ ಅವರು ಕಟ್ಟಿಕೊಟ್ಟಿರುವ ಬಗೆ ಬಹಳ ಚನ್ನಾಗಿದೆ. ಸುತ್ತಮುತ್ತಲಿನ ರಾಜರಂತೆ ವಿಸ್ತರಣಾ ದಾಹವನ್ನು ಹೊಂದದೇ ತನ್ನ ರಾಜ್ಯವನ್ನು ಇರುವಷ್ಟು ಉಳಿಸಿಕೊಂಡು ಅಲ್ಲೇ ದಕ್ಷವಾಗಿ ಆಡಳಿತವನ್ನು ಮಾಡುತ್ತಾಳೆ. ಓದುವ ಸುಖ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಹಾಯ್‌ ಅಂಗೋಲಾ!

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಕಾಡುವ ಕತೆಗಳ ರೂವಾರಿ….

ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ.

Read More

ಜೋಕು ಮಾಡಲು ಬಳಸುತ್ತಿದ್ದ ಪದದ ನಿಜ ಅರ್ಥ ತಿಳಿಯಿತು

ಮೋಹನ ಸ್ವಾಮಿ ಒಂದು ಕಥಾ ಸಂಕಲನವಾದರೂ ನಿಧಾನವಾಗಿ LGBT ಸಮುದಾಯದೆಡೆಗಿನ ನನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು. ನನ್ನೆದುರು ಆ ಸಮುದಾಯದ ವ್ಯಕ್ತಿಗಳು ಸಿಕ್ಕಾಗ ಮಾಮೂಲಿ ಗಂಡು ಹೆಣ್ಣುಗಳ ಹಾಗೇ ಮಾತನಾಡಲು, ಹರಟೆ ಹೊಡೆಯಲು ಸಾಧ್ಯವಾಯಿತು. ಹಾಗಾದರೆ ನಾನು ಈ ವಿಚಾರಲ್ಲಿ ನನ್ನ ಯೋಚನೆಯನ್ನು ನೂರಕ್ಕೆ ನೂರು ಬದಲಿಸಿಕೊಂಡೆನೇ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲ, ಅಥವಾ ಇಲ್ಲವೆನ್ನಿಸುತ್ತದೆ.
ಓದುವ ಸುಖ ಅಂಕಣದಲ್ಲಿ ವಸುಧೇಂದ್ರರ “ಮೋಹನಸ್ವಾಮಿ” ಕೃತಿಯ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

Read More

ಸಾಸಿವೆ ತಂದವಳ ಅಕ್ಷರಗಳಲ್ಲಿ ಕಂಡ ಜೀವಚೈತನ್ಯ

ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದು‌ನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ, ತಮ್ಮ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ…

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ